ರಚಿನ್ ರವೀಂದ್ರ  
ಕ್ರಿಕೆಟ್

IPL 2026: CSK ಗೆ ಮೇಜರ್ ಸರ್ಜರಿ; ರಚಿನ್ ರವೀಂದ್ರ ಔಟ್? ಬ್ಯಾಟಿಂಗ್ ಕೋಚ್ ಆಗಿ ಸುರೇಶ್ ರೈನಾ ಎಂಟ್ರಿ

2024ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ರಚಿನ್ ರವೀದ್ರ 2025 ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನೋಡುತ್ತಿದ್ದಾರೆ ಎಂಬ ವರದಿಗಳು ಬಂದ ಕೆಲವೇ ವಾರಗಳ ನಂತರ, ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮತ್ತೊಂದು ವ್ಯಾಪಾರ ವದಂತಿ ಬೆಳಕಿಗೆ ಬಂದಿದೆ. ಈ ಹಿಂದೆ, ರುತುರಾಜ್ ಗಾಯಕ್ವಾಡ್ ಮತ್ತು ತಂಡ ಎಡಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಭಾರತೀಯ ಆಫ್-ಸ್ಪಿನ್ನರ್ ಅನ್ನು ವಿಕೆಟ್-ಕೀಪರ್ ಓಪನರ್ ಜೊತೆಗೆ ಬದಲಿಸಲು ಮುಂದಾಗಿದೆ ಎನ್ನಲಾಗಿತ್ತು. ಈಗ, ಮತ್ತೊಂದು ವರದಿಯ ಪ್ರಕಾರ, ಸಿಎಸ್‌ಕೆ ಇತರ ಪ್ರತಿಭೆಗಳಿಗಾಗಿ ಹೆಚ್ಚಿನ ಆಟಗಾರರನ್ನು ಕೈಬಿಡಲು ನೋಡುತ್ತಿದೆ.

RCBXTRA ನ X ಖಾತೆಯಲ್ಲಿ ಪೋಸ್ಟ್ ಮಾಡಿದಂತೆ, CSK ರಚಿನ್ ರವೀಂದ್ರ ಅವರನ್ನು DC ಯ ಡೊನೊವನ್ ಫೆರೀರಾ ಬದಲಿಗೆ ವಿನಿಮಯ ಮಾಡಿಕೊಳ್ಳಲು ನೋಡುತ್ತಿದೆ ಎಂದು ವರದಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಫಾಫ್ ಡು ಪ್ಲೆಸಿಸ್ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿರುವುದರಿಂದ ಹೊಸ ಓಪನರ್ ಹುಡುಕಾಟದಲ್ಲಿದೆ. ಇದಲ್ಲದೆ, CSK ದಂತಕಥೆಗಳಾದ ಸುರೇಶ್ ರೈನಾ ಮತ್ತು ಡ್ವೇನ್ ಬ್ರಾವೋ ಐಪಿಎಲ್ 2026ಕ್ಕೆ ಫ್ರಾಂಚೈಸಿಗೆ ಮರಳಬಹುದು ಎಂದು ಅದು ಹೇಳಿದೆ.

2024ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ರಚಿನ್ ರವೀದ್ರ 2025 ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅವರು 8 ಪಂದ್ಯಗಳಿಂದ 191 ರನ್‌ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ 65 ಅವರ ಗರಿಷ್ಠ ಸ್ಕೋರ್ ಆಗಿದೆ.

ಮತ್ತೊಂದೆಡೆ, ಫೆರೀರಾ ಅವರನ್ನು ಡಿಸಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೆಚ್ಚು ಬಳಸಿಕೊಂಡಿತು ಮತ್ತು ಅವರು ಹೆಚ್ಚು ಪಂದ್ಯಗಳನ್ನು ಆಡಲಿಲ್ಲ. ಡಿಸಿ ತಂಡದಿಂದ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡುತ್ತಿದ್ದರೆ, ತಂಡಕ್ಕೆ ಪರಿಚಿತರೇ ಆದ ಅವರನ್ನು ಕರೆಸಿಕೊಳ್ಳಲು ಸಿಎಸ್‌ಕೆ ಆಸಕ್ತಿ ವಹಿಸಿಲ್ಲ ಎಂದು ವರದಿಯಾಗಿದೆ.

ಐಪಿಎಲ್ 2025ರ ಅಂತ್ಯದ ವೇಳೆಯಲ್ಲಿ, ಮುಂದಿನ ಆವೃತ್ತಿಯಲ್ಲಿ ಸುರೇಶ್ ರೈನಾ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಸಿಎಸ್‌ಕೆ ನೇಮಿಸಿಕೊಳ್ಳಲಿದೆ ಎಂದು ವರದಿಗಳು ತಿಳಿಸಿವೆ.

ಡ್ವೇನ್ ಬ್ರಾವೋ ಐಪಿಎಲ್ 2025 ಕ್ಕಿಂತ ಮೊದಲು ಬೌಲಿಂಗ್ ಕೋಚ್ ಆಗಿ ಕೆಕೆಆರ್‌ಗೆ ತೆರಳಿದರು. ಆದಾಗ್ಯೂ, ಕೆಕೆಆರ್ ಅಥವಾ ಸಿಎಸ್‌ಕೆ ಈ ಆವೃತ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಸಿಎಸ್‌ಕೆ ಕೊನೆಯ ಸ್ಥಾನದಲ್ಲಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ನಾಯಕತ್ವ ಗೊಂದಲ "ಮಾಧ್ಯಮಗಳ ಸೃಷ್ಟಿ": ಡಿಕೆಶಿ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲು; BMC ಚುನಾವಣೆಗೆ ಕಾಂಗ್ರೆಸ್ ಜತೆ ಮೈತ್ರಿಗೆ ಶಿವಸೇನೆ(ಯುಬಿಟಿ) ಯತ್ನ!

Mark: ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ?: ಸುದೀಪ್ ಬೆನ್ನಿಗೆ ನಿಂತ ಚಕ್ರವರ್ತಿ ಚಂದ್ರಚೂಡ್

ಟಿಎಂಸಿಯಿಂದ ಅಮಾನತುಗೊಂಡ ಶಾಸಕನಿಂದ ಹೊಸ ಪಕ್ಷ ಘೋಷಣೆ; ಅಲ್ಪಸಂಖ್ಯಾತರು ಒಗ್ಗಟ್ಟಾಗುವಂತೆ ಮಮತಾ ಮನವಿ

ಜೆರುಸಲೆಮ್‌ನಲ್ಲಿ ಇಸ್ರೇಲ್ ಬುಲ್ಡೋಜರ್ ಕಾರ್ಯಾಚರಣೆ: ರಾತ್ರೋರಾತ್ರಿ 100 ಪ್ಯಾಲೆಸ್ತೀನಿಯರ ಮನೆ ಧ್ವಂಸ!

SCROLL FOR NEXT