ಟೀಮ್‌ ಇಂಡಿಯಾ ಹೊಸ ಜೆರ್ಸಿ (ಔಟ್‌ಲುಕ್‌ ಚಿತ್ರ) 
ಕ್ರಿಕೆಟ್

ಆಸ್ಟ್ರೇಲಿಯಾದಲ್ಲಿ ಟೀಮ್‌ ಇಂಡಿಯಾ ಆಟಗಾರರಿಗೆ ಹೊಸ ಜೆರ್ಸಿ

ಐಪಿಎಲ್ ಬೆನ್ನಲ್ಲೇ ಆಯೋಜನೆಯಾಗಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧವಾಗಿರುವ ಟೀಂ ಇಂಡಿಯಾ ಹೊಸ ಮಾದರಿಯ ಜೆರ್ಸಿ ತೊಟ್ಟು ಆಟವಾಡಲಿದೆ.

ನವದೆಹಲಿ: ಐಪಿಎಲ್ ಬೆನ್ನಲ್ಲೇ ಆಯೋಜನೆಯಾಗಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧವಾಗಿರುವ ಟೀಂ ಇಂಡಿಯಾ ಹೊಸ ಮಾದರಿಯ ಜೆರ್ಸಿ ತೊಟ್ಟು ಆಟವಾಡಲಿದೆ.

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಂಗಳವಾರ ಮುಂಬೈ ಇಂಡಿಯನ್ಸ್ ಚಾಂಪಿಯನ್‌ ಪಟ್ಟ ಅಲಂಕತರಿಸೊದ ಬಳಿಕ ಮುಕ್ತಾಯವಾಗಿದೆ. ಇದೀಗ ಕ್ರಿಕೆಟ್‌ ಪಂಡಿತರ ಹಾಗೂ ಅಭಿಮಾನಿಗಳ ಚಿತ್ತ ಭಾರತದ ಆಸ್ಟ್ರೇಲಿಯಾ ಪ್ರವಾಸದ ಮೇಲೆ  ತಿರುಗಿದೆ. ಇದು ಟೀಮ್‌ ಇಂಡಿಯಾದ ಪೂರ್ಣ ಪ್ರಮಾಣದ ಪ್ರವಾಸವಾಗಿದೆ. 

ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಭಾರತ ಪ್ರವಾಸ ಆರಂಭವಾಗಲಿದೆ. ನ.27 ಮತ್ತು 29 ರಂದು ಮೊದಲ ಎರಡು ಪಂದ್ಯಗಳು ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜರುಗಲಿದೆ. ಮೂರನೇ ಹಾಗೂ ಮೊದಲ ಟಿ20 ಪಂದ್ಯ ಮನುಕಾ ಓವಲ್‌ ಅಂಗಳದಲ್ಲಿ ನಡೆಯಲಿದೆ.  ನಂತರ, ಎರಡು ಹಾಗೂ ಮೂರನೇ ಟಿ20 ಪಂದ್ಯಗಳಾಡಲು ಸಿಡ್ನಿಗೆ ವಾಪಸ್‌ ಆಗಲಿವೆ. 

ಡಿಸೆಂಬರ್‌ 17 ರಿಂದ 21ರವರೆಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಡಿಲೇಡ್ ಓವಲ್‌ನಲ್ಲಿ ಮೊದಲನೇ ಫಿಂಕ್‌ ಬಾಲ್‌ ಟೆಸ್ಟ್ ನಡೆಯಲಿದೆ. ನಂತರ ಬಾಕ್ಸಿಂಗ್‌ ಟೆಸ್ಟ್‌ ಮೆಲ್ಬೋರ್ನ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಒಂದು ವೇಳೆ ಕೋವಿಡ್‌-19 ನಿಂದಾಗಿ ಎಂಸಿಸಿ ಅಂಗಳ  ಲಭ್ಯವಾಗದೇ ಇದ್ದಲ್ಲಿ ಅಡಿಲೇಡ್‌ ಓವಲ್‌ ಎರಡನೇ ಟೆಸ್ಟ್‌ ಆಯೋಜಿಸಲಾಗುವುದು. ಇನ್ನುಳಿದ ಎರಡು ಪಂದ್ಯಗಳನ್ನು ಕ್ರಮಮವಾಗಿ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣ ಹಾಗೂ ಬ್ರಿಸ್ಬೇನ್‌ನಲ್ಲಿ ಆಯೋಜಿಸಲಾಗಿದೆ. 

