ಯಶಸ್ವಿ ಜೈಸ್ವಾಲ್-ಶುಭ್ಮನ್ ಗಿಲ್ 
ಕ್ರಿಕೆಟ್

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಭಾರತದ ಪರ ಆರಂಭಿಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ಭಾರತ 500ರ ಗಡಿ ದಾಟಿದೆ.

ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಭಾರತದ ಪರ ಆರಂಭಿಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ಭಾರತ 500ರ ಗಡಿ ದಾಟಿದೆ. ಇನ್ನು ದ್ವಿಶತಕ ಗಳಿಸುವ ಅವಕಾಶ ಕೈತಪ್ಪಿದಾಗ ಯಾವುದೇ ಬ್ಯಾಟ್ಸ್‌ಮನ್ ಬೇಸರಗೊಳ್ಳುವುದು ಸಹಜ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನದಂದು ಅದ್ಭುತವಾಗಿ ಆಡಿದ್ದ ಯಶಸ್ವಿ ಜೈಸ್ವಾಲ್ (175) ಇಂದು ಕೂಡ ಉತ್ತಮ ಉತ್ಸಾಹದಲ್ಲಿ ಕಾಣಿಸಿಕೊಂಡರು. ವಿಂಡೀಸ್ ವೇಗಿಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಮುಂದೆ ಸಾಗಿದರು. ಆದರೆ 1 ರನ್ ಪಡೆಯುವ ಭರದಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿದರು.

ಇನ್ನು ರನೌಟ್ ಗೆ ಕಾರಣನಾದ ನಾನ್-ಸ್ಟ್ರೈಕ್ ನಲ್ಲಿದ್ದ ನಾಯಕ ಶುಭ್ಮನ್ ಗಿಲ್ ಬಗ್ಗೆ ಯಶಸ್ವಿ ಜೈಸ್ವಾಲ್ ತೀವ್ರ ಅಸಹನೆ ವ್ಯಕ್ತಪಡಿಸಿದರು. ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗಿಲ್ ರನ್ ಗಳಿಸಲು ಬಾರದ ಕಾರಣ ಔಟಾದ ಜೈಸ್ವಾಲ್ ಕೈಯಿಂದ ತಲೆಗೆ ಹೊಡೆದುಕೊಂಡು ಮೈದಾನದಿಂದ ಹೊರ ನಡೆದರು.

ಇನ್ನಿಂಗ್ಸ್‌ನ 92ನೇ ಓವರ್ ಅನ್ನು ಜೇಡನ್ ಸೀಲ್ಸ್ ಬೌಲ್ ಮಾಡಿದರು. ಜೈಸ್ವಾಲ್ ಆ ಓವರ್‌ನ ಎರಡನೇ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ರನ್ ಗಳಿಸುವುದು ಸುಲಭ ಎಂದು ಭಾವಿಸಿ ಯಶಸ್ವಿ ಓಡಲು ಪ್ರಾರಂಭಿಸಿದರು. ಮತ್ತೊಂದೆಡೆ, ಗಿಲ್ ಕೂಡ ಓಡಲು ಪ್ರಾರಂಭಿಸಿದ್ದು ತಕ್ಷಣ ಹಿಂತಿರುಗಿದರು. ಅರ್ಧಕ್ಕಿಂತ ಹೆಚ್ಚು ಪಿಚ್ ದಾಟಿದ್ದ ಜೈಸ್ವಾಲ್ ಹಿಂತಿರುಗುವ ಹೊತ್ತಿಗೆ ರನ್ ಔಟ್ ಆದರು. ಇದರಿಂದ 74 ರನ್‌ಗಳ ಪಾಲುದಾರಿಕೆ ಕೊನೆಗೊಂಡಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ಗಿಲ್ ವರ್ತನೆಯ ಬಗ್ಗೆ ತೀವ್ರ ಟೀಕೆಗೆ ಕಾರಣವಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT