ರಿಷಿಕೇಶದಲ್ಲಿ RCB ಕೋಚ್ ಆ್ಯಂಡಿ ಫ್ಲವರ್ 
ಕ್ರಿಕೆಟ್

IPL 2025: ಟ್ರೋಫಿ ಗೆದ್ದ ಬಳಿಕ ರಿಷಿಕೇಶದಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಭೇಟಿಯಾದ RCB ಕೋಚ್ ಆಂಡಿ ಫ್ಲವರ್

ಆಟ ಮತ್ತು ತರಬೇತಿಯಲ್ಲಿ ನನ್ನ ಅನುಭವದ ಪ್ರಕಾರ, ಗೆಲ್ಲುವುದು ಸಾಕಾಗುವುದಿಲ್ಲ. ಗೆಲ್ಲುವುದಕ್ಕಿಂತ ಹೆಚ್ಚಿನದಾಗಿರಬೇಕು, ಆಳವಾದದ್ದಾಗಿರಬೇಕು, ಹೆಚ್ಚು ಅರ್ಥಪೂರ್ಣವಾದದ್ದೇನಾದರೂ ಇರಬೇಕು.

ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಮತ್ತು ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕೋಚ್ ಆ್ಯಂಡಿ ಫ್ಲವರ್ ಶನಿವಾರ ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥ ಸ್ವಾಮಿ ಚಿದಾನಂದ್ ಸರಸ್ವತಿ ಅವರನ್ನು ಭೇಟಿ ಮಾಡಿ ಕ್ರೀಡೆ ಮತ್ತು ಟ್ರೋಫಿ ಗೆದ್ದ ಬಗ್ಗೆ ಮಾತನಾಡಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಫ್ಲವರ್, ಆರ್‌ಸಿಬಿ ತಮ್ಮ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಯನ್ನು ಗೆದ್ದ ಕೆಲವು ದಿನಗಳ ನಂತರ, ಋಷಿಕೇಶದಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ.

ಭೇಟಿ ಕುರಿತು ANI ಜೊತೆ ಮಾತನಾಡಿದ ಫ್ಲವರ್, 'ವಾಸ್ತವವಾಗಿ ನಾನು ತಂಡದ ಚಲನಶೀಲತೆ ಮತ್ತು ಸ್ಪರ್ಧಾತ್ಮಕ ಕ್ರೀಡೆಗಳ ಸ್ವರೂಪವನ್ನು ಚರ್ಚಿಸಿದೆ. ಯಾವುದೇ ಕ್ರೀಡಾ ಸಂಸ್ಥೆಗಳಲ್ಲಿ, ಗೆಲ್ಲುವತ್ತ ಬಲವಾದ ಗಮನವಿರುತ್ತದೆ. ಕ್ರೀಡಾ ಸಂಸ್ಥೆಯಾಗಿ ನಾವು ಕೂಡ ಟ್ರೋಫಿಯನ್ನು ಗೆಲ್ಲುವ ಪ್ರವೃತ್ತಿ ಹೊಂದಿದ್ದೇವೆ' ಎಂದರು.

'ಆದರೆ, ಆಟ ಮತ್ತು ತರಬೇತಿಯಲ್ಲಿ ನನ್ನ ಅನುಭವದ ಪ್ರಕಾರ, ಗೆಲ್ಲುವುದು ಸಾಕಾಗುವುದಿಲ್ಲ. ಗೆಲ್ಲುವುದಕ್ಕಿಂತ ಹೆಚ್ಚಿನದಾಗಿರಬೇಕು, ಆಳವಾದದ್ದಾಗಿರಬೇಕು, ಹೆಚ್ಚು ಅರ್ಥಪೂರ್ಣವಾದದ್ದೇನಾದರೂ ಇರಬೇಕು. ಏಕೆಂದರೆ ಗೆಲ್ಲುವುದು ಕೆಲವೊಮ್ಮೆ ಸ್ವಲ್ಪ ಟೊಳ್ಳಾಗಿರುತ್ತದೆ' ಎಂದು ಹೇಳಿದರು.

'ನೀವು ಗೆದ್ದ ನಂತರ ಕೆಲವೊಮ್ಮೆ ನಿರಾಶಾದಾಯಕ ಅಥವಾ ಖಾಲಿತನವನ್ನು ಅನುಭವಿಸಬಹುದು. ಆದ್ದರಿಂದ ಟ್ರೋಫಿಗಳನ್ನು ಬೆನ್ನಟ್ಟುವುದನ್ನು ಮೀರಿ ಇತರ ಉದ್ದೇಶವಿರಬೇಕು. ನಾವು ಜನರು ಮತ್ತು ಇತರ ಗುಂಪುಗಳ ಮೇಲೆ ಬೀರಬಹುದಾದ ಪ್ರಭಾವದ ಬಗ್ಗೆ ಮಾತನಾಡಿದೆವು. ಆದರೆ ನೀವು ಮೊದಲು ನಿಮ್ಮ ಬಗ್ಗೆ ಕಾಳಜಿ ವಹಿಸಬೇಕು. ಇತರ ಜನರ ಮೇಲೆ ಉತ್ತಮ ಪ್ರಭಾವ ಬೀರಲು ನೀವು ಮೊದಲು ನೀವು ಉತ್ತಮ ಸ್ಥಾನದಲ್ಲಿರಬೇಕು' ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಇಲ್ಲಿನ ತಮ್ಮ ಅನುಭವದ ಕುರಿತು ಮಾತನಾಡುತ್ತಾ, 'ಅಂತರರಾಷ್ಟ್ರೀಯ ಯೋಗ ದಿನದಂದು ರಿಷಿಕೇಶದಲ್ಲಿ ಇರುವುದು ಅದ್ಭುತವಾಗಿದೆ. ಕಳೆದ ಎರಡು ವಾರಗಳಿಂದ ನಾನು ರಿಷಿಕೇಶದಲ್ಲಿದ್ದೇನೆ. ನಾನು ಯೋಗದ ಬಗ್ಗೆ ಬಹಳಷ್ಟು ಕಲಿಯುತ್ತಿದ್ದೇನೆ ಮತ್ತು ನಾನು ಕಲಿತ ಮುಖ್ಯ ವಿಷಯವೆಂದರೆ ಯೋಗವು ಒಂದು ಗಂಟೆಯ ತರಗತಿಯಲ್ಲ. ಆದರೆ, ಅದು ಲಕ್ಷಾಂತರ ಜನರಿಗೆ ಜೀವನ ವಿಧಾನವಾಗಿದೆ. ನಾನು ಮಾಡಿದ ದೈಹಿಕ ಅಭ್ಯಾಸಗಳನ್ನು ನಾನು ಆನಂದಿಸಿದ್ದೇನೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT