ಅಕ್ಷರ್ ಪಟೇಲ್ - ದಿನೇಶ್ ಕಾರ್ತಿಕ್ 
ಕ್ರಿಕೆಟ್

IPL 2025: ‘ತಮಾಷೆ ಮಾಡಬೇಡಿ, ಹೋಗಿ ಬ್ಯಾಟಿಂಗ್ ಮಾಡಿ’; ಅಕ್ಷರ್ ಪಟೇಲ್‌ಗೆ ದಿನೇಶ್ ಕಾರ್ತಿಕ್ ಸಲಹೆ

ಅಕ್ಷರ್ ಪಟೇಲ್ ಈ ಆವೃತ್ತಿಯಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಡಿಸಿ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದ್ದು, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಭಾನುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025 ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ನೆಟ್‌ನಲ್ಲಿ ಅಭ್ಯಾಸ ಮಾಡುವಾಗ ತಂಡದ ಮಾಜಿ ಸಹ ಆಟಗಾರ ಮತ್ತು ಸದ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಂಟರ್ ದಿನೇಶ್ ಕಾರ್ತಿಕ್ ಅವರನ್ನು ಗಮನಿಸಿದ್ದಾರೆ. ಡಿಸಿ vs ಆರ್‌ಸಿಬಿ ನಿರ್ಣಾಯಕ ಮುಖಾಮುಖಿಯ ಮುನ್ನಾದಿನ, ಅಕ್ಷರ್ ಪಟೇಲ್ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ದಿನೇಶ್ ಕಾರ್ತಿಕ್ ಅವರು ನೆಟ್ಸ್ ಕಡೆಗೆ ಬಂದಿದ್ದಾರೆ.

ನೆಟ್ಸ್ ಸಮೀಪದಲ್ಲಿ ಇದ್ದ ದಿನೇಶ್ ಕಾರ್ತಿಕ್ ಅವರನ್ನು ಗಮನಿಸಿದ ಅಕ್ಷರ್ ಪಟೇಲ್ ಬ್ಯಾಟಿಂಗ್ ನಿಲ್ಲಿಸಿದ್ದಾರೆ. ಆಗ ಕಾರ್ತಿಕ್ ನೆಟ್ಸ್ ಸಮೀಪ ನಡೆದು ಅಕ್ಷರ್ ಅವರ ಕೈಕುಲುಕಿ, ನಾಯಕನಂತೆ ವರ್ತಿಸುವಂತೆ ಮತ್ತು ತನ್ನನ್ನು ಮಾತನಾಡಿಸಿ ಅಭ್ಯಾಸದಿಂದ ವಿಚಲಿತರಾಗಬೇಡಿ ಎನ್ನುತ್ತಾರೆ. ಡಿಸಿ ನಾಯಕ ಯಾವುದೇ ಗಮನ ಹರಿಸದಿದ್ದಾಗ, ಕಾರ್ತಿಕ್ 'ತಮಾಷೆ ಮಾಡಬೇಡಿ, ದಯವಿಟ್ಟು ಬ್ಯಾಟಿಂಗ್ ಮುಂದುವರಿಸಿ. ಅದಕ್ಕಾಗಿಯೇ ನಾನು ನೆಟ್ಸ್ ಹತ್ತಿರ ಬರುವುದಿಲ್ಲ" ಎಂದು ಹೇಳಿ ಹೊರಟುಹೋಗುತ್ತಾರೆ.

ಅಕ್ಷರ್ ಮತ್ತು ದಿನೇಶ್ ಕಾರ್ತಿಕ್ ನಡುವಿನ ಸಂಭಾಷಣೆ ಇಲ್ಲಿದೆ

ಅಕ್ಷರ್ ಪಟೇಲ್: ಡಿಕೆ ಭಾಯ್ ಕೋ ಹಲೋ ತೋ ಬೊಲುಂಗಾ ನಾ. (ನಾನು ನನ್ನ ಸಹೋದರ ಡಿಕೆಗೆ ಹಲೋ ಹೇಳುತ್ತೇನೆ)

ದಿನೇಶ್ ಕಾರ್ತಿಕ್: ಒಳ್ಳೆಯ ನಾಯಕನಾಗಿರಿ.

ಅಕ್ಷರ್ ಪಟೇಲ್: ಹೇ ಡಿಕೆ ಭಾಯ್, ಬಾಯಿ ತೋ ಯಾರ್ ಆಪ್. (ಡಿಕೆ ಭಾಯ್ ನೀನು ನನ್ನ ಸಹೋದರ)

ದಿನೇಶ್ ಕಾರ್ತಿಕ್: ಎಹ್ ತು ಖೇಲ್ ನಾ ಯಾರ್. ಮಜಾಕ್ ಮತ್ ಕರ್. ಇಸ್ಲೀ ಮೇನ್ ನೆಟ್ ಕೆ ಪಾಸ್ ನಹಿ ಅತಾ. (ನೀನು ಹೋಗಿ ಬ್ಯಾಟಿಂಗ್ ಮಾಡು, ತಮಾಷೆ ಮಾಡಬೇಡ. ಅದಕ್ಕಾಗಿಯೇ ನಾನು ನೆಟ್ಸ್ ಹತ್ತಿರ ಬರುವುದಿಲ್ಲ).

ಅಕ್ಷರ್ ಪಟೇಲ್ ಈ ಆವೃತ್ತಿಯಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಡಿಸಿ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದ್ದು, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಡಿಸಿ ಕೊನೆಯ ಬಾರಿ ಆರ್‌ಸಿಬಿಯನ್ನು ಎದುರಿಸಿದಾಗ, ಕೆಎಲ್ ರಾಹುಲ್ ಅಜೇಯ 93 ರನ್ ಗಳಿಸಿ ತಂಡದ ಗೆಲುವಿಗೆ ಪಾತ್ರರಾಗಿದ್ದರು. ಇಂದು ನಡೆಯಲಿರುವ ಪಂದ್ಯದಲ್ಲೂ ರಾಹುಲ್ ಅವರಿಂದ ಇದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸುತ್ತಿರಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT