ಸಂಜು-ಕ್ಲಾಸನ್ ಸಂಘರ್ಷ 
ಕ್ರಿಕೆಟ್

IPL 2026: ಸ್ಟಂಪೌಟ್ ಮಾಡಿದ Sanju Samson ವಿರುದ್ಧ Klaasen ಆಕ್ರೋಶ, ಮೈದಾನದಲ್ಲೇ ಹೈಡ್ರಾಮಾ, ಆಗಿದ್ದೇನು?

ಚೆನ್ನೈ ನೀಡಿದ್ದ 181 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ 5 ವಿಕೆಟ್ ಅಂತರದ ಗೆಲುವು ಸಾಧಿಸಿತು.

ಚೆನ್ನೈ: ಚೆನ್ನೈ ಮತ್ತು ಹೈದರಾಬಾದ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ವೇಳೆ ದೊಡ್ಡ ಹೈಡ್ರಾಮಾ ನಡೆದಿದ್ದು, ಸಂಜು ಸ್ಯಾಮ್ಸನ್ ಮತ್ತು ಹೆನ್ರಿಚ್ ಕ್ಲಾಸನ್ ನಡುವೆ ಸಂಘರ್ಷ ಏರ್ಪಟ್ಟಿತ್ತು.

ಇಂದು ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ನೀಡಿದ್ದ 181 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ 5 ವಿಕೆಟ್ ಅಂತರದ ಗೆಲುವು ಸಾಧಿಸಿತು.

ಇಂದಿನ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಿತ್ತು. ಆದರೆ ಇಂದಿನ ಪಂದ್ಯದಲ್ಲೂ ಚೆನ್ನೈ ತಂಡ ಸೋತಿದೆ. ಹೀಗಾಗಿ ರುತುರಾಜ್ ಗಾಯಕ್ವಾಡ್ ಪಡೆ ಪ್ಲೇಆಫ್ ರೇಸ್ ನಿಂದ ಬಹುತೇಕ ಹೊರಬಿದ್ದಿದೆ. ಇಂದಿನ ಗೆಲುವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ಲೇಆಫ್ ಹಂತಕ್ಕೇರಿದೆ. ಹೈದರಾಬಾದ್ ಮಾತ್ರವಲ್ಲದೇ ಗುಜರಾತ್ ಟೈಟನ್ಸ್ ಕೂಡ ಪ್ಲೇ ಆಫ್ ಗೇರಿದೆ.

ಸಂಜು-ಕ್ಲಾಸನ್ ಸಂಘರ್ಷ

ಇನ್ನು ಸನ್ ರೈಸರ್ಸ್ ಚೇಸಿಂಗ್ ವೇಳೆ ಚೆನ್ನೈ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮತ್ತು ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸನ್ ಪರಸ್ಪರ ವಾಗ್ವಾದ ನಡೆಸಿದರು. 181 ರನ್ ಗಳನ್ನು ಬೆನ್ನು ಹತ್ತಿದ ಹೈದರಾಬಾದ್ 15ನೇ ಓವರ್‌ನಲ್ಲಿ ಬೌಲರ್ ನೂರ್ ಅಹ್ಮದ್ ಎಸೆದ ಗೂಗ್ಲಿ ಕ್ಲಾಸೆನ್ ಅವರ ವಿಕೆಟ್ ಪತನಕ್ಕೆ ಕಾರಣವಾಯಿತು.

ಸಂಜು ಮಿಂಚಿನ ವೇಗದ ಸ್ಟಂಪಿಂಗ್

ಗೂಗ್ಲಿ ಎಸೆತವನ್ನು ತಪ್ಪಾಗಿ ಅಂದಾಜು ಮಾಡಿದ ಕ್ಲಾಸನ್ ಮುಂದಕ್ಕೆ ಹೋಗಿ ಭಾರಿಸಲು ಯತ್ನಿಸಿದರು. ಈ ವೇಳೆ ಚೆಂಡು ಬ್ಯಾಟ್ ವಂಚಿಸಿ ನೇರವಾಗಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೈ ಸೇರಿತು. ಸಂಜು ಕೊಂಚವೂ ಕೂಡ ತಡ ಮಾಡದೇ ಕ್ಷಣಾರ್ಧದಲ್ಲಿ ಬೇಲ್ಸ್ ಎಗರಿಸಿದರು.

