ವೈಭವ್ ಸೂರ್ಯವಂಶಿ 
ಕ್ರಿಕೆಟ್

ಇನ್ನೂ ತಡವೇಕೆ? ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿಯನ್ನು ಕರೆತನ್ನಿ; ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದ ಶಶಿ ತರೂರ್

ಸೂರ್ಯವಂಶಿ 84 ಎಸೆತಗಳಲ್ಲಿ 15 ಸಿಕ್ಸರ್‌ಗಳೊಂದಿಗೆ 190 ರನ್ ಗಳಿಸುವ ಮೂಲಕ 36 ಎಸೆತಗಳಲ್ಲಿಯೇ ಶತಕ ಬಾರಿಸಿದರು.

14 ವರ್ಷದ ವೈಭವ್ ಸೂರ್ಯವಂಶಿ 2025ನೇ ವರ್ಷವನ್ನು ಸ್ಮರಣೀಯವಾಗಿ ಕಳೆಯುತ್ತಿದ್ದಾರೆ. ಈ ವರ್ಷದ ಕೊನೆಯ ವಾರದಲ್ಲಿಯೂ ಸಹ, ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಇದ್ದಾರೆ. ಡಿಸೆಂಬರ್ 24ರ ಬುಧವಾರ, ಸೂರ್ಯವಂಶಿ ಎಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕಿ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ 150 ರನ್ ಗಳಿಸಿದರು. ಸೂರ್ಯವಂಶಿ 84 ಎಸೆತಗಳಲ್ಲಿ 190 ರನ್ ಗಳಿಸಿದರು. ಇದೀಗ ಕಾಂಗ್ರೆಸ್ ಸಂಸದ ಶಶಿ ತರೂರ್, ವೈಭವ್ ಸೂರ್ಯವಂಶಿ ಅವರ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್‌ ಅವರಿಗೆ ಹೋಲಿಸಿದ್ದಾರೆ.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ ಮತ್ತು ವೈಭವ್ ಸೂರ್ಯವಂಶಿ ಅವರನ್ನು ಭಾರತ ತಂಡಕ್ಕೆ ಕರೆತನ್ನಿ ಎಂದು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ ಸೂಚಿಸಿದ್ದಾರೆ.

'ಹದಿನಾಲ್ಕು ವರ್ಷದ ಬಾಲಕನೊಬ್ಬ ಕೊನೆಯ ಬಾರಿಗೆ ಅದ್ಭುತ ಕ್ರಿಕೆಟ್ ಪ್ರತಿಭೆಯನ್ನು ತೋರಿಸಿದ್ದು ಸಚಿನ್ ತೆಂಡೂಲ್ಕರ್ ಮತ್ತು ಅವರು ಏನಾದರೂ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈಗ ಯಾವುದಕ್ಕಾಗಿ ಕಾಯಲಾಗುತ್ತಿದೆ? ಭಾರತ ತಂಡಕ್ಕಾಗಿ ವೈಭವ್ ಸೂರ್ಯವಂಶಿ!' ಎಂದು ಶಶಿ ತರೂರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಅವರ ಅಧಿಕೃತ ಖಾತೆಗಳನ್ನು ಸಹ ಟ್ಯಾಗ್ ಮಾಡಿದ್ದಾರೆ.

ಬುಧವಾರ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಬಿಹಾರ ತಂಡದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಮತ್ತು ನಾಯಕ ಸಕಿಬುಲ್ ಗನಿ ಅವರು ಅತ್ಯಂತ ವೇಗದ ಶತಕ ಬಾರಿಸಿ ತಂಡವು 574/6 ಬೃಹತ್ ಮೊತ್ತವನ್ನು ಕಲೆಹಾಕುವ ಮೂಲಕ ವಿಶ್ವ ದಾಖಲೆಯ ಮೊತ್ತ ಪೇರಿಸಿದರು.

ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಗನಿ (40 ಎಸೆತಗಳಲ್ಲಿ 128) ಕೇವಲ 32 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತ್ಯಂತ ವೇಗದ ಶತಕ ಇದಾಗಿದೆ.

ಸೂರ್ಯವಂಶಿ 84 ಎಸೆತಗಳಲ್ಲಿ 15 ಸಿಕ್ಸರ್‌ಗಳೊಂದಿಗೆ 190 ರನ್ ಗಳಿಸುವ ಮೂಲಕ 36 ಎಸೆತಗಳಲ್ಲಿಯೇ ಶತಕ ಬಾರಿಸಿದರು. ವಿಕೆಟ್ ಕೀಪರ್ ಆಯುಷ್ ಲೋಹರುಕ ಕೂಡ 56 ಎಸೆತಗಳಲ್ಲಿ 116 ರನ್ ಗಳಿಸಿ ತಂಡಕ್ಕೆ ನೆರವಾದರು.

ಸೂರ್ಯವಂಶಿ, ಗನಿ ಮತ್ತು ಲೋಹರುಕ ಅವರ ಶತಕಗಳ ನೆರವಿನಿಂದ, ಬಿಹಾರ ತಂಡವು ತಮಿಳುನಾಡು ಹೊಂದಿದ್ದ ಹಿಂದಿನ ದಾಖಲೆಯನ್ನು (2022-23ರ ಆವೃತ್ತಿಯಲ್ಲಿ ಅರುಣಾಚಲ ಪ್ರದೇಶದ ವಿರುದ್ಧ 506/2) ಆರಾಮವಾಗಿ ಮುರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿತ್ರದುರ್ಗ: ಖಾಸಗಿ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ, ಬೆಂಕಿ​​​​; 9 ಮಂದಿ ಸಜೀವ ದಹನ, ಹಲವರಿಗೆ ಗಂಭೀರ ಗಾಯ; ತನಿಖೆಗೆ ಆದೇಶ; Video

ಚಿತ್ರದುರ್ಗ ಬಸ್ ದುರಂತ: ಸಿಎಂ ಸಿದ್ದರಾಮಯ್ಯ-ಪ್ರಧಾನಿ ಮೋದಿ ತೀವ್ರ ಸಂತಾಪ; ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ಭಾರಿ ನಕ್ಸಲ್ ಕಾರ್ಯಾಚರಣೆ: 1.1 ಕೋಟಿ ರೂ ಇನಾಮು ಹೊಂದಿದ್ದ ನಕ್ಸಲ್ ನಾಯಕ ಗಣೇಶ್ ಉಯ್ಕೆ ಸೇರಿ ನಾಲ್ವರು ಹತ!

ಅಮೆರಿಕದಲ್ಲಿ Sun Pharma ಗೆ ಶಾಕ್: 17,000ಕ್ಕೂ ಹೆಚ್ಚು ಯೂನಿಟ್ ಆಂಟಿಫಂಗಲ್ ಶಾಂಪೂ ಹಿಂದಕ್ಕೆ!

'ಮದ್ಯದಂಗಡಿ ಹರಾಜು' ರಾಜ್ಯ ಸರ್ಕಾರದ ಹೊಸ ವರ್ಷದ ಕೊಡುಗೆ: ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ!

SCROLL FOR NEXT