ಅನಯಾ ಬಂಗಾರ್ 
ಕ್ರಿಕೆಟ್

'ಕ್ರಿಕೆಟ್ ಹೇಳಿಕೊಟ್ಟ ತಂದೆಯೇ ಅದನ್ನು ತ್ಯಜಿಸುವಂತೆ ಹೇಳಿದರು': ಮಾಜಿ ಕ್ರಿಕೆಟಿಗ Sanjay Bangar ಪುತ್ರಿ (ತ್ರ) Anaya ಭಾವುಕ!

ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲಿಂಗ ಬದಲಾವಣೆ ಕುರಿತು ಬಹಿರಂಗವಾದಾಗಿನಿಂದ ನಾನು ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ನಾನು ಪ್ರೀತಿಸಿ ಆಡುತ್ತಿದ್ದ ಕ್ರಿಕೆಟ್ ನಿಂದಲೇ ನಾನು ದೂರಾಗಬೇಕಾಯಿತು...

ನವದೆಹಲಿ: ಯಾವ ತಂದೆ ನನಗೆ ಕ್ರಿಕೆಟ್ ಹೇಳಿಕೊಟ್ಟರೋ ಅವರೇ ಆ ಕ್ರೀಡೆಯನ್ನು ತ್ಯಜಿಸುವಂತೆ ಹೇಳಿದರು ಎಂದು ಖ್ಯಾತ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ (ತ್ರ) ಅನಯಾ ಬಂಗಾರ್ ಭಾವುಕರಾಗಿ ಹೇಳಿದ್ದಾರೆ.

ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಅನಯಾ, "ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲಿಂಗ ಬದಲಾವಣೆ ಕುರಿತು ಬಹಿರಂಗವಾದಾಗಿನಿಂದ ನಾನು ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ಪ್ರಮುಖವಾಗಿ ನಾನು ಪ್ರೀತಿಸಿ ಆಡುತ್ತಿದ್ದ ಕ್ರಿಕೆಟ್ ನಿಂದಲೇ ನಾನು ದೂರಾಗಬೇಕಾಯಿತು ಎಂದು ಭಾವುಕರಾಗಿದ್ದಾರೆ.

'ನನ್ನ ದೇಹ ಬದಲಾವಣೆಯಿಂದ ನಾನು ದೊಡ್ಡ ಬೆಲೆ ತೆರಬೇಕಾಯಿತು. ಕ್ರಿಕೆಟ್ ಕಲಿಸಿದ ತಂದೆಯೇ ಕ್ರಿಕೆಟ್ ತ್ಯಜಿಸುವಂತೆ ಹೇಳಿದರು. ಕ್ರಿಕೆಟ್‌ನಲ್ಲಿ ಇನ್ನು ಮುಂದೆ ನಿನಗೆ ಜಾಗವಿಲ್ಲ.. ಎಂದು ಹೇಳಿದ್ದರು. ಕುಟುಂಬದ ದೃಷ್ಟಿಕೋನದಿಂದ ನನಗೆ ಇನ್ನೂ ಸ್ಥಳವಿತ್ತು. ಆದರೆ ಸಮಾಜ, ಕ್ರಿಕೆಟ್ ಅಥವಾ ಬಾಹ್ಯ ಪ್ರಪಂಚದಲ್ಲಿ ಅದು ಇರಲಿಲ್ಲ' ಎಂದು ಅನಯಾ ಹೇಳಿದ್ದಾರೆ.

ಆತ್ಮಹತ್ಯೆ ಆಲೋಚನೆಗಳು ಬಂದಿತ್ತು

ಇದೇ ವೇಳೆ ಸಮಾಜದ ವಿರುದ್ಧದ ಹೋರಾಟದಲ್ಲಿ, ಮನಸ್ಸಿನ ಸಂಘರ್ಷ ಮತ್ತು ಬಾಹ್ಯ ಪ್ರಪಂಚದ ರಾಕ್ಷಸರೊಂದಿಗೆ ಹೋರಾಡುತ್ತಿದ್ದ ನಾನು ಸಾಕಷ್ಟು ಜರ್ಜಿರಿತಳಾಗಿದ್ದೆ. ನಾನು ನನ್ನ ಪರವಾಗಿ ನಿಲ್ಲಬೇಕಾಯಿತು. ಇಡೀ ಜಗತ್ತು ನನ್ನ ವಿರುದ್ಧವಾಗಿದೆ ಎಂದು ಭಾವಿಸಿ ನನಗೆ ಆತ್ಮಹತ್ಯೆಯ ಆಲೋಚನೆಗಳು ಬಂದಿದ್ದವು. ಈಗ ಈ ವ್ಯವಸ್ಥೆಯಲ್ಲಿ ನನಗೆ ಯಾವುದೇ ಸ್ಥಾನವಿಲ್ಲ. ಮೂಲಭೂತ ಅವಕಾಶಗಳು ಮತ್ತು ಹಕ್ಕುಗಳು ಸಹ ನನಗೆ ಇನ್ನು ಮುಂದೆ ಇಲ್ಲ ಎಂದು ಅನಯಾ ಹೇಳಿದ್ದಾರೆ.

ನನ್ನ ತಂದೆ ಪ್ರಸಿದ್ಧ ವ್ಯಕ್ತಿಯಾಗಿರುವುದರಿಂದ ನಾನು ನನ್ನ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬೇಕಾಯಿತು. ಇಲ್ಲಿ ನನಗೆ ಬೆಂಬಲವಿದೆ ಅಂತೆಯೇ ಕಿರುಕುಳಗಳೂ ಇವೆ ಎಂದು ಅನಯಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT