ದುಲೀಪ್ ಟ್ರೋಫಿ ಪಂದ್ಯದಲ್ಲಿ ಬೌಲಿಂಗ್ ಮಾಡಿದ ವೈಭವ್ ಸೂರ್ಯವಂಶಿ 
ಕ್ರಿಕೆಟ್

Duleep Trophy: ಬ್ಯಾಟಿಂಗ್‌ನಲ್ಲಿ ವಿಫಲ; ಬೌಲರ್ ಆಗಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದ ವೈಭವ್ ಸೂರ್ಯವಂಶಿ! BCC ಪ್ರತಿಕ್ರಿಯೆ

ಈಸ್ಟ್ ಝೋನ್ ಮತ್ತು ನಾರ್ತ್ ಈಸ್ಟ್ ಝೋನ್ ನಡುವಿನ ದುಲೀಪ್ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಕೇವಲ 8 ರನ್‌ಗಳಿಗೆ ಔಟ್ ಆಗುವ ಮೂಲಕ, ವೈಭವ್ ಸೂರ್ಯವಂಶಿ ಅವರ ಬಹುನಿರೀಕ್ಷಿತ ಪದಾರ್ಪಣೆ ಸ್ಮರಣೀಯವಾಗಿರಲಿಲ್ಲ.

ನಾರ್ತ್ ಈಸ್ಟ್ ಝೋನ್ ವಿರುದ್ಧದ ದುಲೀಪ್ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್‌ನ ವೈಭವ್ ಸೂರ್ಯವಂಶಿ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳು ಮನೆಮಾಡಿದ್ದವು. ಆದರೆ, ಅವರು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು; ಎರಡು ಬೌಂಡರಿಗಳನ್ನು ಬಾರಿಸಿದರೂ, ಕೇವಲ ಆರು ಎಸೆತಗಳಲ್ಲಿ ಎಂಟು ರನ್ ಗಳಿಸಿ ಔಟಾದರು. ಆದಾಗ್ಯೂ, ಸುದೀಪ್ ಕುಮಾರ್ ಘರಾಮಿ (146) ಮತ್ತು ಶಹಬಾಜ್ ಅಹ್ಮದ್ (167) ಅವರ ಭರ್ಜರಿ ಆಟದ ನೆರವಿನಿಂದ ತಂಡವು ದೊಡ್ಡ ಗೆಲುವಿನತ್ತ ದಾಪುಗಾಲು ಹಾಕಿತು. ಈಸ್ಟ್ ಝೋನ್ ಮೊದಲ ಇನಿಂಗ್ಸ್‌ನಲ್ಲಿ 467 ರನ್ ಕಲೆಹಾಕಿತು. ಈಸ್ಟ್ ಝೋನ್ ಬೌಲರ್‌ಗಳು ನಾರ್ತ್ ಈಸ್ಟ್ ಝೋನ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 111 ರನ್‌ಗಳಿಗೆ ಆಲೌಟ್ ಮಾಡಿದರು ಮತ್ತು ನಂತರ 'ಫಾಲೋ-ಆನ್' ಹೇರಿದರು.

ಎರಡನೇ ಇನಿಂಗ್ಸ್‌ನಲ್ಲೂ ಪರಿಸ್ಥಿತಿ ಉತ್ತಮವಾಗಿಲ್ಲ, ಏಕೆಂದರೆ ತಂಡವು 90 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಸ್ಕೋರ್‌ಗೆ ಕಾರಣವಾದ ಪ್ರಮುಖ ಅಂಶವೆಂದರೆ ವೈಭವ್ ಸೂರ್ಯವಂಶಿ ಅವರ ಪ್ರದರ್ಶನ; ಅವರು ನಾರ್ತ್ ಈಸ್ಟ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕಿಶನ್ ಲಿಂಗ್‌ಡೋಹ್ (25) ಮತ್ತು ಇಮ್ಲಿವಾಟಿ ಲೆಮ್ತುರ್ (4) ಅವರನ್ನು ಔಟ್ ಮಾಡಿದರು. ಸೂರ್ಯವಂಶಿ ತಮ್ಮ ಚಾಣಾಕ್ಷ ಎಡಗೈ ಸ್ಪಿನ್ ಬೌಲಿಂಗ್ ಮೂಲಕ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು.

