ಶಿಖರ್ ಧವನ್ - ಯುವರಾಜ್ ಸಿಂಗ್ 
ಕ್ರಿಕೆಟ್

'ವಿಷಾದವಿಲ್ಲ, ಸೆಮಿಫೈನಲ್‌ನಲ್ಲೂ ಆಡಲ್ಲ...': ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಇಂಡಿಯಾ ಚಾಂಪಿಯನ್ಸ್!

ಭಾರತ ಆಡಲು ನಿರಾಕರಿಸಿದ ನಂತರ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಂಡಿದ್ದರೂ, ನಾಲ್ಕು ಗೆಲುವು ಮತ್ತು ಒಂಬತ್ತು ಅಂಕಗಳೊಂದಿಗೆ ಪಾಕಿಸ್ತಾನ ಚಾಂಪಿಯನ್ಸ್ ಈಗ ಅಗ್ರ ಸ್ಥಾನ ಪಡೆದಿದ್ದು, ಫೈನಲ್‌ಗೆ ಮುನ್ನಡೆಯಲಿದೆ.

2025ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಬೇಕಿದ್ದು, ತೀವ್ರ ಕುತೂಹಲ ಮೂಡಿಸಿದೆ. ಭಾರತದ ಹಿಂದಿನ ನಿಲುವಿನಂತೆ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಶಿಖರ್ ಧವನ್ ಮುಂತಾದವರು ನಾಕೌಟ್ ಹಣಾಹಣಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿದರು. ಇದರಿಂದಾಗಿ ಎದುರಾಳಿಗಳು ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಯಿತು. ಅವರ ಆಯ್ಕೆಯಿಂದಾಗಿ ಫೈನಲ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡರೂ, ತಂಡವು ವಿಷಾದಿಸುವುದಿಲ್ಲ ಏಕೆಂದರೆ ಅವರಿಗೆ ದೇಶದ ಮೇಲಿನ ಪ್ರೀತಿ ಮತ್ತು ನಿಷ್ಠೆಯೇ ಮೊದಲು ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

'ನಾವು ಪಾಕಿಸ್ತಾನದ ವಿರುದ್ಧ (ಸೆಮಿಸ್‌ನಲ್ಲಿ) ಆಡುತ್ತಿಲ್ಲ. ನಮ್ಮ ದೇಶ ನಮಗೆ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತದೆ ಮತ್ತು ನಂತರ ಉಳಿದದ್ದು. ಭಾರತ ಕೆ ಲಿಯೇ ಕುಚ್ ಭಿ. ನಾವು ಭಾರತೀಯ ತಂಡದ ಹೆಮ್ಮೆಯ ಸದಸ್ಯರು. ನಮ್ಮ ಶರ್ಟ್‌ಗಳ ಮೇಲೆ ಭಾರತೀಯ ಧ್ವಜವನ್ನು ಹಾಕಲು ನಾವು ಹೆಣಗಾಡಿದ್ದೇವೆ ಮತ್ತು ಶ್ರಮಿಸಿದ್ದೇವೆ ಮತ್ತು ಅದನ್ನು ಗಳಿಸಿದ್ದೇವೆ. ಏನೇ ಆದರೂ ನಾವು ನಮ್ಮ ದೇಶವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಭಾರತ್ ಮಾತಾ ಕಿ ಜೈ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

'ನಾವು ಫೈನಲ್‌ಗೆ ಪ್ರವೇಶಿಸಿ ಪಾಕಿಸ್ತಾನದೊಂದಿಗೆ ಮುಖಾಮುಖಿಯಾದರೂ ಸಹ, ನಾವೆಲ್ಲರೂ ಅದೇ ರೀತಿ ಮಾಡುತ್ತಿದ್ದೆವು. ನಾವೆಲ್ಲರೂ ಭಾರತೀಯರು ನಮ್ಮ ನಿಲುವು ಒಂದೇ ಆಗಿರುತ್ತಿತ್ತು' ಎಂದು ತಂಡದ ಒಳಗಿನವರು ಹೇಳಿದ್ದಾರೆ.

ಭಾರತ ಆಡಲು ನಿರಾಕರಿಸಿದ ನಂತರ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಂಡಿದ್ದರೂ, ನಾಲ್ಕು ಗೆಲುವು ಮತ್ತು ಒಂಬತ್ತು ಅಂಕಗಳೊಂದಿಗೆ ಪಾಕಿಸ್ತಾನ ಚಾಂಪಿಯನ್ಸ್ ಈಗ ಅಗ್ರ ಸ್ಥಾನ ಪಡೆದಿದ್ದು, ಫೈನಲ್‌ಗೆ ಮುನ್ನಡೆಯಲಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಎರಡೂ ರಾಷ್ಟ್ರಗಳ ನಡುವಿನ ಕ್ರೀಡಾ ಸಂಬಂಧಗಳು ಮತ್ತೊಮ್ಮೆ ಹದಗೆಟ್ಟಿವೆ.

ಆದಾಗ್ಯೂ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲವೂ ಸಾಮಾನ್ಯವಾಗಿ ಕಾಣುತ್ತಿದೆ. ಎರಡೂ ತಂಡಗಳು ಸೆಪ್ಟೆಂಬರ್ 14 ರಂದು ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಆದರೆ, ಭಾರತೀಯ ಮಹಿಳಾ ತಂಡವು ಅಕ್ಟೋಬರ್ 6 ರಂದು ಕೊಲಂಬೊದಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯವನ್ನು ಆಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಮಂಕಿಮ್ಯಾನ್'; ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

‘Dimagi Naxal’ ವಿವಾದ: ‘ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ’: ಕಿರಣ್‌ ರಿಜಿಜು ವಾಗ್ದಾಳಿ

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!