ಅಜಿಂಕ್ಯ ರಹಾನೆ 
ಕ್ರಿಕೆಟ್

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ವಿದಾಯ: ಅಜಿಂಕ್ಯ ರಹಾನೆಗೆ BCCI ನಿಗದಿಪಡಿಸಿರುವ ಮಾಸಿಕ ಪಿಂಚಣಿ ಎಷ್ಟು?

ಬಿಸಿಸಿಐ ಮಾರ್ಗಸೂಚಿಗಳ ಅನ್ವಯ, 25 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರರನ್ನು ಅತ್ಯುನ್ನತ ಪಿಂಚಣಿ ಶ್ರೇಣಿಗೆ ಪರಿಗಣಿಸಲಾಗುತ್ತದೆ.

ಮಾಜಿ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ. ಟೆಸ್ಟ್, ಟಿ20 ಮತ್ತು ಏಕದಿನ ಮಾದರಿಯಲ್ಲಿ ತಮ್ಮ ಬ್ಯಾಟಿಂಗ್‌ನಿಂದಲೇ ಛಾಪು ಮೂಡಿಸಿದ್ದ ಕ್ರಿಕೆಟಿಗ ನಿವೃತ್ತಿ ಘೋಷಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗದೇ ದೂರ ಉಳಿದಿದ್ದ ಅಜಿಂಕ್ಯ ರಹಾನೆ ಕಣ್ಣೀರು ಹಾಕಿ ವಿದಾಯ ಹೇಳಿದ್ದಾರೆ. ಇನ್ನು, ಅಜಿಂಕ್ಯ ರಹಾನೆ ನಿವೃತ್ತಿಯ ನಂತರ ಬಿಸಿಸಿಐನಿಂದ ಪ್ರತಿ ತಿಂಗಳು ಪಿಂಚಣಿ ಎಷ್ಟು ಪಡೆಯುತ್ತಾರೆ ಎಂಬ ಮಾಹಿತಿ ಇಲ್ಲಿದೆ.

ಬಿಸಿಸಿಐ ಮಾರ್ಗಸೂಚಿಗಳ ಅನ್ವಯ, 25 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರರನ್ನು ಅತ್ಯುನ್ನತ ಪಿಂಚಣಿ ಶ್ರೇಣಿಗೆ ಪರಿಗಣಿಸಲಾಗುತ್ತದೆ. ಈ ಸ್ಲ್ಯಾಬ್ ಅಡಿಯಲ್ಲಿ ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ಪ್ರತಿ ತಿಂಗಳು 70,000 ರೂಪಾಯಿಗಳ ಗರಿಷ್ಠ ಪಿಂಚಣಿಯನ್ನು ನೀಡುತ್ತಿದೆ. ಈ ಹಿಂದೆ ಆಟಗಾರರು ಮಾಸಿಕ 50,000 ರೂ. ಗಳಿಸುತ್ತಿದ್ದರು, ಆದರೆ ನಾಲ್ಕು ವರ್ಷಗಳ ಹಿಂದೆ ತಿಂಗಳಿಗೆ 70,000 ರೂ.ಗೆ ಪರಿಷ್ಕರಿಸಲಾಯಿತು.

ಆದ್ದರಿಂದ, ರಹಾನೆ ಈಗ ಸ್ಥಿರ ಪಿಂಚಣಿಯಾಗಿ ತಿಂಗಳಿಗೆ 70,000 ರೂ. ಗಳಿಸಲಿದ್ದಾರೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಪಿಂಚಣಿ ಮೊತ್ತವನ್ನು ಪರಿಷ್ಕರಿಸುವ ನಿರ್ಧಾರವನ್ನು ಘೋಷಿಸಲಾಯಿತು. ನಮ್ಮ ಮಾಜಿ ಕ್ರಿಕೆಟಿಗರ ಆರ್ಥಿಕ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಆಟಗಾರರು ಜೀವನಾಡಿಯಾಗಿ ಉಳಿದಿದ್ದಾರೆ ಎಂದು ಗಂಗೂಲಿ ಆ ಸಮಯದಲ್ಲಿ ಹೇಳಿದರು.

