ರವಿ ಶಾಸ್ತ್ರಿ ಮತ್ತು ಶ್ರೇಯಸ್ ಅಯ್ಯರ್  Photo | AFP and X
ಕ್ರಿಕೆಟ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ವೇಳೆ ರವಿ ಶಾಸ್ತ್ರಿ ಎಡವಟ್ಟು; ದಂಗಾದ ಶ್ರೇಯಸ್ ಅಯ್ಯರ್!

ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಸರಣಿ ಸೋತ ನಂತರ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಪ್ರವಾಸ ಕೈಗೊಂಡಿದೆ.

ಬುಧವಾರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಟಾಸ್ ವೇಳೆ ರವಿಶಾಸ್ತ್ರಿ ಮಾಡಿದ ಎಡವಟ್ಟು ಭಾರತದ ಟಿ20 ನಾಯಕ ಶ್ರೇಯಸ್ ಅಯ್ಯರ್ ಅವರನ್ನು ದಿಗ್ಭ್ರಮೆಗೊಳಿಸಿತು. ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ಆತಿಥೇಯ ತಂಡದ ನಾಯಕ ಹ್ಯಾರಿ ಬ್ರೂಕ್ ಗಾಳಿಯಲ್ಲಿ ನಾಣ್ಯವನ್ನು ಚಿಮ್ಮಿದರು ಮತ್ತು ಅಯ್ಯರ್ ಸರಿಯಾದ ನಿರ್ಧಾರ ತೆಗೆದುಕೊಂಡರು. ಟಾಸ್ ಗೆದ್ದ ನಂತರ ಭಾರತದ ನಾಯಕ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ನಂತರ ನಿರೂಪಕ ಶಾಸ್ತ್ರಿ ಅಯ್ಯರ್ ಅವರೊಂದಿಗೆ ಸಂವಾದವನ್ನು ಪ್ರಾರಂಭಿಸಿದರು. ನಾಯಕ ಪ್ಲೇಯಿಂಗ್ ಇಲೆವೆನ್‌ನಲ್ಲಿನ ಸಂಯೋಜನೆಯನ್ನು ಬಹಿರಂಗಪಡಿಸಿದ ತಕ್ಷಣ ಶಾಸ್ತ್ರಿ, 'ಮತ್ತು ನೀವು ಫೀಲ್ಡಿಂಗ್ ಮಾಡುತ್ತಿದ್ದೀರಿ' ಎಂದು ಹೇಳಿದರು. ಅವರ ಹೇಳಿಕೆಯು ಅಯ್ಯರ್ ಅವರನ್ನು ದಿಗ್ಭ್ರಮೆಗೊಳಿಸಿತು. ನಂತರ ಅವರು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಪುನರುಚ್ಚರಿಸಿದರು.

'ಹಿಂದಿನ ಸರಣಿ ಮುಗಿದ ಅಧ್ಯಾಯ. ಇದೀಗ ಹೊಸ ಸರಣಿ ಆರಂಭವಾಗುತ್ತಿದೆ; ಐದು ಪಂದ್ಯಗಳಿದ್ದು, ಗೆಲ್ಲಲು ಎಲ್ಲ ಅವಕಾಶಗಳಿವೆ. ನಿಸ್ಸಂದೇಹವಾಗಿ, ಇದೊಂದು ಉತ್ತಮ ಅವಕಾಶ. ನಾಯಕನಾಗಿ ಇದು ನನ್ನ ಎರಡನೇ ಸರಣಿ, ಹಾಗಾಗಿ ನಾನು ಸಾಕಷ್ಟು ಉತ್ಸುಕನಾಗಿದ್ದೇನೆ. ನಮಗೆ ಬೇಕಾದದ್ದು ಸಿಕ್ಕಿದೆ; ನಿನ್ನೆ ಇಲ್ಲಿ ಅಭ್ಯಾಸ ನಡೆಸಿದ್ದೇವೆ ಮತ್ತು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದೇವೆ. ಹೀಗಾಗಿ, ರೋಚಕ ಸರಣಿಯನ್ನು ಎದುರು ನೋಡುತ್ತಿದ್ದೇನೆ' ಎಂದು ಟಾಸ್ ಗೆದ್ದ ಅಯ್ಯರ್ ಹೇಳಿದರು.

ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಸರಣಿ ಸೋತ ನಂತರ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಪ್ರವಾಸ ಕೈಗೊಂಡಿದೆ. ಐರಿಶ್ ತಂಡವು ಮೊದಲ ಪಂದ್ಯದಲ್ಲಿ ಅಯ್ಯರ್ ಮತ್ತು ತಂಡವನ್ನು 34 ರನ್‌ಗಳ ಅಂತರದಿಂದ ಸೋಲಿಸಿ, ನಂತರ ಎರಡನೇ ಪಂದ್ಯದಲ್ಲಿ ಒಂದು ರನ್‌ನಿಂದ ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿತು.

