ಕ್ರಿಕೆಟ್

ಗೋವಾ ವಿರುದ್ಧ ಕರ್ನಾಟಕಕ್ಕೆ 35 ರನ್ ಜಯ

Srinivas Rao BV

ವಿಜಯನಗರಂ: ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯ ‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ವಿರುದ್ಧ 35 ರನ್ ಗಳಿಂದ ಜಯ ಗಳಿಸಿದೆ. 

ಪವನ್ ದೇಶ್‌ಪಾಂಡೆ (63 ರನ್, 32 ಎಸೆತಗಳು) ಅವರ ಅತ್ಯಮೂಲ್ಯ ಅರ್ಧ ಶತಕ ಹಾಗೂ ಶ್ರೇಯಸ್ ಗೋಪಾಲ್ (14 ಕ್ಕೆ 3) ಅವರ ಸ್ಪಿನ್ ಮೋಡಿಯ ನೆರವಿನಿಂದ ಕರ್ನಾಟಕ ತಂಡ ಜಯ ಗಳಿಸಲು ಸಾಧ್ಯವಾಯಿತು. 

ಇದರೊಂದಿಗೆ  20 ಅಂಕಗಳೊಂದಿಗೆ ‘ಎ’ ಗುಂಪು ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು. ಇಲ್ಲಿನ ಡಾ. ಪಿ.ವಿ.ಜಿ ರಾಜು ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, ನಿಗದಿತ 20 ಓವರ್ ಗಳಿಗೆ 9 ವಿಕೆಟ್ ನಷ್ಟಕ್ಕೆ 172 ರನ್ ದಾಖಲಿಸಿತು. 

ಬಳಿಕ ಗುರಿ ಹಿಂಬಾಲಿಸಿದ ಗೋವಾ 19.3 ಓವರ್ ಗಳಿಗೆ 137 ರನ್ ಗಳಿಗೆ ಆಲೌಟ್ ಆಯಿತು. ಕರ್ನಾಟಕ ನೀಡಿದ್ದ ಸ್ಪರ್ಧಾತ್ಮಕ ಗುರಿ ಹಿಂಬಾಲಿಸಿದ ಗೋವಾ ತಂಡ ಮೊದಲನೇ ವಿಕೆಟ್ ಬೇಗ ಕಳೆದುಕೊಂಡಿತು. ಆದರೂ. ಆರಂಭಿಕ ಬ್ಯಾಟ್ಸ್‌‌ಮನ್ ಆದಿತ್ಯ ಕೌಶಿಕ್ ಅವರು ಅತ್ಯುತ್ತಮ ಪ್ರದರ್ಶನ ತೋರಿದರು. 43 ಎಸೆತಗಳಿಗೆ 48 ರನ್ ಗಳಿಸಿದರು. ಇವರ ಜತೆ ಮಲ್ಲಿಕ್ ಸಾಬ್ ಸಿರೂರ್ 13 ಎಸೆತಗಳಿಗೆ 27 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಪ್ರಭು ದೇಸಾಯಿ 26 ಎಸೆತಗಳಿಗೆ 28 ರನ್ ಗಳಿಸಿದರು. 

SCROLL FOR NEXT