ವಿರಾಟ್ ಕೊಹ್ಲಿ 
ಕ್ರಿಕೆಟ್

ಐಪಿಎಲ್ 2023: 'ಹೊರಗಡೆಯವರು ಏನೇ ಹೇಳಿದರೂ 'ಡೋಂಟ್ ಕೇರ್' ಟೀಕಾಕಾರರಿಗೆ ಕೊಹ್ಲಿ ತಿರುಗೇಟು

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2023 ಆವೃತ್ತಿಯಲ್ಲಿ ಆರ್ ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ 500ಕ್ಕಿಂತಲೂ ಹೆಚ್ಚಿನ ರನ್ ಗಳಿಸಿದ್ದರೂ ಅವರ ಸ್ಟ್ರೈಕ್ ರೇಟ್ ತೀವ್ರ ಟೀಕೆಗೆ ಗುರಿಯಾಗಿತ್ತು.

ಹೈದರಾಬಾದ್: ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2023 ಆವೃತ್ತಿಯಲ್ಲಿ ಆರ್ ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ 500ಕ್ಕಿಂತಲೂ ಹೆಚ್ಚಿನ ರನ್ ಗಳಿಸಿದ್ದರೂ ಅವರ ಸ್ಟ್ರೈಕ್ ರೇಟ್ ತೀವ್ರ ಟೀಕೆಗೆ ಗುರಿಯಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 46 ಎಸೆತಗಳಲ್ಲಿ 55 ರನ್ ಗಳಿಸಿದ ನಂತರವೂ ಕೊಹ್ಲಿಯ ಬ್ಯಾಟಿಂಗ್ ವಿಧಾನ ಮತ್ತು ಅವರ ಸಾಮರ್ಥ್ಯದ ಮೇಲೆ ಟೀಕೆಗಳನ್ನು ಮಾಡಲಾಗಿತ್ತು. ಇದಕ್ಕೆಲ್ಲಾ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ತಿರುಗೇಟು ನೀಡಿದ್ದಾರೆ.

ತಮ್ಮ ಅದ್ಬುತ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಆರ್ ಸಿಬಿ ಎಂಟು ವಿಕೆಟ್ ಗಳ ಭರ್ಜರಿ ಗೆಲುವಿನೊಂದಿಗೆ ಪ್ಲೆ ಆಪ್ ತಲುಪುವಂತೆ ಮಾಡಿದ್ದಾರೆ. ನಾಲ್ಕು ವರ್ಷಗಳಲ್ಲಿ ತಮ್ಮ ಮೊದಲ ಐಪಿಎಲ್ ಶತಕ (63 ಎಸೆತಗಳಲ್ಲಿ 100) ಬಾರಿಸುವ ಮೂಲಕ ಎಲ್ಲಾ ಅನುಮಾನಗಳನ್ನು ಕೊಹ್ಲಿ ತಳ್ಳಿಹಾಕಿದರು. ಪಂದ್ಯ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರಗಡೆಯವರು  ಏನೇ ಹೇಳಿದರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳುವ ಮೂಲಕ ಟೀಕಾಕಾರಿಗೆ ತಿರುಗೇಟು ನೀಡಿದರು. 

'ನಾನು ಈಗಾಗಲೇ ತುಂಬಾ ಒತ್ತಡದಲ್ಲಿ ಸಿಲುಕಿರುವ ಕಾರಣ ಕೆಲವೊಮ್ಮೆ ನಾನು ಕ್ರೆಡಿಟ್ ತೆಗೆದುಕೊಳ್ಳಲ್ಲ. ಹೊರಗಿನವರು ಏನು ಹೇಳಿದರೂ ನಾನು ತಲೆಕೆಡಿಸಿಕೊಳಲ್ಲ. ಅದು ಅವರ ಅಭಿಪ್ರಾಯವಾಗಿದೆ. ನೀವೇ ಆ ಪರಿಸ್ಥಿತಿಯಲ್ಲಿದ್ದಾಗ ಹೇಗೆ ಕ್ರಿಕೆಟ್ ಗೆಲ್ಲಬೇಕೆಂದು ನಿಮಗೆ ತಿಳಿದಿರುತ್ತದೆ. ಅದನ್ನು ಬಹಳ ಸಮಯದಿಂದ ಮಾಡಿದ್ದೇನೆ. ಆಟ ಆಡುವಾಗ ಪಂದ್ಯ ಗೆಲ್ಲಲೇಬೆೇಕು ಎಂದು ಹೆಮ್ಮೆ ಆಡುತ್ತೇನೆ ಎಂದರು.

"ನಾನು ಈ ರೀತಿ ಫ್ಯಾನ್ಸಿ ಶಾಟ್  ಮೂಲಕ ಶತಕ ಬಾರಿಸುತ್ತೇನೆ ಅಂದುಕೊಂಡಿರಲಿಲ್ಲ. ಏಡೆನ್ ಜೊತೆಗೆ ಚಾಟ್ ಮಾಡುತ್ತಿದ್ದೆ. ನಾವು ವರ್ಷದ 12 ತಿಂಗಳು ಆಡಬೇಕು. 'ಐಪಿಎಲ್ ನಂತರ ಟೆಸ್ಟ್ ಕ್ರಿಕೆಟ್ (ಮುಂಬರಲಿದೆ) ನನ್ನ ತಂತ್ರಕ್ಕೆ ಬದ್ಧವಾಗಿರಬೇಕು. ಪ್ರಮುಖ ಆಟದಲ್ಲಿ ಪ್ರಭಾವ ಬೀರಲು ಸಾಧ್ಯವಾದಾಗ, ಅದು ನನಗೆ ಆತ್ಮವಿಶ್ವಾಸವನ್ನು ನೀಡುತ್ತದೆ, ಅದು ತಂಡಕ್ಕೆ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಅವರು ಹೇಳಿದರು. ಆರ್‌ಸಿಬಿ ಪ್ಲೇಆಫ್ ಭರವಸೆ ಸಂಪೂರ್ಣವಾಗಿ ಜೀವಂತವಾಗಿರಿಸಲು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಗೆಲಲ್ಲೇಬೇಕಾಗಿತ್ತು. ಹಾಗಾಗೀ ತಮ್ಮ ಆಟ ವಿಶೇಷವಾಗಿತ್ತು ಎಂದು ಕೊಹ್ಲಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT