ಕೋಲ್ಕತಾ ವಿರುದ್ಧ ಸೋತ ಗುಜರಾತ್ 
ಕ್ರಿಕೆಟ್

IPL 2026: 2 ಓವರ್ ನಲ್ಲಿ ಪಂದ್ಯ ಕಳೆದುಕೊಂಡ GT; KKRಗೆ 29 ರನ್ ಭರ್ಜರಿ ಜಯ

248 ರನ್ ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಕೋಲ್ಕತಾ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ 29 ರನ್ ಗಳ ಭರ್ಜರಿ ಜಯ ಸಾಧಿಸಿತು.

ಕೋಲ್ಕತಾದ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೀಡಿದ್ದ 248 ರನ್ ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಆ ಮೂಲಕ ಕೋಲ್ಕತಾ ವಿರುದ್ಧ 29 ರನ್ ಗಳ ಹೀನಾಯ ಸೋಲು ಕಂಡಿತು.

ಗುಜರಾತ್ ಪರ ಸಾಯಿ ಸುದರ್ಶನ್ ಗಾಯದ ನಡುವೆಯೂ ಅಜೇಯ 53 ರನ್ ಗಳಿಸಿದರೆ, ನಾಯಕ ಶುಭ್ ಮನ್ ಗಿಲ್ 85 ರನ್ ಮತ್ತು ಜಾಸ್ ಬಟ್ಲರ್ 57 ರನ್ ಗಳಿಸಿದರು. ಆದರೂ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

2 ಓವರ್ ನಲ್ಲಿ ಪಂದ್ಯ ಕಳೆದುಕೊಂಡ GT

ಇನ್ನು 248 ರನ್ ಗುರಿಯ ಹೊರತಾಗಿಯೂ ಗುಜರಾತ್ ಇನ್ನಿಂಗ್ಸ್ ನ 18ನೇ ಓವರ್ ವರೆಗೂ ಗಿಲ್ ಪಡೆ ಈ ಪಂದ್ಯ ಗೆಲ್ಲುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ತಂಡಕ್ಕೆ ಗೆಲ್ಲಲು 2 ಓವರ್ ನಲ್ಲಿ 45 ರನ್ ಗಳ ಅವಶ್ಯಕತೆ ಇತ್ತು. ಆದರೆ 19ನೇ ಓವರ್ ನಲ್ಲಿ ಗುಜರಾತ್ ಪಂದ್ಯ ಕೈಚೆಲ್ಲಿತು.

ಸೌರಭ್ ದುಬೆ ಎಸೆದ ಆ ಓವರ್ ನಲ್ಲಿ ಅಕ್ಷರಶಃ ಗುಜರಾತ್ ರನ್ ಗಳಿಸಲು ಪರದಾಡಿತು. ಒಂದು ಓವರ್ ನಲ್ಲಿ ಕೇವಲ 5ರನ್ ಮಾತ್ರ ಗಳಿಸಿತು. ಆ ಮೂಲಕ ಅದಾಗಲೇ ಗುಜರಾತ್ ಸೋಲು ಖಚಿತವಾಗಿತ್ತು. ಅಂತಿಮ ಓವರ್ ನಲ್ಲಿ ಕೆಮರಾನ್ ಗ್ರೀನ್ 10 ರನ್ ನೀಡಿ ರಾಹುಲ್ ತೆವಾಟಿಯಾ ವಿಕೆಟ್ ಪಡೆದರು. ಆ ಮೂಲಕ ಕೋಲ್ಕತಾ ಗುಜರಾತ್ ವಿರುದ್ಧ 29 ರನ್ ಗಳ ಭರ್ಜರಿ ಜಯ ಸಾಧಿಸಿತು.

ಕೋಲ್ಕತಾ ಬೃಹತ್ ಮೊತ್ತ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ 247 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಕೋಲ್ಕತಾ ಪರ ಫಿನ್ ಅಲೆನ್ 93 ರನ್ ಗಳಿಸಿದರೆ, ಆ್ಯಂಗ್ಕ್ರಿಶ್ ರಘುವಂಶಿ ಅಜೇಯ 82 ರನ್ ಮತ್ತು ಕೆಮರಾನ್ ಗ್ರೀನ್ ಅಜೇಯ 52 ರನ್ ಕಲೆಹಾಕಿ ತಂಡದ ಮೊತ್ತಕ್ಕೆ ಕಾರಣರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!

ಮೀನುಗಾರನ ಮುಖಕ್ಕೆ ಅಂಟಿಕೊಂಡ ಅಕ್ಟೋಪಸ್! ಪ್ರಾಣ ಉಳಿಸಿಕೊಳ್ಳಲು ಯುವಕನ ಹರಸಾಹಸ, ಭಯಾನಕ Video ವೈರಲ್

‘ಸರ್ಕಾರ ನಮ್ಮದು…’: BJP ನೇತೃತ್ವದ NDA ಸೇರುವಂತೆ ಅಭಿಜೀತ್ ದೀಪ್ಕೆಗೆ ಕೇಂದ್ರ ಸಚಿವರಿಂದ ಬಿಗ್ ಆಫರ್!

ನೀಟ್ ಪ್ರತಿಭಟನೆ: ಪೊಲೀಸರ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಉನ್ನತಾಧಿಕಾರ ಸಮಿತಿ