19 ವರ್ಷದೊಳಗಿನ ಭಾರತದ ಮಹಿಳಾ ತಂಡ 
ಕ್ರಿಕೆಟ್

U-19 ಮಹಿಳಾ ಟಿ-20 ವಿಶ್ವಕಪ್: 8 ವಿಕೆಟ್ ಗಳಿಂದ ಕಿವೀಸ್ ಮಣಿಸಿದ ಭಾರತ, ಫೈನಲ್ ಗೆ ಲಗ್ಗೆ

ಇಲ್ಲಿನ ಸೆನ್ ವೆಸ್ ಪಾರ್ಕ್ ನಲ್ಲಿ ನಡೆದ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಗಳಿಂದ ಭಾರತ ಗೆಲುವು ಸಾಧಿಸಿದೆ.

ಪೊಟ್ಚೆಫ್‌ಸ್ಟ್ರೋಮ್: ದಕ್ಷಿಣ ಆಫ್ರಿಕಾದ ಸೆನ್ ವೆಸ್ ಪಾರ್ಕ್ ನಲ್ಲಿ ನಡೆದ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಗಳಿಂದ ಭಾರತ ಗೆಲುವು ಸಾಧಿಸಿದೆ. ಆರಂಭಿಕ ಆಟಗಾರ್ತಿ ಶ್ವೇತಾ ಶೆರಾವತ್ ಅವರ ಆಕರ್ಷಕ ಅರ್ಧ ಶತಕ ಹಾಗೂ ಪಾರ್ಶವಿ ಅವರ ಮೂರು ವಿಕೆಟ್ ಗಳ ನೆರವಿನಿಂದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿತು.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ  ಶಫಾಲಿ ವರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಂತರ ಪಾರ್ಶವಿ ಅವರ ಶಿಸ್ತಿನ ಬೌಲಿಂಗ್ ಪ್ರಯತ್ನದಿಂದ (3/20) ಭಾರತವು ನ್ಯೂಜಿಲೆಂಡ್ ತಂಡವನ್ನು ಒಂಬತ್ತು ವಿಕೆಟ್ ನಷ್ಟಕ್ಕೆ 107 ರನ್ ಗಳಿಗೆ ಕಟ್ಟಿ ಹಾಕಿತು.  

16ರ ಹರೆಯದ ಲೆಗ್ ಸ್ಪಿನ್ನರ್ ಪಾರ್ಶವಿ  ಕಿವೀಸ್ ಬ್ಯಾಟಿಂಗ್  ಬೆನ್ನೆಲುಬು ಮುರಿದು ಸತತ ಮೂರು ವಿಕೆಟ್ ಕಿತ್ತರೆ,  ಟಿಟಾಸ್ ಸಾಧು, ಮನ್ನತ್ ಕಶ್ಯಪ್, ಶಫಾಲಿ ಮತ್ತು ಅರ್ಚನಾ ದೇವಿ ತಲಾ ಒಂದು ವಿಕೆಟ್ ಪಡೆದರು.

ನ್ಯೂಜಿಲೆಂಡ್  ಪರ ಜಾರ್ಜಿಯಾ ಪ್ಲಿಮ್ಮರ್ (35) ಇಸಾಬೆಲ್ಲಾ ಗೇಜ್ (26) ಮತ್ತು ಇಜ್ಜಿ ಶಾರ್ಪ್ (13) ಮತ್ತು ಕೇಲಿ ನೈಟ್ (12) ರನ್ ಕಲೆಹಾಕುವುದರೊಂದಿಗೆ ಎರಡಂಕಿ ತಲುಪಲು ಪರದಾಡಿದರು.

ನ್ಯೂಜಿಲೆಂಡ್ ನೀಡಿದ 108 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡ 14.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸುವ ಮೂಲಕ ವಿಜಯದ ನಗೆ ಬೀರಿತು. ಮೂರು ವಿಕೆಟ್‌ಗಳ ಸಾಧನೆಗಾಗಿ ಪಾರ್ಶವಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಇನ್ನೊಂದು ಸೆಮಿಫೈನಲ್‌ನಲ್ಲಿ ಗೆದ್ದ ತಂಡವನ್ನು ಭಾರತ ಎದುರಿಸಲಿದೆ.

ಸಂಕ್ಷಿಪ್ತ ಅಂಕಗಳು:

ನ್ಯೂಜಿಲೆಂಡ್ ಮಹಿಳಾ ತಂಡ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 107 (ಜಾರ್ಜಿಯಾ ಪ್ಲಿಮ್ಮರ್ 35; ಪಾರ್ಶವಿ ಚೋಪ್ರಾ 3/20).

ಭಾರತ ಮಹಿಳಾ ತಂಡ: 14 ಓವರ್ ಗಳ್ಲಲಿ 2 ವಿಕೆಟ್ ನಷ್ಟಕ್ಕೆ 110
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಎಂದೂ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಲ್ಲ; ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

ಕೇರಳ, ಯುಪಿ, ಇತರ ರಾಜ್ಯಗಳಲ್ಲಿ SIR ವಿರುದ್ಧ ಹೊಸ ಅರ್ಜಿ: EC ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

Karnataka Politics: 'ನನ್ ಹತ್ರ ಯಾವ್ ಬಣ್ಣನೂ ಇಲ್ಲ.. ನಾನು ಎಲ್ಲ 140 ಶಾಸಕರಿಗೂ ಅಧ್ಯಕ್ಷ': ಡಿಕೆ ಶಿವಕುಮಾರ್, Video

'ಕೈ ಇಟ್ಟಲೆಲ್ಲಾ ದುಡ್ಡೋ ದುಡ್ಡು..': ಕರ್ನಾಟಕದಿಂದ ಕೇರಳಕ್ಕೆ ಹಣ ಕಳ್ಳಸಾಗಣೆ, 3.15 ಕೋಟಿ ರೂ. ನಗದು ಕಸ್ಟಮ್ಸ್ ವಶಕ್ಕೆ! Video

ಕೇರಳ: ಮದುವೆ ದಿನವೇ ಅಪಘಾತ, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಆಸ್ಪತ್ರೆಯಲ್ಲಿಯೇ ತಾಳಿ ಕಟ್ಟಿದ ವರ!

SCROLL FOR NEXT