ಶುಭಮನ್ ಗಿಲ್ 
ಕ್ರಿಕೆಟ್

ಮುಂಬೈ: ಜುಹು ಬೀಚ್ ಬಳಿ ₹20.7 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಶುಭಮನ್ ಗಿಲ್!

2026ರ ಐಪಿಎಲ್ ಆವೃತ್ತಿಯಲ್ಲಿ ಟೈಟಾನ್ಸ್ ಮತ್ತೊಂದು ಯಶಸ್ವಿ ಅಭಿಯಾನದ ಗುರಿಯನ್ನು ಹೊಂದಿದೆ ಮತ್ತು ಪ್ರತಿಷ್ಠಿತ ಐಪಿಎಲ್ ಟ್ರೋಫಿಯನ್ನು ಗೆಲ್ಲುವುದು ತನ್ನ ಗುರಿ ಎಂದು ಗಿಲ್ ಸ್ಪಷ್ಟಪಡಿಸಿದರು.

2026ರ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಕಳೆದುಕೊಂಡ ನಂತರ ಶುಭಮನ್ ಗಿಲ್ ಮತ್ತೊಂದು ಐಪಿಎಲ್ ಸೀಸನ್‌ಗೆ ಸಜ್ಜಾಗುತ್ತಿದ್ದಾರೆ. ಗಿಲ್ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದಾರೆ. 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಿತ್ತು. 2023ರಲ್ಲಿ ರನ್ನರ್-ಅಪ್ ಮತ್ತು 2025 ರಲ್ಲಿ, ಪ್ಲೇಆಫ್ ಪ್ರವೇಶಿಸಿತ್ತು. ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಶುಭಮನ್ ಗಿಲ್, ವೈಯಕ್ತಿಕ ಸಾಧನೆಗಳಿಗಿಂತ ತಂಡದ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಹೇಳಿದರು.

'ನಾನು ವೈಯಕ್ತಿಕ ಗುರಿಗಳ ಮೇಲೆ ಹೆಚ್ಚು ಗಮನಹರಿಸುವುದಿಲ್ಲ. ನನಗೆ, ನಾನು ಆಡುತ್ತಿರುವ ತಂಡ ಮುಖ್ಯ, ಅದು ನನ್ನ ದೇಶವಾಗಿರಬಹುದು ಅಥವಾ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಆಗಿರಬಹುದು. ನನ್ನ ವೈಯಕ್ತಿಕ ಗುರಿ ಸರಳವಾಗಿದೆ. ತಂಡ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಅಲ್ಲಿಯೇ ನನ್ನ ಗಮನವಿರುತ್ತದೆ' ಎಂದು ಗಿಲ್ ಹೇಳಿದರು.

ಗಿಲ್ ಮುಂಬೈನಲ್ಲಿರುವ ಒಂದು ಪ್ರಮುಖ ಆಸ್ತಿಯ ಮೇಲೆ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಜಾಪ್ಕಿ ಪ್ರಕಾರ, 'ಗಿಲ್ ಮುಂಬೈನ ಪ್ರಸಿದ್ಧ ಜುಹು ಬೀಚ್‌ನ ಎದುರಿನ ಸುಮಾರು 3,300 ಚದರ ಅಡಿ ವಿಸ್ತೀರ್ಣದ ₹20.7 ಕೋಟಿ ರೂ.ಗಳ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಈ ಆಸ್ತಿಯ ಮೌಲ್ಯ ಪ್ರತಿ ಚದರ ಅಡಿಗೆ ₹61,442 ಆಗಿದ್ದು, ಗಿಲ್ ಇದನ್ನು ಖರೀದಿಸಿದ್ದಾರೆ'.