ಆಸ್ಟ್ರೇಲಿಯಾದಲ್ಲಿ ಟೀಮ್‌ ಇಂಡಿಯಾ ಆಟಗಾರರು ಸೀಮಿತ ಓವರ್‌ಗಳ ಸರಣಿಯಲ್ಲಿ ನೂತನ ಜೆರ್ಸಿಯನ್ನು ಧರಿಸಲಿದ್ದಾರೆ. 70ರ ದಶಕದ ಜೆರ್ಸಿಯಿಂದ ಸ್ಪೂರ್ತಿ ಪಡೆದು ನೂತನ ಜೆರ್ಸಿ ತಯಾರಿಸಲಾಗಿದೆ. ಅಲ್ಲದೆ, ಆಟಗಾರರಿಗೆ ಹೊಸ ಕಿಟ್‌ಗಳನ್ನು ನೀಡಲಾಗುತ್ತಿದೆ. ಹೊಸ ಕಿಟ್‌ಗಳು  ನೇವಿ ಬ್ಲೂ ಬಣ್ಣವನ್ನು ಹೊಂದಿದೆ ಎಂದು ಔಟ್‌ಲುಕ್‌ ವರದಿ ಮಾಡಿದೆ. ಎಂಪಿಎಲ್‌ ಸ್ಫೋರ್ಟ್ಸ್‌ ಇದೀಗ ಭಾರತ ತಂಡದ ಕಿಟ್‌ ಹಾಗೂ ಜೆರ್ಸಿ ಪ್ರಾಯೋಜಕತ್ವ ವಹಿಸಿಕೊಂಡಿದೆ. ಮುಂದಿನ ಮೂರು ವರ್ಷಗಳಿಗೆ ಎಂಪಿಎಲ್‌ 120 ಕೋಟಿ ರೂ.ಗಳಿಗೆ ಬಿಸಿಸಿಐ ಜತೆ ಒಪ್ಪಂದ  ಮಾಡಿಕೊಂಡಿದೆ. ಇದಕ್ಕೂ ಮೊದಲು ನೈಕಿ ಬಿಸಿಸಿಐಗೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ಕುಸಿತ ದುರಂತ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕ ಅಂದರ್; ಐವರು ಅಧಿಕಾರಿಗಳ ಅಮಾನತು!

'ಇಸ್ರೋ ಖಾಸಗೀಕರಣವಾಗುತ್ತಿಲ್ಲ, ನಾವು ನೌಕರರೊಂದಿಗೆ ಮಾತನಾಡುತ್ತೇವೆ': ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ

ಭಾರತದಲ್ಲಿ ಶೀಘ್ರದಲ್ಲೇ ಗಂಟೆಗೆ 110 ಕಿ.ಮೀ ವೇಗದಲ್ಲಿ ಹೈಡ್ರೋಜನ್ ರೈಲುಗಳ ಕಾರ್ಯಾಚರಣೆ: ರೈಲ್ವೆ ಸುಳಿವು

ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ 'ಸುಪ್ರೀಂ' ತೀರ್ಪಿಗೆ ವಿರುದ್ಧ: ನಿಜವಾದ ಫಲಾನುಭವಿಗಳು ಯಾರು? CMಗೆ ದೇವೇಗೌಡ ಪತ್ರ!

'ಕೇವಲ ಸಹಕಾರವಲ್ಲ, ಭವಿಷ್ಯವನ್ನೇ ಒಟ್ಟಿಗೆ ರೂಪಿಸುತ್ತಿದ್ದೇವೆ': ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಜಂಟಿ ಹೆಜ್ಜೆ, ರಾಯಭಾರಿ Sergio Gor ಹೇಳಿದ್ದೇನು?