ಝಾಕ್ ಕ್ರಾಲಿ - ಬೆನ್ ಡಕೆಟ್ ಜೊತೆಗೆ ಶುಭಮನ್ ಗಿಲ್ ಮಾತಿನ ಚಕಮಕಿ 
ಕ್ರಿಕೆಟ್

ಲಾರ್ಡ್ಸ್‌ನಲ್ಲಿ ಝಾಕ್ ಕ್ರಾಲಿ-ಬೆನ್ ಡಕೆಟ್ ಮಾತಿನ ಚಕಮಕಿ; ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೇಳಿದ್ದೇನು?

ಮೂರನೇ ದಿನದಾಟ ಮುಗಿಯಲು ಸುಮಾರು 7 ನಿಮಿಷ ಬಾಕಿ ಇರುವಾಗ, ಇಂಗ್ಲೆಂಡ್‌ನ ಆರಂಭಿಕರಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಉದ್ದೇಶಪೂರ್ವಕವಾಗಿ ಕ್ರೀಸ್‌ಗೆ ತಡವಾಗಿ ಬಂದರು.

ಇಂಗ್ಲೆಂಡ್ ತಂಡದ ಆಟಗಾರರು ತಪ್ಪು ಬದಿಯಲ್ಲಿದ್ದಾಗಲೆಲ್ಲಾ ಅದು 'ಆಟದ ಉತ್ಸಾಹ'ದ ಕುರಿತು ಚರ್ಚೆಗೆ ಗ್ರಾಸವಾಗುತ್ತದೆ. ಈ ಕ್ರೀಡೆಯ ಸೃಷ್ಟಿಕರ್ತರು 'ಕ್ರಿಕೆಟ್‌ನ ಉತ್ಸಾಹ'ದ ದೊಡ್ಡ ಬೋಧಕರು ಎಂದೇ ಪರಿಗಣಿಸಲಾಗುತ್ತದೆ. ಆದರೆ, ಅದನ್ನು ಅನುಸರಿಸುವಲ್ಲಿ ಅವರಿಗೆ ಒಂದು ಸಮಸ್ಯೆ ಇದೆ. 2013ರ ಆಶಸ್‌ನಲ್ಲಿ ಕ್ಯಾಚ್ ಪಡೆದ ನಂತರವೂ ಸ್ಟುವರ್ಟ್ ಬ್ರಾಡ್ ನಡೆಯದೇ ಇರುವುದಾಗಲಿ ಅಥವಾ 2019ರ ವಿಶ್ವಕಪ್ ಫೈನಲ್‌ನಲ್ಲಿ ಬೆನ್ ಸ್ಟೋಕ್ಸ್ ತಮ್ಮ ಬ್ಯಾಟ್‌ನಿಂದ ದಿಕ್ಕು ತಪ್ಪಿ ರನ್ ಗಳಿಸುವುದಾಗಲಿ. ಲಾರ್ಡ್ಸ್ ಟೆಸ್ಟ್‌ನಲ್ಲಿಯೂ ಮೂರನೇ ದಿನದಾಟದಲ್ಲಿ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅವರ ನಡೆಯು ಕ್ರಿಕೆಟ್‌ನ ಉತ್ಸಾಹಕ್ಕೆ ತುಂಬಾ ವಿರುದ್ಧವಾಗಿವೆ ಎಂದು ಭಾರತದ ಟೆಸ್ಟ್ ನಾಯಕ ಶುಭ್‌ಮನ್ ಗಿಲ್ ಭಾವಿಸಿದ್ದಾರೆ.

ಮೂರನೇ ದಿನದಾಟ ಮುಗಿಯಲು ಸುಮಾರು 7 ನಿಮಿಷ ಬಾಕಿ ಇರುವಾಗ, ಇಂಗ್ಲೆಂಡ್‌ನ ಆರಂಭಿಕರಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಉದ್ದೇಶಪೂರ್ವಕವಾಗಿ ಕ್ರೀಸ್‌ಗೆ ತಡವಾಗಿ ಬಂದರು. ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ನಲ್ಲಿ ಕ್ರಾಲಿ, ಸಮಯ ವ್ಯರ್ಥ ಮಾಡಲು ಪ್ರಾರಂಭಿಸಿದರು ಎಂದು ಹೇಳಿದರು.

