ಟೀಂ ಇಂಡಿಯಾ 
ಕ್ರಿಕೆಟ್

ವಿರಾಟ್-ರೋಹಿತ್ ಸೇರಿದಂತೆ 6 ಆಟಗಾರರ T20 ವೃತ್ತಿಜೀವನ ಅಂತ್ಯ!

ಟೀಂ ಇಂಡಿಯಾದ ಹಿರಿಯ ಆಟಗಾರರಿಗೆ ಕೊಕ್ ನೀಡಲು ಬಿಸಿಸಿಐ ನಿರ್ಧರಿಸಿದ್ದು ಆಯ್ಕೆಗಾರರು ಮತ್ತು ತಂಡದ ಕೋಚಿಂಗ್ ಸಿಬ್ಬಂದಿ 6 ಭಾರತೀಯ ಆಟಗಾರರಿಗೆ ಇದೇ ರೀತಿಯ ಸಂದೇಶವನ್ನು ನೀಡಲು ಪ್ರಯತ್ನಿಸಿದ್ದಾರೆ.

ಟೀಂ ಇಂಡಿಯಾದ ಹಿರಿಯ ಆಟಗಾರರಿಗೆ ಕೊಕ್ ನೀಡಲು ಬಿಸಿಸಿಐ ನಿರ್ಧರಿಸಿದ್ದು ಆಯ್ಕೆಗಾರರು ಮತ್ತು ತಂಡದ ಕೋಚಿಂಗ್ ಸಿಬ್ಬಂದಿ 6 ಭಾರತೀಯ ಆಟಗಾರರಿಗೆ ಇದೇ ರೀತಿಯ ಸಂದೇಶವನ್ನು ನೀಡಲು ಪ್ರಯತ್ನಿಸಿದ್ದಾರೆ. 

ಭವಿಷ್ಯದ ಟೀಂ ಇಂಡಿಯಾವನ್ನು ಬಲಪಡಿಸುವ ಉದ್ದೇಶದಿಂದ ಈ ಪ್ರಯತ್ನವನ್ನು ಮಾಡಲಾಗಿದೆ. ಬಿಸಿಸಿಐ ಆಯ್ಕೆಗಾರರು ಭಾರತದ 6 ಹಿರಿಯ ಆಟಗಾರರನ್ನು ಈಗ ತಮ್ಮ ಟಿ20 ವೃತ್ತಿಜೀವನದ ಬಗ್ಗೆ ಯೋಚಿಸುವಂತೆ ಕೇಳಿಕೊಂಡಿದ್ದಾರೆ. ವರದಿ ಪ್ರಕಾರ, ಈ 6 ಕ್ರಿಕೆಟಿಗರಲ್ಲಿ ರೋಹಿತ್, ಶರ್ಮಾ, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಆರ್ ಅಶ್ವಿನ್, ಮೊಹಮ್ಮದ್ ಶಮಿ ಮತ್ತು ದಿನೇಶ್ ಕಾರ್ತಿಕ್ ಹೆಸರು ಸೇರಿದೆ.

ಉನ್ನತ ಬಿಸಿಸಿಐ ಮೂಲಗಳ ಪ್ರಕಾರ, 'ಈಗ ನಾವು 2024ರ ಟಿ20 ವಿಶ್ವಕಪ್‌ಗಾಗಿ ಯೋಜಿಸುತ್ತಿದ್ದೇವೆ. ನಮ್ಮಲ್ಲಿ 35-36 ವರ್ಷ ವಯಸ್ಸಿನ ಅನೇಕ ಆಟಗಾರರಿದ್ದಾರೆ. ಈ ಆಟಗಾರರು ತಂಡದ ದೀರ್ಘಾವಧಿಯ ಯೋಜನೆಗೆ ಸರಿಹೊಂದುವುದಿಲ್ಲ. ಇನ್ನು ಮುಂದೆ ನಾವು ನಮ್ಮ ತಂಡವನ್ನು ಕಟ್ಟಬೇಕು. ಏಕೆಂದರೆ ಈಗ ಇಲ್ಲದಿದ್ದರೆ ಇನ್ಯಾವಾಗ. ಇಂತಹ ಪರಿಸ್ಥಿತಿಯಲ್ಲಿ ನಾವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಇನ್ನು ಮುಂದೆ ಟಿ20 ತಂಡದಲ್ಲಿ ವಯಸ್ಸಿಗೆ ತಕ್ಕಂತೆ ಹೊಂದಿಕೊಳ್ಳದ ಅಂತಹ ಆಟಗಾರರನ್ನು ಆಯ್ಕೆ ಮಾಡುವುದಾಗಿ ಹೇಳಿದ್ದಾರೆ.

ಸದ್ಯ ಟಿ20 ತಂಡದಿಂದ ಆರ್. ಅಶ್ವಿನ್, ಮೊಹಮ್ಮದ್ ಶಮಿ, ದಿನೇಶ್ ಕಾರ್ತಿಕ್ ಮತ್ತು ಭುವನೇಶ್ವರ್ ಕುಮಾರ್ ಸಂಪೂರ್ಣವಾಗಿ ಹೊರಗಿದ್ದಾರೆ. ಇವರಲ್ಲದೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಕ್ರಿಯವಾಗಿದ್ದರೂ ಅವರಿಗೆ ಅವಕಾಶಗಳು ಕಡಿಮೆ. ಇನ್ನು ಕೆಎಲ್ ರಾಹುಲ್ ಅವರು ಟಿ20 ತಂಡದ ಯೋಜನೆಗೆ ಹೊಂದಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಾಗಿಲ್ಲ ಆದರೆ ಅವರು T20 ವಿಶ್ವಕಪ್‌ನ ಯೋಜನೆಯ ಭಾಗವಾಗಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT