ಇರ್ಫಾನ್ ಪಠಾಣ್ 
ಕ್ರಿಕೆಟ್

ವೇಗದ ಬೌಲರ್‌ಗಳು ಫಾರ್ಮ್ ಗೆ ಮರಳುವ ಮುನ್ನ ಹೆಚ್ಚು ಜಾಗೃತರಾಗಬೇಕು: ಇರ್ಫಾನ್ ಪಠಾಣ್

ಕೊರೋನಾವೈರಸ್ ಲಾಕ್ ಡೌನ್ ನಂತರ ವೇಗದ ಬೌಲರ್‌ಗಳು ಅಂಕಣಕ್ಕೆ ಆಗಮಿಸಿದಾಗ ಮತ್ತೆ ಲಯಕ್ಕೆ ಬರಲು ಕನಿಷ್ಠ ನಾಲ್ಕರಿಂದ ಆರು ವಾರಗಳು ಬೇಕಾಗುತ್ತದೆ ಎಂದು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾವೈರಸ್ ಲಾಕ್ ಡೌನ್ ನಂತರ ವೇಗದ ಬೌಲರ್‌ಗಳು ಅಂಕಣಕ್ಕೆ ಆಗಮಿಸಿದಾಗ ಮತ್ತೆ ಲಯಕ್ಕೆ ಬರಲು ಕನಿಷ್ಠ ನಾಲ್ಕರಿಂದ ಆರು ವಾರಗಳು ಬೇಕಾಗುತ್ತದೆ ಎಂದು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಆಗಿದ್ದರಿಂದ ಭಾರತದ ಹೆಚ್ಚಿನ ಕ್ರಿಕೆಟಿಗರಿಗೆ ಮಾರ್ಚ್‌ನಿಂದ ಅಭ್ಯಾಸ ನಡೆಸಲಾಗಿಲ್ಲ. ವೇಗಿ ಶಾರ್ದೂಲ್  ಠಾಕೂರ್ ಕಳೆದ ತಿಂಗಳು ಮಹಾರಾಷ್ಟ್ರದ ಬೋಯಿಸಾರ್‌ನಲ್ಲಿ ಮೇ ತಿಂಗಳಲ್ಲಿ ತರಬೇತಿಯನ್ನು ಪುನರಾರಂಭಿಸಿದರೆ, ರಿಷಭ್ ಪಂತ್, ಸುರೇಶ್ ರೈನಾ ಕೂಡ ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ  ತಮ್ಮ ಅಭ್ಯಾಸ ನಡೆಸಲು ಪ್ರಾರಂಭಿಸಿದ್ದಾರೆ.

ಚೇತೇಶ್ವರ ಪೂಜಾರ, ಉಮೇಶ್ ಯಾದವ್, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಕೂಡ ತರಬೇತಿಯನ್ನು ಪುನರಾರಂಭಿಸಿದ್ದಾರೆ. "ನಿಜ ಹೇಳಬೇಕೆಂದರೆ, ವೇಗದ ಬೌಲರ್‌ಗಳ ಬಗ್ಗೆ ನನಗೆ ನಿಜಕ್ಕೂ ಆತಂಕವಿದೆ" ಭಾರತಕ್ಕಾಗಿ 29 ಟೆಸ್ಟ್ ಮತ್ತು 120 ಏಕದಿನ ಪಂದ್ಯಗಳನ್ನು ಆಡಿದ ಪಠಾಣ್ ಹೇಳಿದ್ದಾರೆ.

ವೇಗದ ಬೌಲರ್ ಗಳು ಮತ್ತೆ ಫಾರ್ಮ್ ಗೆ ಬರಲು 4-6 ವಾರಗಳು ಬೇಕಾಗಬಹುದು. ಇದು ಕಠಿಣ ಕೆಲಸ ಮತ್ತು ಅವರು 140-150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದವರಾದಲ್ಲಿ ಒನ್ ಟೈಂ ನಲ್ಲಿ ಒಂದು ಚೆಂಡನ್ನು ಬೌಲ್ ಮಾಡಲು ಸುಮಾರು 25 ಗಜಗಳಷ್ಟು ಓಡಿ ನಂತರ ಬೌಲ್ ಮಾಡಬೇಕಾಗುತ್ತದೆ. ದೇಹದ ಮೇಲಾದ ಗಾಯದ ನಿರ್ವಹಣೆ ಕೂಡ ಮುಖ್ಯವಾಗಿರುತ್ತದೆ ಏಕೆಂದರೆ ಯಾವುದೇ ವೇಗದ ಬೌಲರ್ ಮತ್ತೆ ಲಯಕ್ಕೆ ಬರಲು  ಇದು ಅಗತ್ಯವೆಂದು ಭಾವಿಸುತ್ತೇನೆ,  ಹಾಗಾಗಿ  ಇದು ಕನಿಷ್ಠ 4-6 ವಾರಗಳನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ವೇಗದ ಬೌಲರ್‌ಗಳು ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು ಎಂದು ನಾನು  ಹೇಳುತ್ತೇನೆ. ಸ್ಪಿನ್ನರ್‌ಗಳು ಅಥವಾ ಬ್ಯಾಟ್ಸ್‌ಮನ್‌ಗಳಿಗಿಂತಲೂ ಇವರ ಮೇಲೆ ಹೆಚ್ಚಿನ ಒತ್ತಡವಿರಲಿದೆ" ಅವರು ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT