ಗುರ್ನೂರ್ ಬ್ರಾರ್‌ 
ಕ್ರಿಕೆಟ್

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕಡೆಗೆ ಚೆಂಡು ಎಸೆದ ಗುರ್ನೂರ್ ಬ್ರಾರ್‌; ಭಾರತದ ವೇಗಿಗೆ ಎಚ್ಚರಿಕೆ ನೀಡಿದ ICC!

ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗಾಗಿ ಇವರು ಐಸಿಸಿ ನೀತಿ ಸಂಹಿತೆ ವಿಧಿ 2.9 ಅನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ರಾರ್ ತಪ್ಪಿತಸ್ಥರೆಂದು ಸಾಬೀತಾಗಿದೆ; ಇದು 'ಲೆವೆಲ್ 1' (Level 1) ಮಟ್ಟದ ಅಪರಾಧವಾಗಿದೆ.

ದುಬೈ: ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ 'ಅನುಚಿತ ಮತ್ತು ಅಪಾಯಕಾರಿ' ರೀತಿಯಲ್ಲಿ ಚೆಂಡನ್ನು ಎಸೆದಿದ್ದಕ್ಕಾಗಿ ಭಾರತದ ವೇಗದ ಬೌಲರ್ ಗುರ್ನೂರ್ ಬ್ರಾರ್ ಅವರಿಗೆ ಎಚ್ಚರಿಕೆ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗಾಗಿ ಇವರು ಐಸಿಸಿ ನೀತಿ ಸಂಹಿತೆ ವಿಧಿ 2.9 ಅನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ರಾರ್ ತಪ್ಪಿತಸ್ಥರೆಂದು ಸಾಬೀತಾಗಿದೆ; ಇದು 'ಲೆವೆಲ್ 1' (Level 1) ಮಟ್ಟದ ಅಪರಾಧವಾಗಿದೆ.

'ಇದರ ಜೊತೆಗೆ, ಬ್ರಾರ್ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೊದಲ ಅಪರಾಧವಾಗಿದೆ' ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಂಗ್ಲೆಂಡ್ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಬ್ರಾರ್ ಫೀಲ್ಡಿಂಗ್ ಮಾಡುವಾಗ ಚೆಂಡನ್ನು ಎತ್ತಿಕೊಂಡು 'ಅನುಚಿತ ಮತ್ತು ಅಪಾಯಕಾರಿ ರೀತಿಯಲ್ಲಿ' ಬ್ಯಾಟ್ಸ್‌ಮನ್ ಕಡೆಗೆ ಎಸೆದಿದ್ದಾರೆ.

ಭಾರತವು ಆರು ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಬ್ರಾರ್ ತಮ್ಮ ತಪ್ಪನ್ನು ಒಪ್ಪಿಕೊಂಡು, ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರೀಸ್‌ನ ಸದಸ್ಯರಾದ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಅವರು ವಿಧಿಸಿದ ದಂಡನೆಯನ್ನು ಸ್ವೀಕರಿಸಿದ್ದಾರೆ. ಹೀಗಾಗಿ, ಈ ವಿಷಯದಲ್ಲಿ ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ ಎಂದಿದೆ.

ಮೈದಾನದಲ್ಲಿರುವ ಅಂಪೈರ್‌ಗಳಾದ ಕುಮಾರ್ ಧರ್ಮಸೇನಾ ಮತ್ತು ಮೈಕ್ ಬರ್ನ್ಸ್, ಮೂರನೇ ಅಂಪೈರ್ ಸ್ಯಾಮ್ ನೊಗಾಜ್ಸ್ಕಿ ಮತ್ತು ನಾಲ್ಕನೇ ಅಧಿಕಾರಿ ರಸೆಲ್ ವಾರೆನ್ ಈ ಆರೋಪವನ್ನು ಹೊರಿಸಿದ್ದಾರೆ.

ಹಂತ 1 ಉಲ್ಲಂಘನೆಗೆ ಕನಿಷ್ಠ ಅಧಿಕೃತ ವಾಗ್ದಂಡನೆ, ಆಟಗಾರನ ಪಂದ್ಯ ಶುಲ್ಕದ ಗರಿಷ್ಠ ಶೇ 50ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳು ಸೇರಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಲ್ಲಿ ಭಾರತೀಯ ನಾವಿಕರ ನಿಯೋಜನೆ ಬೇಡ- DGMA ನಿರ್ದೇಶನ!

ಇಸ್ರೋದ ಸುಮಾರು 100 ವಿಜ್ಞಾನಿಗಳು ರಾಜೀನಾಮೆ; ಸಾಮೂಹಿಕ ನಿರ್ಗಮನಕ್ಕೆ ಕಡಿವಾಣ ಹಾಕಲು ಬಾಹ್ಯಾಕಾಶ ಇಲಾಖೆ ಮುಂದು!

ಗ್ರಾಮ ಪಂಚಾಯಿತಿಗಳಿಗೆ ಬಾಕಿ 2,186 ಕೋಟಿ ರೂ ಬಿಡುಗಡೆಗೆ ಒತ್ತಾಯ; ರಾಜ್ಯದ ಎಲ್ಲಾ ಸಂಸದರಿಗೆ ಸಚಿವ Eshwar Khandre ಪತ್ರ

'ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ'; ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ

ಟಾಕ್ಸಿಕ್: Cryptic ಪೋಸ್ಟ್, ನೆಕ್ಸ್ಟ್ ಹಾಡಿನ ಬಗ್ಗೆ ಹಿಂಟ್ ಕೊಟ್ಟ ಸಂಗೀತ ಸಂಯೋಜಕ ವಿಶಾಲ್ ಮಿಶ್ರಾ!