'ಐರ್ಲೆಂಡ್ ಸರಣಿ ಇತಿಹಾಸ. ಆ ಸರಣಿಯಿಂದ ನಾವು ಬಹಳಷ್ಟು ಕಲಿಯಬೇಕಾಗಿದೆ. ಮತ್ತು ಇಲ್ಲಿಗೆ ಬರುತ್ತಿರುವಾಗ, ಇಂಗ್ಲೆಂಡ್ ತಮ್ಮ ಕ್ರಿಕೆಟ್ ಅನ್ನು ಹೇಗೆ ಆಡುತ್ತಿದೆ ಎಂದು ನಮಗೆ ತಿಳಿದಿದೆ. ಆದ್ದರಿಂದ, ಖಂಡಿತವಾಗಿಯೂ ಸ್ವಲ್ಪ ಉತ್ಸಾಹಭರಿತರಾಗಿದ್ದು, ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದುಕೊಂಡಿರುವುದರಿಂದ ಉತ್ತಮವಾದದ್ದನ್ನು ಹೊಂದಲು ಎದುರು ನೋಡುತ್ತಿದ್ದೇನೆ' ಎಂದು ಅಯ್ಯರ್ ಹೇಳಿದರು.

'ಪಿಚ್‌ನಲ್ಲಿ ಸಾಕಷ್ಟು ಹುಲ್ಲು ಇದೆ. ನಾವು ನಿನ್ನೆ ಕೂಡ ಇದೇ ಪಿಚ್‌ನಲ್ಲಿ ಅಭ್ಯಾಸ ಮಾಡಿದ್ದೆವು. ಹಾಗಾಗಿ, ಪಿಚ್ ಹೇಗೆ ವರ್ತಿಸುತ್ತದೆ ಎಂದು ನಿಖರವಾಗಿ ಹೇಳಲಾಗದಿದ್ದರೂ, ನಮ್ಮಲ್ಲಿನ ಉತ್ಸಾಹ ಮತ್ತು ದೃಢಸಂಕಲ್ಪವಂತೂ ಖಂಡಿತವಾಗಿಯೂ ಉನ್ನತ ಮಟ್ಟದಲ್ಲಿರುತ್ತದೆ. ನಾವು ಮೂವರು ಸ್ಪಿನ್ನರ್‌ಗಳು (ಒಬ್ಬ ಆಲ್-ರೌಂಡರ್ ಅಕ್ಷರ್ ಪಟೇಲ್) ಮತ್ತು ಇಬ್ಬರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದ್ದೇವೆ' ಎಂದು ಹೇಳಿದರು.

ಈಮಧ್ಯೆ, 15 ವರ್ಷದ ವೈಭವ್ ಸೂರ್ಯವಂಶಿ ಭಾರತ ತಂಡದ ಪರ ಪದಾರ್ಪಣೆಗಾಗಿ ಕಾಯುತ್ತಲೇ ಇದ್ದಾರೆ; ಏಕೆಂದರೆ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ಐರ್ಲೆಂಡ್ ವಿರುದ್ಧದ ಸರಣಿಗೂ ಅವರು ತಂಡದಲ್ಲಿದ್ದರಾದರೂ, ಆಡುವ ಅವಕಾಶ ಸಿಕ್ಕಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

ಅಯೋಧ್ಯೆ ಟ್ರಸ್ಟ್ ಎಸ್‌ಐಟಿ ವರದಿಯನ್ನು ಬಹಿರಂಗ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲೇ The Best Catch ಹಿಡಿದ ಶುಭಮನ್ ಗಿಲ್: ಅವಕ್ಕಾಗಿ ನಿಂತ ಲಂಕಾ ಬ್ಯಾಟರ್, Video

Jharkhand: ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿಯಾಗಿ, ನೇಮಕಾತಿ ಪರೀಕ್ಷೆ ವಿವಾದ ಬಗೆಹರಿಸಿ: ಸಿಎಂ ಸೊರೆನ್‌ಗೆ ರಾಹುಲ್ ಗಾಂಧಿ ಮನವಿ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ, ಜೆಡಿಎಸ್ ಬಿಗಿ ಪಟ್ಟು; ವಿಧಾನಸಭೆಯಲ್ಲಿ ತೀವ್ರ ಕೋಲಾಹಲ