2026ರ ಐಪಿಎಲ್ ಆವೃತ್ತಿಯಲ್ಲಿ ಟೈಟಾನ್ಸ್ ಮತ್ತೊಂದು ಯಶಸ್ವಿ ಅಭಿಯಾನದ ಗುರಿಯನ್ನು ಹೊಂದಿದೆ ಮತ್ತು ಪ್ರತಿಷ್ಠಿತ ಐಪಿಎಲ್ ಟ್ರೋಫಿಯನ್ನು ಗೆಲ್ಲುವುದು ತನ್ನ ಗುರಿ. ವೈಯಕ್ತಿಕ ಗುರಿಗಳು ಮುಖ್ಯವಾದರೂ, ಅವು ಪ್ರತಿ ಪಂದ್ಯಾವಳಿಯೊಂದಿಗೆ ವಿಕಸನಗೊಳ್ಳುತ್ತವೆ ಎಂದು ಗಿಲ್ ಸ್ಪಷ್ಟಪಡಿಸಿದರು.

'ಐಪಿಎಲ್‌ನಲ್ಲಿ ಆಡುತ್ತಿರಲಿ ಅಥವಾ ಅಂತರರಾಷ್ಟ್ರೀಯ ಸರಣಿಯಾಗಿರಲಿ, ಯಾವಾಗಲೂ ಗೆಲ್ಲುವುದೇ ಗುರಿ. ನನಗೆ ಯಾವುದೇ ವೈಯಕ್ತಿಕ ಗುರಿಗಳಿಲ್ಲ. ಆದರೆ, ಪ್ರತಿ ಪಂದ್ಯಾವಳಿಯೊಂದಿಗೆ ನನ್ನ ಗಮನ ಬದಲಾಗುತ್ತದೆ. ಇದೀಗ, ಐಪಿಎಲ್ ಟ್ರೋಫಿಯನ್ನು ಗೆಲ್ಲುವುದು ಮತ್ತು ಅದು ಮುಗಿದ ನಂತರ, ನನ್ನ ಗುರಿಗಳು ಮುಂದೆ ಬರುವ ಪಂದ್ಯಗಳತ್ತ ತಿರುಗುತ್ತವೆ' ಎಂದು ಅವರು ಹೇಳಿದರು.

ಐಪಿಎಲ್‌ನ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಮಾತನಾಡಿದ ಗಿಲ್, ಇದು ಆಟದ ಸಾರವನ್ನು ರಾಜಿ ಮಾಡುತ್ತದೆ. 11 ಆಟಗಾರರ ಕ್ರೀಡೆಯಾಗಿ ಕ್ರಿಕೆಟ್ ಅನ್ನು ಉತ್ತಮವಾಗಿ ಆಡಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಎಚ್ಚರಿಕೆಗೆ ಬಗ್ಗದ ಇರಾನ್: ಸೌದಿ ವಾಯುನೆಲೆ ಮೇಲೆ ಮುಂದುವರೆದ ಕ್ಷಿಪಣಿ ದಾಳಿ; ಅಮೆರಿಕಾದ 15 ಸೈನಿಕರಿಗೆ ಗಾಯ, ಐವರ ಸ್ಥಿತಿ ಗಂಭೀರ

'ನಾವು ಓದುವಾಗ ಹಿಂದಿ ಭಾಷೆ ಕಡ್ಡಾಯ ಇರಲಿಲ್ಲ, ಪರೀಕ್ಷೆಗೆ ಅದು ಕಡ್ಡಾಯ ಆಗಬಾರದು': ಸಿಎಂ ಸಿದ್ದರಾಮಯ್ಯ

IPL 2026: ಚಿನ್ನಸ್ವಾಮಿಯಲ್ಲಿ RCB ಬ್ಯಾಟಿಂಗ್ ಅಬ್ಬರ; ಟಿ20 ಲೀಗ್​ನ ವಿಶ್ವ ದಾಖಲೆಯೇ ಉಡೀಸ್..!

IPL ಟಿಕೆಟ್ ವಿವಾದ: ಎರೆಡರಡು VIP ಪಾಸ್ ಪಡೆದರೂ ಮೈದಾನಕ್ಕೆ ಬಾರದ ಶಾಸಕರು, ಟೀಕೆ ಶುರು

IPL 2026, RCB vs SRH: ಕಿಂಗ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಉದ್ಘಾಟನಾ ಪಂದ್ಯ ಗೆದ್ದು ಬೀಗಿದ ಬೆಂಗಳೂರು

SCROLL FOR NEXT