ಮುಂಬೈ: ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳುವ ಒಂದು ವಾರದ ಮುನ್ನವೇ ಮುಂಬೈ ತಂಡದ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಗಾಯದ ಭೀತಿಗೆ ಸಿಲುಕಿದ್ದಾರೆ.
ಶುಕ್ರವಾರ ಕರ್ನಾಟಕ ವಿರುದ್ಧದ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದ ಮೊದಲನೇ ದಿನಫೀಲ್ಡಿಂಗ್ ಮಾಡುವಾಗ ಓವರ್ ಥ್ರೋ ಚೆಂಡನ್ನು ತಡೆಯುವ ವೇಳೆ ಪೃಥ್ವಿ ಶಾ ಭುಜದಲ್ಲಿ ನೋವು ಕಾಣಿಸಿಕೊಂಡಿತು. ತಕ್ಷಣ ಅವರು ಅಂಗಳ ತೊರೆದರು.
ಪೃಥ್ವಿ ಶಾ ಮೇಲ್ನೋಟಕ್ಕೆ ಚೆನ್ನಾಗಿಯೇ ಇದ್ದಾರೆ. ಆದರೆ, ಅಂಗಳದಲ್ಲಿ ಅವರಲ್ಲಿ ನೋವು ಕಾಣಿಸಿತ್ತು. ಇದೀಗ ಅವರು ಚೆನ್ನಾಗಿ ಇದ್ದಾರೆ. ಫಿಜಿಯೋ ಭೇಟಿಯಾದ ಬಳಿಕ ಇದರ ಬಗ್ಗೆ ಏನೆಂದು ಸ್ಪಷ್ಟಪಡಿಸಿತ್ತೇವೆ ಎಂದು ಮುಂಬೈ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಹೇಳಿದ್ದಾರೆ.