ವಿರಾಟ್ ಕೊಹ್ಲಿ, ಸಿರಾಜ್ 
ಕ್ರಿಕೆಟ್

IPL 2025: ತಂಡ ಬದಲಾದ್ರು, ಸಿರಾಜ್ ಯಾವಾಗಲೂ RCBian! ಹೃದಯಸ್ಪರ್ಶಿ Video

ವಿರಾಟ್ ಕೊಹ್ಲಿ ಹಾಗೂ ಸಿರಾಜ್ ನಡುವೆ ಸ್ನೇಹ ಮಿಲನ ಅಪರೂಪವಾದದ್ದು, ಇದು ಅಭಿಮಾನಿಗಳಿಗೂ ಗೊತ್ತಿದ್ದು, ಬೆಂಗಳೂರಿನಲ್ಲಿ ಇಂದು ನಡೆಯಲಿರುವ RCB V/S ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಬೆಂಗಳೂರು: ತಂಡ ಬದಲಾದರೂ ವಿರಾಟ್ ಮತ್ತು ಆರ್ ಸಿಬಿ ಅಭಿಮಾನಿಗಳೊಂದಿಗೆ ಬಾಂಧವ್ಯ ಸಿರಾಜ್ ಅವರಲ್ಲಿ ಸ್ವಲ್ಪ ಕಡಿಮೆಯಾಗಿಲ್ಲ. ಮಂಗಳವಾರ ವಿರಾಟ್- ಸಿರಾಜ್ ಭೇಟಿ ಇದನ್ನು ಸಾಕ್ಷಿಕರಿಸುವಂತಿತ್ತು.

ಹೌದು. 2018 ರಿಂದ 2024ರವರೆಗೂ RCBಯಲ್ಲಿದ್ದ ಮೊಹಮ್ಮದ್ ಸಿರಾಜ್ ಈ ಬಾರಿ ಗುಜರಾತ್ ಟೈಟನ್ಸ್ ತಂಡದಲ್ಲಿದ್ದು, ಈಗ ಎದುರಾಳಿಯಾಗಿ ಆಡಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ನೆಚ್ಚಿನ 'ಗುರು' ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಲು ಎದುರು ನೋಡುತ್ತಿದ್ದಾರೆ. ಗುರು- ಶಿಷ್ಯರ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಸಿರಾಜ್ ನಡುವೆ ಸ್ನೇಹ ಮಿಲನ ಅಪರೂಪವಾದದ್ದು, ಇದು ಅಭಿಮಾನಿಗಳಿಗೂ ಗೊತ್ತಿದ್ದು, ಬೆಂಗಳೂರಿನಲ್ಲಿ ಇಂದು ನಡೆಯಲಿರುವ RCB V/S ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಮೊಹಮ್ಮದ್ ಸಿರಾಜ್ ಮಂಗಳವಾರ ಆರ್ ಸಿಬಿಯ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವೇಗಿ ಯಶ್ ದಯಾಲ್, ಮುಖ್ಯ ತರಬೇತುದಾರ ಆಂಡಿ ಫ್ಲವರ್ ಮತ್ತು ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರನ್ನು ಭೇಟಿ ಮಾಡಿದ್ದು, 'ದೇಹ ಮಾತ್ರ ಅಲ್ಲಿ, ಮನಸ್ಸು ಎಂದೆಂದಿಗೂ ಇಲ್ಲಿಯೇ ಎನ್ನುವ ಭಾವ ಮೂಡಿಸಿದ್ದಾರೆ. ಈ ಮಾತಿಗೆ ಫೋಟೋ ಹಾಗೂ ವಿಡಿಯೋ ಪುಷ್ಠಿಕರಿಸುವಂತಿದೆ.

RCB ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ರಾತ್ರಿಗಳು ವೇಗವಾಗಿ ಬದಲಾಗುತ್ತವೆ ಆದರೆ ಬಂಧವು ಹಾಗೇ ಇರುತ್ತದೆ. ಮತ್ತೊಮ್ಮೆ RCBian, ಯಾವಾಗಲೂ RCBian ಎಂದು ಫೋಸ್ಟ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಗೆಲುವು; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

SCROLL FOR NEXT