ಭಾರತ ತಂಡ 1 ಓವರ್‌ಗಿಂತ ಹೆಚ್ಚು ಬೌಲಿಂಗ್ ಮಾಡದಂತೆ ನೋಡಿಕೊಳ್ಳಲು ಇದೊಂದು ತಂತ್ರವಾಗಿತ್ತು. ಬುಮ್ರಾ ಎಸೆತದಲ್ಲಿ ಕೈಗೆ ಚೆಂಡು ಬಿದ್ದ ನಂತರ ಅವರು ಫಿಜಿಯೋ ಅವರನ್ನು ಕೂಡ ಕರೆದರು. ಇದು ಭಾರತದ ನಾಯಕ ಶುಭಮನ್ ಗಿಲ್ ಅವರನ್ನು ಕೆರಳುವಂತೆ ಮಾಡಿತು. ಗಿಲ್ ಅವರ ವಿರುದ್ಧ ಮಾತಿಕ ಚಕಮಕಿಯಲ್ಲಿ ತೊಡಗಿದರು.

ಆ ಸಂಜೆ ತಾನು ಏಕೆ ಕೋಪಗೊಂಡಿದ್ದೆ ಎಂಬುದರ ಕುರಿತು ಗಿಲ್ ಈಗ ಮಾತನಾಡಿದ್ದಾರೆ. 'ಒಮ್ಮೆ ಪರಿಸ್ಥಿತಿಯನ್ನು ಸ್ಪಷ್ಟಪಡಿಸುತ್ತೇನೆ. ಆ ದಿನದ ಆಟ ಕೊನೆಗೊಳ್ಳಲು 7 ನಿಮಿಷ ಬಾಕಿ ಉಳಿದಿದ್ದವು. ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ಗೆ ಬರಲು 90 ಸೆಕೆಂಡುಗಳು ತಡವಾಗಿ ಬಂದರು. 10 ಅಲ್ಲ, 20 ಅಲ್ಲ, 90 ಸೆಕೆಂಡುಗಳು ತಡವಾಗಿ ಅವರು ಬಂದರು. ಹೌದು, ಹೆಚ್ಚಿನ ತಂಡಗಳು ಇದನ್ನು (ತಂತ್ರ) ಬಳಸುತ್ತವೆ. ನಾವು ಆ ಸ್ಥಾನದಲ್ಲಿದ್ದರೂ ಸಹ, ನಾವು ಕಡಿಮೆ ಓವರ್‌ಗಳನ್ನು ಆಡಲು ಇಷ್ಟಪಡುತ್ತಿದ್ದೆವು' ಎಂದು ಮ್ಯಾಂಚೆಸ್ಟರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಫಿಜಿಯೋ ಅವರನ್ನು ಕರೆಯುವುದು ನ್ಯಾಯಯುತವಾಗಿದೆ. ಆದರೆ, ಕ್ರಾಲಿ ಮತ್ತು ಡಕೆಟ್ ತಡವಾಗಿ ಬಂದಿದ್ದು ಸಮಸ್ಯೆಯಾಗಿತ್ತು. ಅವರು ಒಂದಕ್ಕಿಂತ ಹೆಚ್ಚು ಓವರ್ ಆಡದಂತೆ ನೋಡಿಕೊಳ್ಳಲು ಉಳಿದ ಸಮಯದ ಸುಮಾರು ಶೇ 20 ರಷ್ಟು ವ್ಯರ್ಥ ಮಾಡಿದರು. ಗಿಲ್‌ ಪ್ರಕಾರ, ಇದು ಖಂಡಿತವಾಗಿಯೂ ಕ್ರಿಕೆಟ್‌ನ ಉತ್ಸಾಹಕ್ಕೆ ವಿರುದ್ಧವಾಗಿದೆ.

'ಆದರೆ ಅದನ್ನು ಮಾಡಲು ಒಂದು ಮಾರ್ಗವಿದೆ. ಹೌದು, ನಿಮ್ಮ ದೇಹದ ಮೇಲೆ ಪೆಟ್ಟು ಬಿದ್ದರೆ, ಫಿಸಿಯೋಗಳಿಗೆ ಬರಲು ಅವಕಾಶವಿದೆ ಮತ್ತು ಅದು ನ್ಯಾಯಯುತವಾದ ವಿಷಯ. ಆದರೆ, ಕ್ರೀಸ್‌ಗೆ 90 ಸೆಕೆಂಡುಗಳು ತಡವಾಗಿ ಬರಲು ಸಾಧ್ಯವಾಗುವುದು ಆಟದ ಉತ್ಸಾಹದಲ್ಲಿ ಬರುವ ವಿಷಯವಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಭಾರತೀಯ ನಾಯಕ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT