ಕ್ರಿಕೆಟ್

ಸ್ಪರ್ಧಾತ್ಮಕ ಮೊತ್ತ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ: ರೋಹಿತ್ ಶರ್ಮಾ

Vishwanath S

ನವದೆಹಲಿ: ಬಾಂಗ್ಲಾ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸುವುದರಲ್ಲಿ ತಂಡ ಎಡವಿದೆ ಎಂದು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. 

ಅರುಣ್ ಜೇಟ್ಲಿ ಅಂಗಳದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬಾಂಗ್ಲಾ ಇದೇ ಮೊದಲ ಬಾರಿಗೆ ಭಾರತ ವಿರುದ್ಧ ಟಿ-20 ಪಂದ್ಯ ಗೆದ್ದು ಬೀಗಿತ್ತು. 

ಪಂದ್ಯ ಮುಗಿದ ನಂತರ ಮಾತನಾಡಿದ ರೋಹಿತ್ ಶರ್ಮಾ ಅವರು, ನಾವು ಉತ್ತಮವಾಗಿ ಆಡಿದರೂ ಉತ್ತಮ ರನ್ ಕಲೆಹಾಕುವುದರಲ್ಲಿ ಎಡವಿದ್ದೇವೆ. ಇನ್ನು ಬ್ಯಾಟ್ಸ್ ಮನ್ ಗಳು ಉತ್ತಮ ರನ್ ಕಲೆ ಹಾಕುವುದರಲ್ಲಿ ಸೋತ್ತಿದ್ದಾರೆ ಎಂದರು.

ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 148 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾ ಇನ್ನೂ ಮೂರು ಎಸೆತ ಬಾಕಿ ಇರುವಂತೆ 3 ವಿಕೆಟ್ ಕಳೆದು ಕೊಂಡು 154 ರನ್ ಪೇರಿಸಿ ಗೆಲುವಿನ ನಗೆ ಬೀರಿತು.

SCROLL FOR NEXT