ವೈಭವ್ ಸೂರ್ಯವಂಶಿ 
ಕ್ರಿಕೆಟ್

U19 ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಬೆಂಗಳೂರಿನಲ್ಲಿ ವೈಯಕ್ತಿಕ ತರಬೇತಿ ಆರಂಭಿಸಿದ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ ಆಗಸ್ಟ್ 10 ರಂದು NCA ತಲುಪಿದರು. ಅಲ್ಲಿ ವೈಭವ್ ಜೊತೆ ಅವರ ತರಬೇತುದಾರ ಮನೀಶ್ ಓಜಾ ಇದ್ದಾರೆ.

ಐಪಿಎಲ್ 2024ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (RR) ಉತ್ತಮ ಪ್ರದರ್ಶನ ನೀಡಿದ ನಂತರ 14 ವರ್ಷದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಭಾರತದ ಭಾರತದ ಅಂಡರ್-19ನಲ್ಲಿ ಸ್ಥಾನ ಪಡೆದರು. ಬಳಿಕ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಯು19 ಸರಣಿಯಲ್ಲಿ ಆಡಿದರು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಸರಣಿಯೂ ಅವರ ಕೈಯಲ್ಲಿದೆ. ಮೈಖೇಲ್ ಪ್ರಕಾರ, ವೈಭವ್ ಸೂರ್ಯವಂಶಿ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿದ್ದು, ಅಲ್ಲಿ ವೈಯಕ್ತಿಕ ತರಬೇತಿ ಪಡೆಯುತ್ತಿದ್ದಾರೆ.

ವೈಭವ್ ಸೂರ್ಯವಂಶಿ ಆಗಸ್ಟ್ 10 ರಂದು NCA ತಲುಪಿದರು. ಅಲ್ಲಿ ಅವರಿಗಾಗಿ ತಾಂತ್ರಿಕ ಡ್ರಿಲ್ಸ್ ಮತ್ತು ಪಂದ್ಯ-ನಿರ್ದಿಷ್ಟ ಡ್ರಿಲ್ಸ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವೈಭವ್ ಜೊತೆ ಅವರ ತರಬೇತುದಾರ ಮನೀಶ್ ಓಜಾ ಇದ್ದಾರೆ.

'ಬಿಸಿಸಿಐ ಭವಿಷ್ಯದ ಮೇಲೆ ಗಮನ ಹರಿಸಿದೆ. ಹಿರಿಯ ಆಟಗಾರರು ಕ್ರಮೇಣ ನಿವೃತ್ತರಾಗುತ್ತಿದ್ದಾರೆ ಮತ್ತು ಆ ಜಾಗವನ್ನು ತುಂಬಲು, ಮುಂದಿನ ಬ್ಯಾಚ್ ಯುವಕರು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ವೈಭವ್‌ಗೆ ಈ ತರಬೇತಿ ಆ ಪ್ರಕ್ರಿಯೆಯ ಭಾಗವಾಗಿದೆ. ನಾವು ಒಬ್ಬೊಬ್ಬರಾಗಿ ಹುಡುಗರನ್ನು ಆಯ್ಕೆ ಮಾಡಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಪಡಿಸುತ್ತೇವೆ' ಎಂದು ಓಜಾ ವಿವರಿಸಿದರು.

NCA ಯಲ್ಲಿನ ಅಭ್ಯಾಸವು ಸುಮಾರು ಒಂದು ವಾರ ಮುಂದುವರಿಯಲಿದೆ. ನಂತರ ಸೂರ್ಯವಂಶಿ ತನ್ನ ಉಳಿದ ತಂಡದ ಆಟಗಾರರೊಂದಿಗೆ ಸೇರಿಕೊಳ್ಳುತ್ತಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಈಗಾಗಲೇ ಹೆಸರಾಗಿರುವ ವೈಭವ್ ಅವರನ್ನು ರೆಡ್ ಬಾಲ್ ಕ್ರಿಕೆಟ್‌ನಲ್ಲೂ ಪ್ರದರ್ಶನವನ್ನು ಹೆಚ್ಚಿಸಲು ಬಯಸುತ್ತಾರೆ ಓಜಾ. ಅವರು ಮೊದಲ ಎಸೆತದಿಂದಲೇ ಆಕ್ರಮಣಕಾರಿ ಸಾಮರ್ಥ್ಯ ಹೊಂದಿದ್ದಾರೆ. ಇದು T20 ಮತ್ತು ಏಕದಿನ ಪಂದ್ಯಗಳಲ್ಲಿ ದೊಡ್ಡ ಸಕಾರಾತ್ಮಕ ಅಂಶವಾಗಿದೆ.

'ನೀವು ಇದನ್ನು ಐಪಿಎಲ್, ಅಂಡರ್-19 ಮತ್ತು ವಿಜಯ್ ಹಜಾರೆಯಲ್ಲಿ ನೋಡಿದ್ದೀರಿ. ಆದರೆ ದೀರ್ಘ ಸ್ವರೂಪಗಳಲ್ಲಿ, ವೈಟ್ ಬಾಲ್ ಕ್ರಿಕೆಟ್‌ಗೆ ಹೋಲಿಸಿದರೆ, ಪ್ರದರ್ಶನದ ಮಟ್ಟ ಕುಸಿಯುತ್ತದೆ. ಆ ಸ್ಥಿರತೆಯನ್ನು ಹೆಚ್ಚಿಸುವುದು ಗುರಿಯಾಗಿದೆ. ಅವರು 10 ಇನಿಂಗ್ಸ್‌ಗಳನ್ನು ಆಡಿದರೆ, 7-8 ಪ್ರಭಾವಶಾಲಿಯಾಗಿರಬೇಕು' ಎಂದರು.

ಈಮಧ್ಯೆ, ಅಂಡರ್-19 ಆಸ್ಟ್ರೇಲಿಯಾ ಪ್ರವಾಸವು ಸೆಪ್ಟೆಂಬರ್ 21 ರಂದು ಪ್ರಾರಂಭವಾಗಲಿದ್ದು, ಅಲ್ಲಿ ಭಾರತ ತಂಡವು ಮೂರು ಏಕದಿನ ಮತ್ತು ಎರಡು ಟೆಸ್ಟ್‌ಗಳನ್ನು ಆಡಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

SCROLL FOR NEXT