ಹಾಂಕಾಂಗ್ ಆಟಗಾರರ ಜೊತೆ ಕೊಹ್ಲಿ 
ಕ್ರಿಕೆಟ್

'ಕನಸು ನನಸಾಯಿತು': ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್ ನಲ್ಲಿ ಹಾಂಕಾಂಗ್ ಆಟಗಾರರ ಸಂಭ್ರಮ, ವಿಡಿಯೋ ವೈರಲ್!

ಏಷ್ಯಾ ಕಪ್ ಟೂರ್ನಿಯ ಟೀಂ ಇಂಡಿಯಾ ವಿರುದ್ಧ ಪಂದ್ಯದಲ್ಲಿ ಹಾಂಕಾಂಗ್‌ ಸೋಲಿನ ಕಹಿ ಅನುಭವಿಸಿರಬಹುದು ಆದರೆ ಪಂದ್ಯದ ನಂತರ ಭಾರತೀಯ ಆಟಗಾರರನ್ನು ಭೇಟಿ ಮಾಡಿ, ಮಾತನಾಡುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ದುಬೈ: ಏಷ್ಯಾ ಕಪ್ ಟೂರ್ನಿಯ ಟೀಂ ಇಂಡಿಯಾ ವಿರುದ್ಧ ಪಂದ್ಯದಲ್ಲಿ ಹಾಂಕಾಂಗ್‌ ಸೋಲಿನ ಕಹಿ ಅನುಭವಿಸಿರಬಹುದು ಆದರೆ ಪಂದ್ಯದ ನಂತರ ಭಾರತೀಯ ಆಟಗಾರರನ್ನು ಭೇಟಿ ಮಾಡಿ, ಮಾತನಾಡುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಹಾಂಕಾಂಗ್ ತಂಡ ಮೈದಾನದಲ್ಲಿ ಬಲಿಷ್ಠ ಭಾರತದ ವಿರುದ್ಧ 40 ರನ್‌ಗಳಿಂದ ಸೋಲು ಅನುಭವಿಸಿತ್ತು. ಆದರೆ ಇದರ ಬೆನ್ನಲ್ಲೇ ಹಾಂಗ್ ಕಾಂಗ್ ಕ್ರಿಕೆಟಿಗರಿಗೆ 'ಜೀವಮಾನ'ದ ಅವಕಾಶ ಸಿಕ್ಕಿತ್ತು. ಅದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರ ಆಟಗಾರರನ್ನು ಭೇಟಿ ಮಾಡುವ ಅವಕಾಶ. ಈ ವೇಳೆ ಹಾಂಕಾಂಗ್ ಆಟಗಾರರು ಭಾರತದ ಆಟಗಾರರ ಜೊತೆ ಚರ್ಚಿಸಿದ್ದು ಅಲ್ಲದೆ ಜೆರ್ಸಿಯ ಮೇಲೆ ಆಟೋಗ್ರಾಫ್, ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.

ಆಟಗಾರರು ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ಎಲ್ಲಾ ಆಟಗಾರರೊಂದಿಗೆ, ವಿಶೇಷವಾಗಿ ವಿರಾಟ್ ಮತ್ತು ರೋಹಿತ್ ಅವರೊಂದಿಗೆ ಮಾತನಾಡಿದರು. ಅಂತಹ ಕ್ಷಣಗಳು ನಮಗೆ ಆಗಾಗ್ಗೆ ಬರುವುದಿಲ್ಲ, ಆದ್ದರಿಂದ ಇದು ಕನಸು ನನಸಾಯಿತು ಎಂದು ಹೆಚ್ಚು ರನ್ ಸಿಡಿಸಿದ್ದ ಮಾಡಿದ ಬಾಬರ್ ಹಯಾತ್(41) ಹೇಳಿದರು.

ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಹಾಂಗ್ ಕಾಂಗ್ ನಾಯಕ ನಿಜಾಖತ್ ಖಾನ್ ಅವರು ತಮ್ಮ ಭಾರತೀಯ ಸಹವರ್ತಿ ರೋಹಿತ್ ಶರ್ಮಾ ಅವರಿಂದ ಹಸ್ತಾಕ್ಷರದ ಜೆರ್ಸಿಯನ್ನು ಸ್ವೀಕರಿಸಿದರು. ಇದೇ ವೇಳೆ ಸೂರ್ಯಕುಮಾರ್ ಯಾದವ್ ಇದೇ ವೇಳೆ ಸೂರ್ಯಕುಮಾರ್ ಯಾದವ್ ಬ್ಯಾಟ್ ಮೇಲೆ ಆಟೋಗ್ರಾಫ್ ಹಾಕಿ ಕೊಟ್ಟರು.

ಇನ್ನು ತಂಡ ಕೋಚ್ ರಾಹುಲ್ ದ್ರಾವಿಡ್, ಕೊಹ್ಲಿ ಸೇರಿದಂತೆ ಇತರರೊಂದಿಗೆ ಸುದೀರ್ಘವಾಗಿ ಮಾತನಾಡಿ ತೆರಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT