ವಿಮಾನ ನಿಲ್ದಾಣದಲ್ಲಿ ರಿಯಾನ್ ಪರಾಗ್ ಗರಂ 
ಕ್ರಿಕೆಟ್

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ: ವಿಮಾನ ನಿಲ್ಗಾಣದಲ್ಲಿ Riyan Parag ಗರಂ, ವೈಭವ್ ಸೂರ್ಯವಂಶಿ ಶಾಕ್! Video

ರಿಯಾನ್ ಪರಾಗ್ ನೇತೃತ್ವದ ರಾಜಸ್ತಾನ ರಾಯಲ್ಸ್ ತಂಡವು ತಮ್ಮ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್‌ಗಳ ಭರ್ಜರಿ ಜಯ ಸಾಧಿಸಿ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿತು.

ಜೈಪುರ: ಐಪಿಎಲ್ ಟೂರ್ನಿಯ ಪ್ಲೇಆಫ್ ಗೆ ಕೊನೆಯ ಕ್ಷಣದಲ್ಲಿ ಎಂಟ್ರಿ ಕೊಟ್ಟ ರಾಜಸ್ತಾನ ರಾಯಲ್ಸ್ ತಂಡ ತನ್ನ ಎಲಿಮಿನೇಟರ್ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಈ ನಡುವೆ ನಾಯಕ ರಿಯಾನ್ ಪರಾಗ್ ಆಟದ ಹೊರತಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ರಿಯಾನ್ ಪರಾಗ್ ನೇತೃತ್ವದ ರಾಜಸ್ತಾನ ರಾಯಲ್ಸ್ ತಂಡವು ತಮ್ಮ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್‌ಗಳ ಭರ್ಜರಿ ಜಯ ಸಾಧಿಸಿ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ RR ತಂಡವು 20 ಓವರ್‌ಗಳಲ್ಲಿ 205/8 ರನ್‌ಗಳನ್ನು ಗಳಿಸಿತು ಮತ್ತು ಬಳಿಕ MI ತಂಡವನ್ನು 175/9ಕ್ಕೆ ನಿಯಂತ್ರಿಸಿತು. ಈ ಫಲಿತಾಂಶದೊಂದಿಗೆ ಪಂಜಾಬ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪ್ಲೇಆಫ್ ಸ್ಪರ್ಧೆಯಿಂದ ಹೊರಬಿತ್ತು.

ರಾಜಸ್ಥಾನ್ ರಾಯಲ್ಸ್ ತಂಡವು ಬುಧವಾರ ಮುಲ್ಲನ್‌ಪುರದಲ್ಲಿ ನಡೆಯಲಿರುವ IPL 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಎಲಿಮಿನೇಟರ್ ಪಂದ್ಯಕ್ಕೂ ಮುನ್ನ RR ತಂಡವು ಮುಂಬೈಯಿಂದ ಪ್ರಯಾಣ ಬೆಳೆಸಿ ಮುಲ್ಲನ್‌ಪುರಕ್ಕೆ ತಲುಪಿತು.

ಪಾಪರಾಜಿಗಳ ಬೆವರಿಳಿಸಿದ ರಿಯಾನ್ ಪರಾಗ್

ಈ ನಡುವೆ ವಿಮಾನ ನಿಲ್ದಾಣದಲ್ಲಿ RR ತಂಡದ ಯುವ ಬ್ಯಾಟಿಂಗ್ ಸೆನ್ಷೇಶನ್ ವೈಭವ್ ಸೂರ್ಯವಂಶಿ, ನಾಯಕ ರಿಯಾನ್ ಪರಾಗ್ ಕಾಣಿಸಿಕೊಂಡರು. ಈ ವೇಳೆ ಉಭಯ ಆಟಗಾರರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಮುಗಿಬಿದ್ದರು.

ಪ್ರಮುಖವಾಗಿ ಕೇವಲ 15 ವರ್ಷದ ಸೂರ್ಯವಂಶಿ ತಮ್ಮ ಸ್ಫೋಟಕ ಪ್ರದರ್ಶನಗಳಿಂದ ಕ್ರಿಕೆಟ್ ಜಗತ್ತನ್ನೇ ಕಂಗೊಳಿಸಿದ್ದು, ಫೋಟೋಗ್ರಾಫರ್‌ಗಳ ಮೆಚ್ಚಿನ ಆಟಗಾರನಾಗಿದ್ದಾರೆ. ಬಿಹಾರ ಮೂಲದ ಈ ಬ್ಯಾಟರ್‌ನ ಫೋಟೋಗಳನ್ನು ತೆಗೆಯಲು ಪ್ಯಾಪರಾಝಿಗಳು ಸದಾ ಉತ್ಸುಕರಾಗಿದ್ದರು.

ಆದರೆ ಈ ವೇಳೆ ಮಧ್ಯಪ್ರವೇಶಿಸಿದ ರಿಯಾನ್ ಪರಾಗ್ ಪಾಪರಾಜಿಗಳ ವಿರುದ್ಧ ಗರಂ ಆದರು. ರಿಯಾನ್ ಪರಾಗ್ ನಡೆಗೆ ಅಲ್ಲಿಯೇ ಇದ್ದ ವೈಭವ್ ಸೂರ್ಯವಂಶಿ ಕೂಡ ಶಾಕ್ ಆದರು.

ವಿಡಿಯೋ ವೈರಲ್

ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿದ್ದು ಫೋಟೋಗ್ರಾಫರ್‌ಗಳು ಪರಾಗ್ ಅವರನ್ನು ಸೂರ್ಯವಂಶಿಯ ಜೊತೆ ಪೋಸ್ ನೀಡುವಂತೆ ಕೇಳುತ್ತಿರುವುದು ಕಾಣಿಸಿತು. ಆದರೆ RR ನಾಯಕ ಪರಾಗ್, "ನಾವು ಸಿನಿಮಾ ಸ್ಟಾರ್‌ಗಳಲ್ಲ" ಎಂದು ಹೇಳಿ ಅಲ್ಲಿಂದ ನಡೆದುಹೋದರು. ತಮ್ಮ ನಾಯಕನ ಈ ಪ್ರತಿಕ್ರಿಯೆಗೆ ಸೂರ್ಯವಂಶಿ ಗೊಂದಲದ ಮುಖಭಾವ ತೋರಿದರೂ, ಅವರು ಫೋಟೋಗಳಿಗೆ ಪೋಸ್ ನೀಡುವುದನ್ನು ಮುಂದುವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

IPL 2026: RCB vs GT ನಡುವಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಆತಂಕ, ರಿಸರ್ವ್ ಡೇ ಕೂಡ ಇಲ್ಲ.. ಪಂದ್ಯ ರದ್ದಾದರೆ ಯಾರು ಫೈನಲ್ ಗೆ?

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: Quad ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

SCROLL FOR NEXT