ಕ್ಲಾಸನ್ ಅವರ ಹಿಂದಿನ ಕಾಲು ಕ್ಷಣಕಾಲ ಮೇಲಕ್ಕೆದ್ದಾಗ ಸಂಜು ಸ್ಯಾಮ್ಸನ್ ಎಂ.ಎಸ್. ಧೋನಿ ಶೈಲಿಯಲ್ಲಿ ಮಿಂಚಿನ ವೇಗದ ಸ್ಟಂಪಿಂಗ್ ಮಾಡಿದರು. ಈ ವೇಳೆ ಥರ್ಡ್ ಅಂಪೈರ್ ಔಟ್ ಎಂದು ಖಚಿತಪಡಿಸಿದ ನಂತರ, ಸ್ಯಾಮ್ಸನ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು.

ಈ ವೇಳೆ ಔಟಾಗಿ ಹೊರನಡೆಯುತ್ತಿದ್ದ ಬ್ಯಾಟ್ಸ್‌ಮನ್‌ಗೆ ಏನೋ ಕಾಮೆಂಟ್ ಮಾಡಿದರು ಎಂದು ವರದಿಯಾಗಿದೆ. ಈ ಕಾಮೆಂಟ್ ಮತ್ತು ತಾವು ಔಟ್ ಆದ ರೀತಿಯಿಂದ ತೀವ್ರ ಅಸಮಾಧಾನಗೊಂಡ ಕ್ಲಾಸನ್, ಹಿಂತಿರುಗಿ ಬಂದು ಸಂಜು ಜೊತೆ ತೀಕ್ಷ್ಣವಾದ ಮಾತುಗಳ ಚಕಮಕಿ ನಡೆಸಿದರು.

ಇಬ್ಬರ ನಡುವಿನ ಮಾತಿನ ಚಕಮಕಿ ತೀವ್ರಗೊಂಡಾಗ, ಯಾವುದೇ ದೈಹಿಕ ಘರ್ಷಣೆ ನಡೆಯದಂತೆ ತಡೆಯಲು ಸಹ ಆಟಗಾರ ಅನ್ಶುಲ್ ಕಾಂಬೋಜ್ ಮತ್ತು ಬೌಲರ್ ನೂರ್ ಅಹ್ಮದ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದರು.

ಅಧಿಕೃತ ಪಂದ್ಯದ ವರದಿಗಳಲ್ಲಿ ಇಬ್ಬರೂ ಕೆಟ್ಟ ಪದಗಳನ್ನು ಅಥವಾ "ನಿಂದನೆ" ಪದವನ್ನು ಬಳಸಿದ್ದಾರೆಯೇ ಎಂಬುದು ಖಚಿತವಾಗಿಲ್ಲದಿದ್ದರೂ, ಇಬ್ಬರ ನಡುವಿನ ತೀವ್ರ ವಾಗ್ವಾದವನ್ನು ಶಾಂತಗೊಳಿಸಲು ಅಂಪೈರ್‌ಗಳು ತಕ್ಷಣ ಮಧ್ಯಪ್ರವೇಶಿಸಬೇಕಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಎಂ ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧಿಸಿದ CBI

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ: ಒಡಿಶಾ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

IPL 2026: SRH ಗೆಲುವಿನ ದಡ ಸೇರಿಸಿದ Ishan Kishan, ತವರಿನಲ್ಲೇ CSKಗೆ ಮುಖಭಂಗ, ಪ್ಲೇಆಫ್ ನಿಂದ ಬಹುತೇಕ ಔಟ್!

ಅಮೆರಿಕಕ್ಕೆ ಸೆಡ್ಡು: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪ್ರಮುಖ ಹೆಜ್ಜೆ; ಹೊಸ ಪ್ರಾಧಿಕಾರ ರಚನೆ!

ಬಲೂಚಿಸ್ತಾನದಲ್ಲಿ ಭೀಕರ ಗುಂಡಿನ ಕಾಳಗ: TTE ಸಂಘಟನೆಯ 35 ಉಗ್ರರ ಹತ್ಯೆ, ಪಾಕ್ ಸೇನೆಯಲ್ಲೂ ಸಾವು-ನೋವು

SCROLL FOR NEXT