ಕ್ರಿಕೆಟ್

ಕ್ವಾರ್ಟರ್ ಫೈನಲ್ಸ್ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ, ತಂಡ ಸೇರಿದ ಮನೀಷ್, ಕರುಣ್ ನಾಯರ್

Srinivasamurthy VN

ಬೆಂಗಳೂರು: ಫೆ.20 ರಿಂದ ಜಮ್ಮು ಕಾಶ್ಮೀರದಲ್ಲಿ ಜಮ್ಮು ವಿರುದ್ಧ ನಡೆಯಲಿರುವ ರಣಜಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಕರುಣ್ ನಾಯರ್ ಅವರಿಗೆ ತಂಡದ ಚುಕ್ಕಾಣಿ ನೀಡಲಾಗಿದೆ.

ನ್ಯೂಜಿಲೆಂಡ್ ಪ್ರವಾಸದಲ್ಲಿ ಸೊಗಸಾದ ಪ್ರದರ್ಶನ ನೀಡಿದ ಮನೀಷ್ ಪಾಂಡೆ, ಕರುಣ್ ನಾಯರ್ ತಂಡ ಸೇರಿಕೊಂಡಿದ್ದಾರೆ. ಇವರ ಆಗಮನದಿಂದ ರಾಜ್ಯ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಗೆ ಬಲ ಬಂದಂತಾಗಿದೆ. ವಿ.ಕೌಶಿಕ, ಪ್ರವೀಣ್ ದುಬೆ, ಡಿ.ನಿಶ್ಚಲ್ ಅವರು ಸ್ಥಾನ ವಂಚಿರಾಗಿದ್ದಾರೆ. ಪ್ರತೀಕ್ ಜೈನ್, ಆಲ್ ರೌಂಡರ್ ಜೆ.ಸುಚಿತ್ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ನಡುವಣ ಕ್ವಾರ್ಟರ್ ಫೈನಲ್ ಪಂದ್ಯ ಗಾಂಧಿ ಮೆಮೋರಿಯಲ್ ಕಾಲೇಜ್ ಮೈದಾನ, ಜಮ್ಮುವಿನಲ್ಲಿ ನಡೆಯಲಿದೆ.

SCROLL FOR NEXT