ಕ್ರಿಕೆಟ್

ಬಿಸಿಸಿಐ ತೀರ್ಪುಗಾರ ಪ್ರಶಾಂತ್‌ ಮಹಾಪಾತ್ರ ಸಹ ಕೊರೋನಾಗೆ ಬಲಿ

Vishwanath S

ಭುವನೇಶ್ವರ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ( ಬಿಸಿಸಿಐ)ಯ ತೀರ್ಪುಗಾರ, ಒಡಿಶಾ ರಣಜಿ ತಂಡದ ಮಾಜಿ ನಾಯಕ, ಕ್ರಿಕೆಟರ್‌ ಪ್ರಶಾಂತ್ ಮಹಾಪಾತ್ರ ಕೋವಿಡ್‌ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುವಾಗಲೇ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

ಪ್ರಶಾಂತ್ ಮಹಾಪಾತ್ರ ಅವರಿಗೆ 47 ವರ್ಷ ವಯಸ್ಸಾಗಿತ್ತು. ಕೋವಿಡ್‌ ಸೋಂಕು ದೃಢಪಟ್ಟಿದ್ದ ಪ್ರಶಾಂತ್‌ ಮಹಾಪಾತ್ರ ಅವರು ಹಿರಿಯ ಸಹೋದರ ಜಸಬಂತ್‌ ಹಾಗೂ ತಂದೆ ಸುಪ್ರಸಿದ್ದ ಶಿಲ್ಪಿ ರಘುನಾಥ ಮಹಾಪಾತ್ರ ಅವರೊಂದಿಗೆ ಕಳೆದ ಏಪ್ರಿಲ್‌ 22ರಂದು ಇಲ್ಲಿನ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.  

ರಾಜ್ಯಸಭೆಯ ನಾಮಕರಣ ಸದಸ್ಯರೂ ಆಗಿದ್ದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕೃತ ರಘುನಾಥ್‌ ಮಹಾಪಾತ್ರ ಮೇ 9 ರಂದು ಏಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

SCROLL FOR NEXT