'ವೈಭವ್ ಸೂರ್ಯವಂಶಿ ಅವರಿಂದ ದ್ವಿಗುಣ ಸಂತಸ. ಒಂದೇ ಓವರ್‌ನಲ್ಲಿ 2 ವಿಕೆಟ್‌ಗಳ ಪಡೆಯುವ ಜೊತೆಗೆ, 2 ಅತ್ಯುತ್ತಮ ಕ್ಯಾಚ್‌ಗಳನ್ನೂ ಹಿಡಿದಿದ್ದಾರೆ' ಎಂದು ಬಿಸಿಸಿಐ 'ಎಕ್ಸ್' (X) ನಲ್ಲಿನ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

ಇದೇ ವೇಳೆ, ಸೂರ್ಯವಂಶಿಯ ಜರ್ಸಿ ಸಂಖ್ಯೆಯ ಮೇಲೆ ಟೇಪ್ ಅಂಟಿಸಲಾಗಿದ್ದು, ಅದರಲ್ಲಿ ಕೇವಲ '3' ಎಂಬ ಸಂಖ್ಯೆ ಮಾತ್ರ ಕಾಣುವಂತಿತ್ತು. ಹೀಗೆ ಟೇಪ್ ಅಂಟಿಸಲು ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ, 15 ವರ್ಷದ ಆಟಗಾರನು ತನ್ನ ಸಂಖ್ಯೆಯನ್ನು '3' ಆಗಿಯೇ ಉಳಿಸಿಕೊಳ್ಳುವ ಉದ್ದೇಶದಿಂದ ಹಾಗೆ ಮಾಡಿರಬಹುದು ಎನ್ನಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಪರವಾಗಿ ಸೂರ್ಯವಂಶಿ ಧರಿಸುವ ಸಂಖ್ಯೆ '3' ಆಗಿದೆ. ಬಹುಶಃ ಮುದ್ರಣ ದೋಷವೊಂದನ್ನು ಮರೆಮಾಚುವ ಉದ್ದೇಶದಿಂದ ಅವರ ದುಲೀಪ್ ಟ್ರೋಫಿ ಜೆರ್ಸಿಯ ಮೇಲೆ ಟೇಪ್ ಅಂಟಿಸಿರಬಹುದು.

ಈಸ್ಟ್ ಝೋನ್ ಮತ್ತು ನಾರ್ತ್ ಈಸ್ಟ್ ಝೋನ್ ನಡುವಿನ ದುಲೀಪ್ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಕೇವಲ 8 ರನ್‌ಗಳಿಗೆ ಔಟ್ ಆಗುವ ಮೂಲಕ, ವೈಭವ್ ಸೂರ್ಯವಂಶಿ ಅವರ ಬಹುನಿರೀಕ್ಷಿತ ಪದಾರ್ಪಣೆ ಸ್ಮರಣೀಯವಾಗಿರಲಿಲ್ಲ. ಕೇವಲ 15 ವರ್ಷದ ಅವರು ಉಪನಾಯಕನಾಗಿ ನೇಮಕಗೊಂಡಿದ್ದು, ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಎರಡು ಬೌಂಡರಿಗಳನ್ನು ಬಾರಿಸಿದ ನಂತರ, ಈ ಎಡಗೈ ಬ್ಯಾಟರ್ ತಮ್ಮ ಆರನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆದಾಗ್ಯೂ, ಸೂರ್ಯವಂಶಿ ಪೆವಿಲಿಯನ್‌ಗೆ ಮರಳುತ್ತಿದ್ದಾಗ ಒಂದು ಕುತೂಹಲಕಾರಿ ವಿಷಯ ಗಮನಕ್ಕೆ ಬಂತು: ಅವರ ಜೆರ್ಸಿ ಸಂಖ್ಯೆಯ ಅರ್ಧ ಭಾಗವನ್ನು ಟೇಪ್‌ನಿಂದ ಮುಚ್ಚಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