ಕ್ರಿಕೆಟ್

T20 World Cup: ಭಾರತಕ್ಕೆ ಬರದಿದ್ದರೇ ಟೂರ್ನಿಯಿಂದ ಹೊರಕ್ಕೆ; ಬಾಂಗ್ಲಾಗೆ ಐಸಿಸಿ 24 ಗಂಟೆ ಅಂತಿಮ ಗಡುವು!

ಐಸಿಸಿ ಮಂಡಳಿ ಸಭೆಯಲ್ಲಿ ಬಾಂಗ್ಲಾದೇಶಕ್ಕೆ ಅಂತಿಮ ಗಡುವು ನೀಡಲಾಗಿದೆ. ಬಹುಮತದ ಮತದ ಆಧಾರದ ಮೇಲೆ ಭಾರತದಲ್ಲಿ ಆಡುವುದು ಅಥವಾ ಟೂರ್ನಿಯಿಂದ ಹೊರಹೋಗುವುದು ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಬಾಂಗ್ಲಾದೇಶಕ್ಕೆ ಸೂಚಿಸಲಾಗಿದೆ.

2026ರ ಟಿ20 ವಿಶ್ವಕಪ್ ಪ್ರಾರಂಭಕ್ಕೂ ಮುನ್ನವೇ ಭುಗಿಲೆದ್ದಿರುವ ವಿವಾದವನ್ನು ಪರಿಹರಿಸಲು ಇಂದು ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಬಾಂಗ್ಲಾದೇಶಕ್ಕೆ ಅಂತಿಮ ಗಡುವು ನೀಡಲಾಗಿದೆ. ಬಹುಮತದ ಮತದ ಆಧಾರದ ಮೇಲೆ ಭಾರತದಲ್ಲಿ ಆಡುವುದು ಅಥವಾ ಟೂರ್ನಿಯಿಂದ ಹೊರಹೋಗುವುದು ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಅವರಿಗೆ ಸೂಚಿಸಲಾಗಿದೆ. ಬಾಂಗ್ಲಾದೇಶ 24 ಗಂಟೆಗಳ ಒಳಗೆ ಈ ಬಗ್ಗೆ ನಿರ್ಧರಿಸಬೇಕು. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತಮ್ಮ ಪಂದ್ಯವನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯನ್ನು ಕೋರಿತ್ತು. ಬುಧವಾರ ನಡೆದ ಸಭೆಯಲ್ಲಿ ಐಸಿಸಿ ಅವರ ಎಲ್ಲಾ ಬೇಡಿಕೆಗಳನ್ನು ತಿರಸ್ಕರಿಸಿದ್ದು 24 ಗಂಟೆಯೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಅಂತಿಮ ಗಡುವು ನೀಡಿದೆ.

ಐಸಿಸಿ ಮಂಡಳಿಯ ಸಭೆಯಲ್ಲಿ ಎಲ್ಲಾ ಪೂರ್ಣ ಸದಸ್ಯ ರಾಷ್ಟ್ರಗಳ ನಿರ್ದೇಶಕರು ಭಾಗವಹಿಸಿದ್ದರು. ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಜೊತೆಗೆ, ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಎಸ್‌ಎಲ್‌ಸಿ ಅಧ್ಯಕ್ಷ ಶಮ್ಮಿ ಸಿಲ್ವಾ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಕ್ರಿಕೆಟ್ ಆಸ್ಟ್ರೇಲಿಯಾ ಅಧ್ಯಕ್ಷ ಮೈಕ್ ಬೈರ್ಡ್, ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ತವೆಂಗಾ ಮುಕುಹ್ಲಾನಿ, ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷ ಕಿಶೋರ್ ಶಾಲೋ, ಕ್ರಿಕೆಟ್ ಐರ್ಲೆಂಡ್ ಅಧ್ಯಕ್ಷ ಬ್ರಿಯಾನ್ ಮೆಕ್‌ನೈಸ್, ಕ್ರಿಕೆಟ್ ನ್ಯೂಜಿಲೆಂಡ್ ಪ್ರತಿನಿಧಿ ರೋಜರ್ ಟ್ವಾಸ್, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಿಚರ್ಡ್ ಥಾಂಪ್ಸನ್, ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರತಿನಿಧಿ ಮೊಹಮ್ಮದ್ ಮೂಸಾಜಿ ಮತ್ತು ಕ್ರಿಕೆಟ್ ಅಫ್ಘಾನಿಸ್ತಾನ ಅಧ್ಯಕ್ಷ ಮಿರ್ವೈಸ್ ಅಶ್ರಫ್ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಐಸಿಸಿಯ ಉನ್ನತ ನಿರ್ವಹಣಾ ಅಧಿಕಾರಿಗಳು ಮತ್ತು ಭ್ರಷ್ಟಾಚಾರ ವಿರೋಧಿ ಮುಖ್ಯಸ್ಥ ಆಂಡ್ರ್ಯೂ ಎಫ್‌ಗ್ರೇವ್ ಕೂಡ ಭಾಗವಹಿಸಿದ್ದರು.

