ಪ್ರೀತಿ ಜಿಂಟಾ 
ಕ್ರಿಕೆಟ್

'ಅವರ ತಾಯಿ ಅಡುಗೆ ಮಾಡಿ ಇಡೀ ತಂಡಕ್ಕೆ ಹೋಟೆಲ್‌ಗೆ ಊಟ ತರುತ್ತಾರೆ': ಪಿಬಿಕೆಎಸ್ ಸ್ಟಾರ್ ಬ್ಯಾಟರ್ ಬಗ್ಗೆ ನಟಿ ಪ್ರೀತಿ ಜಿಂಟಾ!

ಪ್ರಭ್ಸಿಮ್ರನ್ ಸಿಂಗ್ ಐಪಿಎಲ್ 2019ನೇ ಆವೃತ್ತಿಯಿಂದ ಪಿಬಿಕೆಎಸ್ ತಂಡದ ಭಾಗವಾಗಿದ್ದಾರೆ. ಅವರನ್ನು ಆರಂಭದಲ್ಲಿ ₹4.80 ಕೋಟಿಗೆ ಖರೀದಿಸಲಾಯಿತು.

ಪಂಜಾಬ್ ಕಿಂಗ್ಸ್ (PBKS) ತಂಡದ ಸಹ-ಮಾಲೀಕರಾದ ನಟಿ ಪ್ರೀತಿ ಜಿಂಟಾ ಶನಿವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕಮೆಂಟ್ ಮಾಡಿದ್ದು, ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಪ್ರಭ್ಸಿಮ್ರನ್ ಸಿಂಗ್ ಅವರನ್ನು ಹೊಗಳಿದ್ದಾರೆ. ಪಿಬಿಕೆಎಸ್ ಆರಂಭಿಕ ಆಟಗಾರನ ಸ್ಪೂರ್ತಿದಾಯಕ ಪ್ರಯಾಣವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರೀತಿ ಜಿಂಟಾ ಆ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಭ್ಸಿಮ್ರನ್ ಸಿಂಗ್ ಅವರ ತಾಯಿ ಪ್ರತಿ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಇಡೀ ತಂಡಕ್ಕೆ ಅಡುಗೆ ಮಾಡುತ್ತಾರೆ ಮತ್ತು ಹೋಟೆಲ್‌ಗೆ ತರುತ್ತಾರೆ ಎಂದು ಬಹಿರಂಗಪಡಿಸಿದರು.

ಪ್ರಭ್ಸಿಮ್ರನ್ ಸಿಂಗ್ ಐಪಿಎಲ್ 2019ನೇ ಆವೃತ್ತಿಯಿಂದ ಪಿಬಿಕೆಎಸ್ ತಂಡದ ಭಾಗವಾಗಿದ್ದಾರೆ. ಅವರನ್ನು ಆರಂಭದಲ್ಲಿ ₹4.80 ಕೋಟಿಗೆ ಖರೀದಿಸಲಾಯಿತು. ವಿಕೆಟ್ ಕೀಪರ್-ಬ್ಯಾಟರ್ ಸದ್ಯ ಫ್ರಾಂಚೈಸಿಯಿಂದ ಪ್ರತಿ ಸೀಸನ್‌ಗೆ ₹4 ಕೋಟಿ ಗಳಿಸುತ್ತಾರೆ.

'ಅವರು ಮೃದುವಾಗಿ ಮಾತನಾಡುವವರು, ಒಳ್ಳೆಯ ನಡವಳಿಕೆಯವರು ಮತ್ತು ತುಂಬಾ ಸಿಹಿಯಾಗಿರುತ್ತಾರೆ. ಅವರ ತಾಯಿ ಪ್ರತಿ ಐಪಿಎಲ್‌ನಲ್ಲಿ ಇಡೀ ತಂಡಕ್ಕಾಗಿ (ಕಾದಿ ಚಾವಲ್ ಮತ್ತು ಭರ್ತಾ ಸೇರಿದಂತೆ) ಆಹಾರವನ್ನು ತಯಾರಿಸಿ ಹೋಟೆಲ್‌ಗೆ ತರುತ್ತಾರೆ. ಅವರು ಬೆಂಚ್ ಮೇಲೆ ಕುಳಿತಾಗ ದೂರು ನೀಡುವುದನ್ನು ಅಥವಾ ತಡವಾಗಿ ಬರುವುದನ್ನು ನಾನು ಎಂದಿಗೂ ಕೇಳಿಲ್ಲ. ಅವರು ಮಿಂಚುವುದನ್ನು ನೋಡುವುದು ನನಗೆ ತುಂಬಾ ಸಂತೋಷ ನೀಡುತ್ತದೆ. ಏಕೆಂದರೆ, ಒಳ್ಳೆಯ ವ್ಯಕ್ತಿ ಗೆಲ್ಲುವುದನ್ನು ನೋಡುವುದಕ್ಕಿಂತ ಹೆಚ್ಚಿನ ಪ್ರತಿಫಲ ಇನ್ನೊಂದಿಲ್ಲ. ಕ್ಷಮಿಸಿ, ನಿಮ್ಮ ಬರಹವು ನನ್ನ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ನಾನು ಅದರ ಬಗ್ಗೆ ಕಮೆಂಟ್ ಮಾಡದೆ ಇರಲು ಸಾಧ್ಯವಾಗಲಿಲ್ಲ' ಎಂದು ಪ್ರೀತಿ ಜಿಂಟಾ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ ಪ್ರಭ್ಸಿಮ್ರನ್ ಬಗ್ಗೆ ಬರೆದಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡವು ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆಯಲಿರುವ ಐಪಿಎಲ್ 2026 ಪಂದ್ಯದಲ್ಲಿ ಗೆಲುವಿನ ಓಟ ಮುಂದುವರಿಸಲು ಟೇಬಲ್-ಟಾಪರ್ ಪಂಜಾಬ್ ಕಿಂಗ್ಸ್ ತಮ್ಮ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಅನ್ನು ಅವಲಂಬಿಸಲಿದೆ.

ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿರುವ ಪಿಬಿಕೆಎಸ್, ಈ ಆವೃತ್ತಿಯಲ್ಲಿ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು +1.067 ರ ಆರೋಗ್ಯಕರ ನೆಟ್ ರನ್ ರೇಟ್‌ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಶ್ಮೀರದಲ್ಲಿ ಅಮೆರಿಕಾದ ಪ್ರಜೆ ಬಂಧನ: ಅಲ್ಲಿ ಆತ ಮಾಡ್ತಿದಿದ್ದೇನು?

ದೀದಿಗೆ ಶಾಕ್: ಬಾಂಗ್ಲಾದ ನೂತನ ರಾಯಭಾರಿಯಾಗಿ TMC ಮಾಜಿ ನಾಯಕ ದಿನೇಶ್ ತ್ರಿವೇದಿ ನೇಮಕ?

ಕೈಯಲ್ಲಿ 'ಗನ್' ಲೈಟರ್, ತ್ರಿಬಲ್ ರೈಡಿಂಗ್, ಬೈಕ್ ಸ್ಟಂಟ್ Reels: ಭೀಕರ ಅಪಘಾತ, ಮೂವರು ಸಹೋದರರ ಸಾವು! Video

ರಾಜ್ಯ ಸರ್ಕಾರದಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ 1.2 ಕೋಟಿ ರೂ ಮೌಲ್ಯದ ವಿಶೇಷ ಕಾರು!

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 23 ಸಾವು, ಹಲವರಿಗೆ ಗಾಯ; ಸಿಎಂ ಸ್ಟಾಲಿನ್ ಸಂತಾಪ!

SCROLL FOR NEXT