ಸುನೀಲ್ ಗವಾಸ್ಕರ್ Photo | AFP
ಕ್ರಿಕೆಟ್

ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾರನ್ನು ಹೊರಗಿಡಿ, ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿ: ಸುನೀಲ್ ಗವಾಸ್ಕರ್

ಸೂರ್ಯವಂಶಿ ಇದೀಗ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳು ಮತ್ತು ಜಪಾನ್‌ನಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತದ T20I ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಸಮಯದಲ್ಲಿ ವೈಭವ್ ಸೂರ್ಯವಂಶಿಗೆ ತಕ್ಷಣಲ್ ಅವಕಾಶ ನೀಡಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ದಂತಕಥೆ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. 2026ರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ 15 ವರ್ಷದ ಬ್ಯಾಟಿಂಗ್ ಸೆನ್ಸೇಷನ್ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ವೈಭವ್ ಐಪಿಎಲ್ 2026ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ 776 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಗೆದ್ದರು. ಭಾರತವು ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರ ಆರಂಭಿಕ ಜೋಡಿಯನ್ನು ಹೊಂದಿದ್ದರೂ, ತಂಡದ ಆಡಳಿತವು ಸೂರ್ಯವಂಶಿಗೆ ಅವಕಾಶಗಳನ್ನು ನೀಡಲು ಹಿಂಜರಿಯಬಾರದು ಎಂದು ಗವಾಸ್ಕರ್ ಹೇಳಿದ್ದಾರೆ.

'ನಾನು ಅವರನ್ನು ಐರ್ಲೆಂಡ್ ಟಿ20ಐಗಳಿಗೆ ಖಚಿತವಾಗಿ ಆಯ್ಕೆ ಮಾಡುತ್ತೇನೆ. ಅವರು ಭಾರತ ತಂಡದಲ್ಲಿ ಆಡುವುದನ್ನು ನೋಡಲು ನಾನು ಬಯಸುತ್ತೇನೆ' ಎಂದು ಗವಾಸ್ಕರ್ ಇಂಡಿಯಾ ಟುಡೇಗೆ ತಿಳಿಸಿದರು.

'ಸಂಜು ಸ್ಯಾಮ್ಸನ್ ಅಥವಾ ಅಭಿಷೇಕ್ ಶರ್ಮಾಗಿಂತ ಮುಂಚಿತವಾಗಿ ಅವರಿಗೆ ಅವಕಾಶ ನೀಡಿ. ಬಹುಶಃ ಒಂದು ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಹೊರಗಿಡಬಹುದು. ಇನ್ನೊಂದು ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡಬಹುದು' ಎಂದು ಅವರು ಹೇಳಿದರು.

ಈಮಧ್ಯೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಅವರಿಗೆ 50 ಓವರ್‌ಗಳ ತ್ರಿಕೋನ ಸರಣಿಗೆ ಮುಂಚಿತವಾಗಿ ಶ್ರೀಲಂಕಾದಲ್ಲಿ ತಮ್ಮೊಂದಿಗೆ ಸೇರಲು ವ್ಯವಸ್ಥೆ ಮಾಡಿದೆ. ಮುಂಬರುವ ಯುಕೆ ಮತ್ತು ಐರ್ಲೆಂಡ್ ಪ್ರವಾಸಗಳಲ್ಲಿ ಅವರ ಪೋಷಕರು ಅವರೊಂದಿಗೆ ಬರುವ ಆಯ್ಕೆಯನ್ನು ವಿಸ್ತರಿಸಿದೆ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ಭಾನುವಾರ ತಿಳಿಸಿದ್ದಾರೆ.

ಶನಿವಾರ, ಸೂರ್ಯವಂಶಿ ಅವರು U19 ವಿಶ್ವಕಪ್ ಗೆಲುವು ಮತ್ತು 2026ರ ಐಪಿಎಲ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ನಂತರ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳು ಮತ್ತು ಜಪಾನ್‌ನಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತದ T20I ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಜೂನ್ 9ರಂದು ದಂಬುಲ್ಲಾದಲ್ಲಿ ಪ್ರಾರಂಭವಾಗುವ 50 ಓವರ್‌ಗಳ ತ್ರಿಕೋನ ಸರಣಿಗಾಗಿ ಸೂರ್ಯವಂಶಿ ಭಾರತ ‘ಎ’ ತಂಡದೊಂದಿಗೆ ಶ್ರೀಲಂಕಾದಲ್ಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ 2026 ರ ಐಪಿಎಲ್ ಋತುವಿನಲ್ಲಿ ದಾಖಲೆಯ 776 ರನ್ ಗಳಿಸಿ ಪಂದ್ಯಾವಳಿಯ ಪ್ರಮುಖ ಸ್ಕೋರರ್ ಆಗಿ ಹೊರಹೊಮ್ಮಿದ ನಂತರ ಸೂರ್ಯವಂಶಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ಅಭಿಯಾನದಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ಅಡುಗೆ ಅನಿಲ ಬೆಲೆ ಇನ್ನೂ ವಿಶ್ವದಲ್ಲೇ ಅಗ್ಗವಾಗಿದೆ: LPG ದರ ಏರಿಕೆ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

ಖಾತೆ ಹಂಚಿಕೆ ಕಿತ್ತಾಟ: ಆರಂಭದಲ್ಲೇ ಅಸಮಾಧಾನದ ಅಲೆ: ಡಿಕೆಶಿ ಸರ್ಕಾರಕ್ಕಿದು ಆರಂಭಿಕ ಆಘಾತವೋ, ದೊಡ್ಡ ಸಂಕಷ್ಟದ ಮುನ್ಸೂಚನೆಯೋ?

ರಾಜ್ಯ ಪೊಲೀಸ್ ಇಲಾಖೆಯಿಂದ 3,395 ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ!

Oscar ಕೊಡ್ರೋ ಅಣ್ಣಂಗೆ..; KL Rahul ತಂತ್ರಕ್ಕೆ DRS ಅನ್ನೇ ಮರೆತ ಆಫ್ಘನ್ ಆಟಗಾರರು! 2 ಜೀವದಾನ, ಆಗಿದ್ದೇನು? Video

ದೀದಿಗಾಗಿ ಯೂಸುಫ್ ಪಠಾಣ್ ರಾಜಿನಾಮೆ ಕೇಳಿದ್ರಾ Sourav Ganguly? ಮಾಜಿ ಕ್ರಿಕೆಟಿಗ ಹೇಳಿದ್ದೇನು?

SCROLL FOR NEXT