ಪಾಕಿಸ್ತಾನ vs ಬಾರತ Gareth Copley
ಕ್ರಿಕೆಟ್

T20 World Cup 2026: ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದರೆ ICCಗೆ ಸಾವಿರಾರು ಕೋಟಿ ರೂಪಾಯಿ ನಷ್ಟ!

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ, ಎರಡು ಸಾಂಪ್ರದಾಯಿಕ ಎದುರಾಳಿಗಳು ಬಹು-ರಾಷ್ಟ್ರಗಳ ಈವೆಂಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದೀಗ ಸಂಕಷ್ಟದಲ್ಲಿದೆ. 2026ರ ಟಿ20 ವಿಶ್ವಕಪ್‌ ಆರಂಭಕ್ಕೆ ದಿನಗಣನೆ ಎದುರಾಗಿದ್ದು, ಪಂದ್ಯಾವಳಿ ಇದೀಗ ಸಾಕಷ್ಟು ವಿಚಾರಗಳಿಗಾಗಿ ಸುದ್ದಿಯಲ್ಲಿದೆ. ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನ ಸರ್ಕಾರದ ನಿರ್ಧಾರವು ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ಭಾರಿ ನಷ್ಟಕ್ಕೆ ಕಾರಣವಾಗಬಹುದು.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ, ಎರಡು ಸಾಂಪ್ರದಾಯಿಕ ಎದುರಾಳಿಗಳು ಬಹು-ರಾಷ್ಟ್ರಗಳ ಈವೆಂಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಅದು ಕೇವಲ ಐಸಿಸಿ ಈವೆಂಟ್‌ಗಳಾದ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾಗೂ ಎಸಿಸಿಯ ಏಷ್ಯಾ ಕಪ್‌ನ ಎಲ್ಲ ಪ್ರಕಾರಗಳಲ್ಲಿ ಮಾತ್ರ ಉಭಯ ತಂಡಗಳು ಸೆಣಸಾಡುತ್ತವೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಕೊರತೆಯಿಂದಾಗಿ ಈ ಘರ್ಷಣೆಗಳಿಗೆ ಸಾಮಾನ್ಯವಾಗಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಪಂದ್ಯಗಳಿಗೆ ಪೂರ್ವ ಷರತ್ತಿನ ಮೇಲೆ ಐಸಿಸಿಗೆ ಪ್ರಸಾರಕರು ಭಾರಿ ಮೊತ್ತವನ್ನು ಪಾವತಿಸಲು ಸಿದ್ಧರಿದ್ದಾರೆ. ಅದಕ್ಕಾಗಿಯೇ ಐಸಿಸಿ ಕಾರ್ಯಕ್ರಮಗಳಲ್ಲಿ ಉಭಯ ತಂಡಗಳನ್ನು ಒಂದೇ ಗುಂಪಿನಲ್ಲಿ ಇರಿಸಲಾಗುತ್ತದೆ.

ದಿ ಏಜ್ ಪ್ರಕಾರ, 2023 ರಿಂದ 2027ರವರೆಗಿನ ಪುರುಷರ ಐಸಿಸಿ ಕಾರ್ಯಕ್ರಮಗಳ ಪ್ರಸಾರ ಹಕ್ಕುಗಳ ಚಕ್ರವು 3 ಬಿಲಿಯನ್ ಯುಎಸ್ ಡಾಲರ್ (ಸರಿಸುಮಾರು 27,465 ಕೋಟಿ ರೂ.) ಮೌಲ್ಯದ್ದಾಗಿದೆ. ಈ ಪ್ರಸಾರ ಹಣದ ಶೇ 40 ಕ್ಕಿಂತ ಹೆಚ್ಚು ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಿಂದಲೇ ಬರುತ್ತದೆ.

ಕಳೆದ 3 ವರ್ಷಗಳಲ್ಲಿ, ಎರಡೂ ರಾಷ್ಟ್ರಗಳು ಪ್ರತಿ ಐಸಿಸಿ ಈವೆಂಟ್‌ಗಳಲ್ಲಿ ಮುಖಾಮುಖಿಯಾಗಿವೆ. 2023ರ ಏಕದಿನ ವಿಶ್ವಕಪ್, 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಂಡಿವೆ. ಈ ಪ್ರತಿಯೊಂದು ಪಂದ್ಯಗಳ ಮೌಲ್ಯ $ 250 ಮಿಲಿಯನ್ (ಅಂದಾಜು 2289 ಕೋಟಿ ರೂ.) ಆಗಿದೆ.

2026ರ ಟಿ20 ವಿಶ್ವಕಪ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಯೋಜಿಸಿದಂತೆ ನಡೆಯದಿದ್ದರೆ, ಐಸಿಸಿ ಕಾಲು ಬಿಲಿಯನ್ ಡಾಲರ್‌ಗಳನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ಹಕ್ಕುದಾರ ಜಿಯೋಸ್ಟಾರ್ ಕೂಡ ನಷ್ಟವನ್ನು ಅನುಭವಿಸುತ್ತದೆ ಮತ್ತು ಪ್ರತಿಯಾಗಿ, ಈ ನಷ್ಟವನ್ನು ತುಂಬಿಕೊಡಲು ಅಥವಾ ಈ ಸೈಕಲ್‌ನ ಮೌಲ್ಯವನ್ನು ಕಡಿಮೆ ಮಾಡಲು ಐಸಿಸಿಗೆ ಕೇಳುತ್ತದೆ.

ಹಾಗೆ ಸಂಭವಿಸಿದಲ್ಲಿ, ಎಲ್ಲ ಕ್ರಿಕೆಟ್ ರಾಷ್ಟ್ರಗಳ ಆದಾಯ ಕಡಿಮೆಯಾಗುವುದಲ್ಲದೆ, ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) 2026ರ ಟಿ20 ವಿಶ್ವಕಪ್‌ನಿಂದ ಅವರ ಗಳಿಕೆಯನ್ನು ಸಹ ತಡೆಹಿಡಿಯುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಪಾರ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ': ಸುಂಕ ಕಡಿತದ ನಂತರ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ

'Mogambo Khush Hai': ಭಾರತ-ಯುಎಸ್ ವ್ಯಾಪಾರ ಒಪ್ಪಂದ ಕುರಿತು ಕಾಂಗ್ರೆಸ್ ವಾಗ್ದಾಳಿ!

ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ತಗ್ಗಿದ ಅಪರಾಧ ಪ್ರಮಾಣ: ಗಡಿಗಳ ಮೂಲಕ ಅಕ್ರಮ ಬಾಂಗ್ಲಾದೇಶಿಗಳ ಪ್ರವೇಶ; ಗಡಿ ಕಾಪಾಡುವ ಜವಾಬ್ದಾರಿ ಯಾರದ್ದು?

ಸಿಜೆ ರಾಯ್ ಮಾನಸಿಕ ಒತ್ತಡ, ಖಿನ್ನತೆಯಿಂದ ಬಳಲುತ್ತಿದ್ದರು: SIT ತನಿಖೆ ವೇಳೆ ಮಾಹಿತಿ ಬಹಿರಂಗ!

ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ- ಪ್ರಿಯಾಂಕ್ ಖರ್ಗೆ

SCROLL FOR NEXT