ಯಶಸ್ವಿ ಜೈಸ್ವಾಲ್-ಶುಭ್ಮನ್ ಗಿಲ್ 
ಕ್ರಿಕೆಟ್

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಭಾರತದ ಪರ ಆರಂಭಿಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ಭಾರತ 500ರ ಗಡಿ ದಾಟಿದೆ.

ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಭಾರತದ ಪರ ಆರಂಭಿಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ಭಾರತ 500ರ ಗಡಿ ದಾಟಿದೆ. ಇನ್ನು ದ್ವಿಶತಕ ಗಳಿಸುವ ಅವಕಾಶ ಕೈತಪ್ಪಿದಾಗ ಯಾವುದೇ ಬ್ಯಾಟ್ಸ್‌ಮನ್ ಬೇಸರಗೊಳ್ಳುವುದು ಸಹಜ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನದಂದು ಅದ್ಭುತವಾಗಿ ಆಡಿದ್ದ ಯಶಸ್ವಿ ಜೈಸ್ವಾಲ್ (175) ಇಂದು ಕೂಡ ಉತ್ತಮ ಉತ್ಸಾಹದಲ್ಲಿ ಕಾಣಿಸಿಕೊಂಡರು. ವಿಂಡೀಸ್ ವೇಗಿಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಮುಂದೆ ಸಾಗಿದರು. ಆದರೆ 1 ರನ್ ಪಡೆಯುವ ಭರದಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿದರು.

ಇನ್ನು ರನೌಟ್ ಗೆ ಕಾರಣನಾದ ನಾನ್-ಸ್ಟ್ರೈಕ್ ನಲ್ಲಿದ್ದ ನಾಯಕ ಶುಭ್ಮನ್ ಗಿಲ್ ಬಗ್ಗೆ ಯಶಸ್ವಿ ಜೈಸ್ವಾಲ್ ತೀವ್ರ ಅಸಹನೆ ವ್ಯಕ್ತಪಡಿಸಿದರು. ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗಿಲ್ ರನ್ ಗಳಿಸಲು ಬಾರದ ಕಾರಣ ಔಟಾದ ಜೈಸ್ವಾಲ್ ಕೈಯಿಂದ ತಲೆಗೆ ಹೊಡೆದುಕೊಂಡು ಮೈದಾನದಿಂದ ಹೊರ ನಡೆದರು.

ಇನ್ನಿಂಗ್ಸ್‌ನ 92ನೇ ಓವರ್ ಅನ್ನು ಜೇಡನ್ ಸೀಲ್ಸ್ ಬೌಲ್ ಮಾಡಿದರು. ಜೈಸ್ವಾಲ್ ಆ ಓವರ್‌ನ ಎರಡನೇ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ರನ್ ಗಳಿಸುವುದು ಸುಲಭ ಎಂದು ಭಾವಿಸಿ ಯಶಸ್ವಿ ಓಡಲು ಪ್ರಾರಂಭಿಸಿದರು. ಮತ್ತೊಂದೆಡೆ, ಗಿಲ್ ಕೂಡ ಓಡಲು ಪ್ರಾರಂಭಿಸಿದ್ದು ತಕ್ಷಣ ಹಿಂತಿರುಗಿದರು. ಅರ್ಧಕ್ಕಿಂತ ಹೆಚ್ಚು ಪಿಚ್ ದಾಟಿದ್ದ ಜೈಸ್ವಾಲ್ ಹಿಂತಿರುಗುವ ಹೊತ್ತಿಗೆ ರನ್ ಔಟ್ ಆದರು. ಇದರಿಂದ 74 ರನ್‌ಗಳ ಪಾಲುದಾರಿಕೆ ಕೊನೆಗೊಂಡಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ಗಿಲ್ ವರ್ತನೆಯ ಬಗ್ಗೆ ತೀವ್ರ ಟೀಕೆಗೆ ಕಾರಣವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಳೆ ಬೆಳಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ಡಿಕೆಶಿ ಭೇಟಿ; ಕುತೂಹಲ ಕೆರಳಿಸಿದ CM, DCM ಬ್ರೇಕ್​ಫಾಸ್ಟ್ ಮೀಟಿಂಗ್

ಕೇರಳ: ಕೈಕೊಟ್ಟ ಕ್ರೇನ್, ಸ್ಕೈ ಡಿನ್ನಿಂಗ್ ಗಾಗಿ 150 ಅಡಿ ಎತ್ತರ ಇದ್ದವರ ಜೀವ ಉಳಿದಿದ್ದೇ ಹೆಚ್ಚು!

CM ಪಟ್ಟಕ್ಕಾಗಿ ಫೈಟ್: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಚಿಂತನೆ

ಪುಟಿದೆದ್ದ ಭಾರತದ ಆರ್ಥಿಕ ಬೆಳವಣಿಗೆ; ಆದರೆ ದ್ವಿತೀಯಾರ್ಧದಲ್ಲಿ ನಿಧಾನಗತಿಯ ಬಗ್ಗೆ ತಜ್ಞರ ಎಚ್ಚರಿಕೆ

ಜಮ್ಮು: ಅಧಿಕಾರಿಗಳಿಂದ ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ನೆರೆಯ ಹಿಂದೂ ವ್ಯಕ್ತಿಯಿಂದ ನಿವೇಶನ ಗಿಫ್ಟ್!

SCROLL FOR NEXT