ಭಾರತ ತಂಡದ ಪರವಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಸುಮಾರು 85 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜಿಂಕ್ಯ ರಹಾನೆ ಅವರು ಈ ಉನ್ನತ ಶ್ರೇಣಿಯ ಪಿಂಚಣಿ ಸೌಲಭ್ಯವನ್ನು ಪಡೆಯಲು ಸಂಪೂರ್ಣ ಅರ್ಹರಾಗಿದ್ದಾರೆ.

ಪಿಂಚಣಿ ಯೋಜನೆಗಾಗಿ ನಿಧಿಯನ್ನು ಬಿಸಿಸಿಐನ ನಿಯಮಿತ ಕಾರ್ಯನಿರ್ವಹಣಾ ಬಜೆಟ್ ಬದಲಿಗೆ ಒಂದು ವಿಶೇಷ ಕಲ್ಯಾಣ ವ್ಯವಸ್ಥೆಯಿಂದ ಸಂಗ್ರಹಿಸಲಾಗುತ್ತದೆ. ನಿವೃತ್ತ ಆಟಗಾರರಿಗೆ ಸಹಾಯ ಮಾಡಲು ಮಂಡಳಿಯು ನಿರ್ದಿಷ್ಟವಾಗಿ ಪ್ಲಾಟಿನಂ ಜುಬಿಲಿ ಕಾರ್ಪಸ್ ಫಂಡ್ ಮತ್ತು ಪ್ರತ್ಯೇಕ ಕಲ್ಯಾಣ ನಿಧಿಯನ್ನು ನಿರ್ವಹಿಸುತ್ತದೆ. ಈ ನಿಧಿಯ ದೊಡ್ಡ ಭಾಗವು ಐಪಿಎಲ್ ಪ್ಲೇಆಫ್ ಪಂದ್ಯಗಳು ಮತ್ತು ಸ್ಟೇಡಿಯಂನಲ್ಲಿ ಟಿಕೆಟ್ ಮಾರಾಟದಿಂದ ಬರುವ ಆದಾಯದಿಂದ ಬರುತ್ತದೆ.

ಬಿಸಿಸಿಐನ ಕಲ್ಯಾಣ ನೀತಿಯು ಕೇವಲ ಪ್ರತಿ ತಿಂಗಳು ಪಿಂಚಣಿ ನೀಡುವುದಕ್ಕೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟಿಗರ ಸಂಘದ ಜಂಟಿ ವೈದ್ಯಕೀಯ ವಿಮಾ ಯೋಜನೆಯಡಿ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗರು ₹10 ಲಕ್ಷದವರೆಗೆ ವೈದ್ಯಕೀಯ ಸೌಲಭ್ಯಕ್ಕೆ (ಮೆಡಿಕಲ್ ಕವರೇಜ್) ಅರ್ಹರಾಗಿರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆ, 20 ಸಚಿವರ ಪಟ್ಟಿಗೆ ಹೈಕಮಾಂಡ್ ಅಸ್ತು..?

ಪೆರುವಿನಲ್ಲಿ ಭೀಕರ ದುರಂತ: ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿ ಸ್ಫೋಟಗೊಂಡ ವಿಮಾನ, 11 ವಿದೇಶಿ ಪ್ರವಾಸಿಗರು ಸೇರಿ 13 ಮಂದಿ ದುರ್ಮರಣ..!

35 ವರ್ಷಗಳಿಂದ ಲೆಕ್ಕಪರಿಶೋಧನೆ ಇಲ್ಲ...! ಕೂಡಲಸಂಗಮ ಮಂಡಳಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ DCM ಪರಮೇಶ್ವರ್..!

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!