2026ರ ಟಿ20 ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳನ್ನು ಆಡಲು ಭಾರತಕ್ಕೆ ಬಾಂಗ್ಲಾದೇಶವು ಪ್ರಯಾಣಿಸಲು ನಿರಾಕರಿಸುವುದನ್ನು ಮುಂದುವರಿಸಿದರೆ, ಬದಲಿ ತಂಡವನ್ನು ಪಂದ್ಯಾವಳಿಯಲ್ಲಿ ಸೇರಿಸಲಾಗುವುದು ಎಂದು ಐಸಿಸಿ ಹೇಳಿದೆ. ಮತದಾನದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಇದರಲ್ಲಿ ಐಸಿಸಿ ಮಂಡಳಿಯ ಬಹುಪಾಲು ಸದಸ್ಯರು ಬದಲಿ ತಂಡದ ಪರವಾಗಿ ಮತ ಚಲಾಯಿಸಿದರು. ಭಾರತದಲ್ಲಿ ಆಡುವ ಬಗ್ಗೆ ಐಸಿಸಿ ತನ್ನ ನಿಲುವಿಗೆ ಪ್ರತಿಕ್ರಿಯಿಸಲು ಬಿಸಿಬಿಗೆ ಇನ್ನೂ ಒಂದು ದಿನದ ಕಾಲಾವಕಾಶ ನೀಡಲಾಗಿದೆ. ಬಾಂಗ್ಲಾದೇಶ ಭಾಗವಹಿಸದಿದ್ದರೆ, ಸ್ಕಾಟ್ಲೆಂಡ್ ಅನ್ನು ವಿಶ್ವಕಪ್ ಸ್ಥಾನಕ್ಕೆ ಪರಿಗಣಿಸಬಹುದು ಎಂದು ಸೂಚಿಸುವ ವರದಿಯೊಂದು ಹೊರಬಿದ್ದಿದೆ.

ಮುಂಬೈ ಇಂಡಿಯನ್ಸ್ ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ ನನ್ನು ಐಪಿಎಲ್ 2026 ರಿಂದ ಬಿಡುಗಡೆ ಮಾಡಿದ ನಂತರ ವಿವಾದ ಪ್ರಾರಂಭವಾಯಿತು. ಇದು ಬಾಂಗ್ಲಾದೇಶದಲ್ಲಿ ಭದ್ರತೆ ಮತ್ತು ತಂಡದ ಪರಿಸರದ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿತು. ಭಾರತ ಪ್ರವಾಸದ ಬಗ್ಗೆ ಭದ್ರತಾ ಕಳವಳಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಂಡವು ಶ್ರೀಲಂಕಾದಲ್ಲಿ ಆಡಬೇಕೆಂದು ಒತ್ತಾಯಿಸಿತು. ಗ್ರೂಪ್ ಬಿ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುತ್ತಿರುವುದರಿಂದ ಬಾಂಗ್ಲಾದೇಶವನ್ನು ಗ್ರೂಪ್ ಸಿ ಯಿಂದ ಗ್ರೂಪ್ ಬಿ ಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿತ್ತು.

ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ತನ್ನ ಲೀಗ್ ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆಡಲಿದೆ. ಬಾಂಗ್ಲಾದೇಶದ ಮೊದಲ ಪಂದ್ಯ ಫೆಬ್ರವರಿ 7 ರಂದು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಇದರ ನಂತರ, ತಂಡವು ಕೋಲ್ಕತ್ತಾದಲ್ಲಿ ಇನ್ನೂ ಎರಡು ಗುಂಪು ಪಂದ್ಯಗಳನ್ನು ಆಡಲಿದ್ದು, ಅಂತಿಮ ಪಂದ್ಯ ಮುಂಬೈನಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!

Toxic: ಯಶ್ ಜೊತೆಗೆ ಕಿಯಾರಾ ಬೋಲ್ಡ್ ಅವತಾರ, ಟ್ರೋಲರ್ ಗಳ ಬಾಯಿ ಮುಚ್ಚಿಸಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ!

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video