ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ: ಮಾಜಿ ಕ್ರಿಕೆಟಿಗ

Ramyashree GN

ಐಪಿಎಲ್ 2024ನೇ ಆವೃತ್ತಿ ಪ್ರಾರಂಭವಾದಾಗಿನಿಂದ ಅಭಿಮಾನಿಗಳಿಂದಲೇ ಟೀಕೆಗಳನ್ನು ಮುಂಬೈ ಇಂಡಿಯನ್ಸ್ ಆಟಗಾರ ಹಾರ್ದಿಕ್ ಪಾಂಡ್ಯ ಎದುರಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿದ್ದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ತಾವೇ ನಾಯಕನಾಗಿದ್ದು, ಬಹುತೇಕ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಪ್ರತಿ ಬಾರಿಯೂ ಹಾರ್ದಿಕ್ ಪಾಂಡ್ಯ ಟಾಸ್‌ ವೇಳೆ ಕಾಣಿಸಿಕೊಂಡಾಗ ಅಥವಾ ಮೈದಾನದಲ್ಲಿ ಏನಾದರೂ ಮಾಡಿದಾಗ, ಅಭಿಮಾನಿಗಳು ಅವರನ್ನು ಟೀಕಿಸುತ್ತಲೇ ಇದ್ದಾರೆ. ಇದು ಮುಂಬೈ ಇಂಡಿಯನ್ಸ್‌ನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿಯೂ ಸಂಭವಿಸಿದೆ. ಅವರು ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿದ್ದರೂ, ಹಾರ್ದಿಕ್ ಪಾಂಡ್ಯ ಒತ್ತಡದಲ್ಲಿದ್ದಾರೆ.

2007 ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಇದೀಗ 'ದಿ ರಣವೀರ್ ಶೋ'ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಎದುರಿಸುತ್ತಿರುವ ಅಗ್ನಿಪರೀಕ್ಷೆಯ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

'ಅವರು ಭಾರತೀಯ ತಂಡಕ್ಕೆ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುವ ಸಾಮರ್ಥ್ಯ ಮತ್ತು ಸ್ಥಿರತೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಪ್ರಶಸ್ತಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಡಲಾಯಿತು. ನಂತರ ಅವರು ಗುಜರಾತ್ ಟೈಟಾನ್ಸ್ ತಂಡಕ್ಕೆ ಹೋದರು. ಅಲ್ಲಿ ಪ್ರಶಸ್ತಿಯನ್ನು ಗೆದ್ದರು ಮತ್ತು ಮತ್ತೊಮ್ಮೆ ರನ್ನರ್ಸ್ ಅಪ್ ಸ್ಥಾನ ಗಳಿಸಿದರು. ನಂತರ ಮಾತುಕತೆ ಆರಂಭವಾಯಿತು' ಎಂದು ಉತ್ತಪ್ಪ ಹೇಳಿದರು.

'ಅವರ ಫಿಟ್ನೆಸ್ ಬಗ್ಗೆ ಅಪಹಾಸ್ಯ, ಟ್ರೋಲಿಂಗ್, ಮೀಮ್‌ಗಳು ಹರಿದಾಡುತ್ತಿವೆ. ಅದು ಅವರಿಗೆ ನೋವುಂಟುಮಾಡುತ್ತದೆ ಎಂದು ನೀವು ಭಾವಿಸುವುದಿಲ್ಲವೇ? ಅದು ಅವರಿಗೆ ನೋವುಂಟುಮಾಡುತ್ತದೆ. ಯಾವುದೇ ವ್ಯಕ್ತಿಗಾದರೂ ಇದು ನೋವುಂಟು ಮಾಡುತ್ತದೆ. ಎಷ್ಟು ಜನರಿಗೆ ಇದರ ವಾಸ್ತವತೆ ತಿಳಿದಿದೆ? ಹಾರ್ದಿಕ್ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರತೀಯರಾಗಿ ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಯಾವುದೇ ವ್ಯಕ್ತಿಯ ಮೇಲೆ ಈ ರೀತಿಯ ಟೀಕೆಗಳನ್ನು ಹೇರುವುದು ಸರಿಯಲ್ಲ, ನಾವು ಅವುಗಳನ್ನು ಕಂಡು ನಗಬಾರದು ಮತ್ತು ಅವುಗಳನ್ನು ಫಾರ್ವರ್ಡ್ ಮಾಡಬಾರದು' ಎಂದಿದ್ದಾರೆ.

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ವೃತ್ತಿಜೀವನವನ್ನು ಭದ್ರಪಡಿಸಿಕೊಳ್ಳುವಲ್ಲಿ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎಂದು ಉತ್ತಪ್ಪ ಹೇಳಿದರು.

ತಮ್ಮ ಕೆಲಸವು ಟೀಕೆಗೆ ಒಳಗಾಗುತ್ತದೆ. ಏಕೆಂದರೆ ಅದು ಇತರರಿಗೆ ನೋಡಲು ಮತ್ತು ನಿರ್ಣಯಿಸಲು ಸದಾ ಪ್ರದರ್ಶನದಲ್ಲಿರುತ್ತದೆ. ಒಂದು ದೇಶವಾಗಿ ನಮ್ಮ ಮುಂದಿರುವ ಪ್ರಮುಖ ಅಂಶವೆಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಆದರೆ, ನಮ್ಮ ಅಭಿವ್ಯಕ್ತಿಯನ್ನು ತೋರಿಸುವಾಗ ಇತರ ವ್ಯಕ್ತಿಯೆಡೆಗೆ ನಿರ್ದಿಷ್ಟ ಪ್ರಮಾಣದ ಸಹಾನುಭೂತಿ ಮತ್ತು ಘನತೆಯನ್ನು ನಾವು ತೋರಿಸಬೇಕು. ನಾವು ವಿಶ್ವಕಪ್ ಸೋತ ನಂತರ ನಮ್ಮ ಭಾರತೀಯ ತಂಡಕ್ಕೆ ಸಿಕ್ಕಂತ ಪ್ರತಿಕ್ರಿಯೆಯ ರೀತಿ. ನಾವು ಸಮಾಜವಾಗಿ ಮತ್ತು ಭಾರತೀಯರಾಗಿ ಹೀಗೆಯೇ ಇರಬೇಕು ಎಂದಿದ್ದಾರೆ.

SCROLL FOR NEXT