ಕೊಹ್ಲಿ-ಪಾಕ್ ಆಟಗಾರರು 
ಕ್ರಿಕೆಟ್

T20 WC: ಪಾಕ್ ವಿರುದ್ಧದ ಹೀನಾಯ ಸೋಲಿನ ನಂತರ ಟೀಂ ಇಂಡಿಯಾ ನಡೆಗೆ ಐಸಿಸಿ ಶ್ಲಾಘನೆ, ವಿಡಿಯೋ

ಹೆಚ್ಚಿನ ಜನರು ಈ ದೃಶ್ಯಗಳನ್ನು ನೋಡಬೇಕು, ಭಾರತ- ಪಾಕಿಸ್ತಾನ ಕ್ರಿಕೆಟ್‌ ಅಸಲಿ ಕಥೆ ಇದು. ಕ್ರಿಕೆಟ್‌ ಮೈದಾನದ ಹೊರಗಿನ ನಿರೀಕ್ಷೆಗಳು, ಸೃಷ್ಟಿಸಲಾಗಿರುವ ಹೈಪ್‌ ಗೆ ಇದು ಸಂಪೂರ್ಣ ಭಿನ್ನವಾಗಿದೆ ಎಂಬುದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹಂಚಿಕೊಂಡ ವೀಡಿಯೊದಲ್ಲಿ ಕೇಳಿಬರುವ ಮಾತುಗಳು ನಿಜ. 

ದುಬೈ: ಹೆಚ್ಚಿನ ಜನರು ಈ ದೃಶ್ಯಗಳನ್ನು ನೋಡಬೇಕು, ಭಾರತ- ಪಾಕಿಸ್ತಾನ ಕ್ರಿಕೆಟ್‌ ಅಸಲಿ ಕಥೆ ಇದು. ಕ್ರಿಕೆಟ್‌ ಮೈದಾನದ ಹೊರಗಿನ ನಿರೀಕ್ಷೆಗಳು, ಸೃಷ್ಟಿಸಲಾಗಿರುವ ಹೈಪ್‌ ಗೆ ಇದು ಸಂಪೂರ್ಣ ಭಿನ್ನವಾಗಿದೆ ಎಂಬುದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹಂಚಿಕೊಂಡ ವೀಡಿಯೊದಲ್ಲಿ ಕೇಳಿಬರುವ ಮಾತುಗಳು ನಿಜ.

ಭಾರತ-ಪಾಕಿಸ್ತಾನ ಪಂದ್ಯ ಎಂದರೆ ಭಾರೀ ನಿರೀಕ್ಷೆಗಳು. ಭಾವೋದ್ವೇಗಗಳು. ಆದರೆ ಮೈದಾನದಲ್ಲಿರುವ ಎಲ್ಲರೂ ‘ಒಂದೇ’ಎಲ್ಲರೂ ಕ್ರಿಕೆಟಿಗರು. ಎದುರಾಳಿ ತಂಡವನ್ನು ಅಭಿನಂದಿಸಬಲ್ಲ ಕ್ರೀಡಾ ಮನೋಭಾವ ಪ್ರದರ್ಶಿಸುವ ಗುಣ ಇರಬೇಕು. ಆ ಸ್ಪೂರ್ತಿಯನ್ನು ಟೀಂ ಇಂಡಿಯಾ  ಪ್ರದರ್ಶಿಸಿದೆ.

ಟಿ20 ವಿಶ್ವಕಪ್ ಪಂದ್ಯಾವಳಿಯ ಭಾಗವಾಗಿ. ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಭಾರತದ ವಿರುದ್ಧ 10 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಇತಿಹಾಸ ಬದಲಿಸಿದೆ. ಇದರಿಂದ ಟೀಂ ಇಂಡಿಯಾ ಅಭಿಮಾನಿಗಳು ತೀವ್ರ ನಿರಾಶೆಗೊಂಡರು. ಹಲವರಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಆದರೆ... ಪಂದ್ಯದ ನಂತರ ಮೈದಾನದಲ್ಲಿನ ಕೆಲವು ದೃಶ್ಯಗಳು ‘ಕ್ರೀಡಾಭಿಮಾನಿ’ಗಳನ್ನು ಆಕರ್ಷಿಸಿದವು. ಪಾಕ್‌ ಆಟಗಾರರಾದ ಇಮಾದ್ ವಾಸಿಂ, ಶೋಯೆಬ್ ಮಲಿಕ್ ಸೇರಿದಂತೆ ಹಲವರು ಟೀಮ್ ಇಂಡಿಯಾ ಮಾರ್ಗದರ್ಶಕ ಎಂಎಸ್ ಧೋನಿಯೊಂದಿಗೆ ಸ್ವಲ್ಪ ಸಮಯ ಮಾತುಕತೆ ನಡೆಸಿದರು. ಮಿಸ್ಟರ್‌ ಕೂಲ್ ಕಡೆಯಿಂದ ಸಲಹೆ, ಸೂಚನೆ ಪಡೆದುಕೊಳ್ಳಲು ಉತ್ಸುಕತೆ ತೋರಿದರು.

ಇನ್ನೂ ಪಾಕ್ ನಾಯಕ ಬಾಬರ್ ಅಜಮ್  ಆಗಮಿಸಿ ಧೋನಿಗೆ ಹಸ್ತಲಾಘವ ನೀಡಿದರು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪಂದ್ಯದ ನಂತರ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಮುಗುಳ್ನಗುತ್ತಾ ಪಾಕಿಸ್ತಾನಿ ಆಟಗಾರರಿಗೆ ಶುಭ ಹಾರೈಸಿದರು. ಈ  ನಡವಳಿಕೆ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ಕ್ರಿಕೆಟ್‌ ಕ್ರೀಡೆಯ ನಿಜವಾದ ಗೆಲುವು. ಈ ದೃಶ್ಯಗಳು ಎಷ್ಟು ಸುಂದರವಾಗಿವೆ ಎಂದು ನೇಟಿಜನ್‌ ಗಳು ಕಾಮೆಂಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT