ಶಾಹೀದ್‌ ಅಫ್ರಿದಿ 
ಕ್ರಿಕೆಟ್

37 ಎಸೆತಗಳಲ್ಲಿ ಶತಕ ಬಾರಿಸಿದ್ದು 20ನೇ ವಯಸ್ಸಿನಲ್ಲಿ, 16ನೇ ವಯಸ್ಸಿನಲ್ಲಿ ಅಲ್ಲ: ಅಫ್ರಿದಿ

2000ರ ದಶಕದಲ್ಲಿ ಬೌಲರ್‌ಗಳಿಗೆ ಸಿಂಹ ಸ್ವಪ್ನರಾಗಿದ್ದ ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್‌ ಶಾಹೀದ್‌ ಅಫ್ರಿದಿ ಅವರು ತಮ್ಮ ಜನುಮ ದಿನದ ಕುರಿತಂತೆ ಸ್ಪಷ್ಟತೆ ನೀಡಿದ್ದಾರೆ.

ನವದೆಹಲಿ: 2000ರ ದಶಕದಲ್ಲಿ ಬೌಲರ್‌ಗಳಿಗೆ ಸಿಂಹ ಸ್ವಪ್ನರಾಗಿದ್ದ ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್‌ ಶಾಹೀದ್‌ ಅಫ್ರಿದಿ ಅವರು ತಮ್ಮ ಜನುಮ ದಿನದ ಕುರಿತಂತೆ ಸ್ಪಷ್ಟತೆ ನೀಡಿದ್ದಾರೆ.
ಅಧಿಕೃತವಾಗಿ ಶಾಹೀದ್‌ ಅಫ್ರಿದಿ ಜನಿಸಿರುವುದು 1980 ಎಂದು ತೋರಿಸಲಾಗುತ್ತಿದೆ. ಆದರೆ, ತಾವು ಜನಿಸಿರುವುದು 1975ರಲ್ಲಿ ಎಂದು ಮಾಜಿ ಪಾಕಿಸ್ತಾನ ತಂಡದ ನಾಯಕ ತಮ್ಮ ಆತ್ಮ ಚರಿತ್ರೆ ಬರೆದುಕೊಂಡಿದ್ದಾರೆ. ಆದರೆ, ತಿಂಗಳು ಹಾಗೂ ದಿನಾಂಕವನ್ನು ಉಲ್ಲೇಖಿಸಿಲ್ಲ.
1996ರಲ್ಲಿ ನೈರೋಬಿದಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತಗಳಲ್ಲಿ ಶತಕ ಸಿಡಿಸಿದಾಗ ಅಫ್ರಿದಿಗೆ 16 ವರ್ಷ ವಯಸ್ಸಾಗಿತ್ತು. ಆದರೆ, 'ನನಗೆ ಆಗ 19 ವರ್ಷ ವಯಸ್ಸಾಗಿತ್ತು. 16 ಎಂದು ಎಲ್ಲೆಡೆ ಬರೆಯಲಾಗಿತ್ತು.1975ರಲ್ಲಿ  ನಾನು ಜನಿಸಿದ್ದು, ಮಂಡಳಿಯಿಂದ ಆದ ತಪ್ಪಿನಿಂದ ವಯಸ್ಸು ಕಡಿಮೆಯಾಯಿತು ಎಂದು ತಮ್ಮ ಜೀವನ  ಚರಿತ್ರೆ ಪುಸ್ತಕ 'ಗೇಮ್ ಚೇಂಜರ್' ನಲ್ಲಿ ಅಫ್ರಿದಿ ಬರೆದುಕೊಂಡಿದ್ದಾರೆ.
ಮಾಜಿ ಪಾಕಿಸ್ತಾನ ನಾಯಕ 27 ಟೆಸ್ಟ್‌, 398 ಏಕದಿನ ಪಂದ್ಯಗಳು ಹಾಗೂ 99 ಟಿ-20 ಪಂದ್ಯಗಳನ್ನು ಆಡಿದ್ದಾರೆ. 2017ರ ಫ್ರಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಕಾಶ್ಮೀರ ಕಣಿವೆ ರಾಜ್ಯದಲ್ಲಿ ವಾಸಿಸುವವರಿಗೆ ಸೇರಿದ್ದು, ಇದು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಿದಲ್ಲ ಎಂದು ಹೇಳುವ ಮೂಲಕ ಅಫ್ರಿದಿ ಕಳೆದ ಕೆಲವು ದಿನಗಳ ಹಿಂದೆ ಸುದ್ದಿ ಆಗಿದ್ದರು. ಇದೀಗ ತಮ್ಮ ಜನ್ಮ ದಿನಾಂಕದ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ಕಾಶ್ಮೀರ ಹಾಗೂ ಅಲ್ಲಿನ ಜನತೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಕಡ್ಡಾಯವಾಗಿ ಶ್ರಮ ವಹಿಸಬೇಕು ಎದು ಆತ್ಮ ಚರಿತ್ರೆಯಲ್ಲಿ ಅಫ್ರಿದಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT