ಧೋನಿ-ಸುರೇಶ್ ರೈನಾ 
ಕ್ರಿಕೆಟ್

ರೈನಾ, ಭಜ್ಜಿ ಅನುಪಸ್ಥಿತಿ ಕಾಡಲಿದ್ದು, ಧೋನಿ ಒತ್ತಡವನ್ನು ನಿಭಾಯಿಸಬಲ್ಲರು: ಶ್ರೀಕಾಂತ್

ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಸುರೇಶ್ ರೈನಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದ್ದು, ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಒತ್ತಡವನ್ನು ನಿಭಾಯಿಸಲಿದ್ದು ಮತ್ತು ಚೆನ್ನೈ ಅನ್ನು ಮತ್ತೊಮ್ಮೆ ಪ್ಲೇಆಫ್‌ಗೆ ಕರೆದೊಯ್ಯಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಸುರೇಶ್ ರೈನಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದ್ದು, ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಒತ್ತಡವನ್ನು ನಿಭಾಯಿಸಲಿದ್ದು ಮತ್ತು ಚೆನ್ನೈ ಅನ್ನು ಮತ್ತೊಮ್ಮೆ ಪ್ಲೇಆಫ್‌ಗೆ ಕರೆದೊಯ್ಯಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.

ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ರೈನಾ ಮನೆಗೆ ಮರಳಿದರು. ಕೆಲವು ದಿನಗಳ ನಂತರ, ತಂಡದ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ವೈಯಕ್ತಿಕ ಕಾರಣಗಳಿಂದ ಐಪಿಎಲ್ ನಿಂದ ಹಿಂದೆ ಸರಿಯಲು ನಿರ್ಧರಿಸಿದರು. ರೈನಾ ತಂಡಕ್ಕೆ ಸಾಕಷ್ಟು ನೆರವಾಗುತ್ತಿದ್ದರು. ಇವರ ಅನುಪಸ್ಥಿತಿ ತಂಡಕ್ಕೆ ಕೊಂಚ ಕಾಡಲಿದೆ ಎಂದು ಶ್ರೀಕಾಂತ್ ನಂಬಿದ್ದಾರೆ.

ಸಿಎಸ್‌ಕೆಗೆ ಇದು ಎರಡು ದೊಡ್ಡ ಹೊಡೆತಗಳು. ಇಂತಹ ದೊಡ್ಡ ಹೊಡೆತದ ತಂಡ ಈಗ ಧೋನಿಯ ಕೈಯಲ್ಲಿದೆ. ಅವರು ಅದನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಅವರು ಸಂದರ್ಭಗಳನ್ನು ಚೆನ್ನಾಗಿ ನೋಡಿದ್ದಾರೆ. ಎಂತಹ ಪರಿಸ್ಥಿತಿಯಲ್ಲಿಯೂ ಅವರು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಶ್ರೀಕಾಂತ್ ಹೇಳಿದರು.

ಸಿಎಸ್‌ಕೆ-ಯುಎಇಗೆ ಇಳಿದಾಗಿನಿಂದಲೂ ಕಷ್ಟದ ಸಮಯಗಳನ್ನು ಎದುರಿಸಿದೆ. ಇದರ ನಡುವೆ ಇಬ್ಬರು ಹಿರಿಯ ಆಟಗಾರರು ತಂಡದಿಂದ ಹೊರ ಬಂದಿದ್ದರು. ಇದೇ ವೇಳೆ ಒಂದೆರಡು ಆಟಗಾರರು ಮತ್ತು 13 ಸಹಾಯಕ ಸಿಬ್ಬಂದಿಗಳು ಕೊರೋನಾವೈರಸ್ ಗೆ ತುತ್ತಾಗಿದ್ದರು. ಈ ಎಲ್ಲಾ ಹೊಡೆತಗಳಿಂದ ತಂಡ ಸದ್ಯ ಹೊರಬಂದಿದೆ. ಧೋನಿ ನೇತೃತ್ವದ ತಂಡವು ಸೆಪ್ಟೆಂಬರ್19 ರಂದು ಟೂರ್ನಿಯ ಉದ್ಘಾಟನೆಯ ಪಂದ್ಯವಾಡಲಿದೆ.

ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಬದಲಿ ಆಟಗಾರರನ್ನು ಇನ್ನೂ ಘೋಷಿಸಲಾಗಿಲ್ಲ. 53 ದಿನಗಳ ಪಂದ್ಯಾವಳಿಯನ್ನು ಅಬುಧಾಬಿ, ಶಾರ್ಜಾ ಮತ್ತು ದುಬೈ ಎಂಬ ಮೂರು ನಗರಗಳಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT