ಟೀಂ ಇಂಡಿಯಾ ಆಟಗಾರ್ತಿಯರು 
ಕ್ರಿಕೆಟ್

ಮಹಿಳಾ ಏಷ್ಯಾ ಕಪ್ ಟ್ರೋಫಿ ವಿವಾದಕ್ಕೆ ಪರಿಹಾರ ಸೂಚಿಸಿದ BCCI; ಒಪ್ಪದ ACC ವಿರುದ್ಧ ದೇವಜಿತ್ ಸೈಕಿಯಾ ಕಿಡಿ

'ನಾವು ಶೀಘ್ರದಲ್ಲೇ ಮಹಿಳಾ ಏಷ್ಯಾ ಕಪ್ ಟ್ರೋಫಿಯನ್ನು ಮಾತ್ರವಲ್ಲದೆ, ಪುರುಷರ ಏಷ್ಯಾ ಕಪ್ ಟ್ರೋಫಿಯನ್ನೂ ಪಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಬಲ್ಲೆವು' ಎಂದು ಸೈಕಿಯಾ ಹೇಳಿದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಟ್ರೋಫಿಯನ್ನು ಹಸ್ತಾಂತರಿಸುವುದಾದರೆ, 2026ರ ಮಹಿಳಾ ಏಷ್ಯಾ ಕಪ್‌ನ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಮಹಿಳಾ ತಂಡ ಭಾಗವಹಿಸುವುದಿಲ್ಲ ಎಂದು ಭಾರತವು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ (ACC) ತಿಳಿಸಿತ್ತು. 'ನಾವು ACCಯೊಂದಿಗೆ ಸಂಪರ್ಕದಲ್ಲಿದ್ದೆವು ಮತ್ತು ನಿನ್ನೆ ನಾನು ಸ್ವತಃ ACC ಅಧ್ಯಕ್ಷರಿಗೆ ಈ ವಿಷಯವನ್ನು ತಿಳಿಸಿದೆ; ಪುರುಷರ ಕ್ರಿಕೆಟ್ ತಂಡದ ಸಂದರ್ಭದಲ್ಲಿ ನಡೆದಂತೆಯೇ ಇಲ್ಲೂ ಪ್ರದಾನ ಸಮಾರಂಭ ನಡೆದರೆ ನಾವು ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆವು. ಅವರು ತಮ್ಮ ನಿಲುವನ್ನು ಬದಲಾಯಿಸಲು ಇಷ್ಟಪಡಲಿಲ್ಲ, ಹಾಗಾಗಿ ನಮಗೆ ಬೇರೆ ದಾರಿ ಇರಲಿಲ್ಲ' ಎಂದು ಬಿಸಿಸಿಐ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಎನ್‌ಡಿಟಿವಿಗೆ ತಿಳಿಸಿದರು.

'ಸಮಾರಂಭದಲ್ಲಿ ಭಾಗವಹಿಸದಿರುವ ಮೂಲಕ ನಾವು ಪಹಲ್ಗಾಮ್ ದಾಳಿಯ ಎಲ್ಲ ಸಂತ್ರಸ್ತರಿಗೆ ಗೌರವ ಸಲ್ಲಿಸಿದ್ದೇವೆ. ಪುರುಷರು ಮತ್ತು ಮಹಿಳೆಯರ ಎರಡೂ ಕಪ್‌ಗಳು ಶೀಘ್ರದಲ್ಲೇ ಭಾರತಕ್ಕೆ ಬರಲಿವೆ' ಎಂದು ಸೈಕಿಯಾ ಹೇಳಿದರು.

'ನಾವು ಶೀಘ್ರದಲ್ಲೇ ಮಹಿಳಾ ಏಷ್ಯಾ ಕಪ್ ಟ್ರೋಫಿಯನ್ನು ಮಾತ್ರವಲ್ಲದೆ, ಪುರುಷರ ಏಷ್ಯಾ ಕಪ್ ಟ್ರೋಫಿಯನ್ನೂ ಪಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಬಲ್ಲೆವು' ಎಂದು ಸೈಕಿಯಾ ಹೇಳಿದರು.

ಮೊಹ್ಸಿನ್ ನಕ್ವಿ ಅವರು ಸಾಂಪ್ರದಾಯಿಕ ಪದ್ಧತಿಗಳನ್ನು ಪಾಲಿಸುತ್ತಿಲ್ಲ ಎಂದೂ ಅವರು ಆರೋಪಿಸಿದರು.

'ಸದ್ಯದ ಐಸಿಸಿ ಅಧ್ಯಕ್ಷರು ಎಸಿಸಿಯಲ್ಲಿದ್ದಾಗ, ವಿಜೇತ ತಂಡದ ಪದಾಧಿಕಾರಿಯೇ ಟ್ರೋಫಿಯನ್ನು ಹಸ್ತಾಂತರಿಸುವುದು ಸಾಮಾನ್ಯ ಹಾಗೂ ಸಾಂಪ್ರದಾಯಿಕ ಪದ್ಧತಿಯಾಗಿತ್ತು. ಆದರೆ ಕಳೆದ ವರ್ಷದಿಂದ ಈ ಸಂಪ್ರದಾಯವನ್ನು ಪಾಲಿಸುತ್ತಿಲ್ಲ' ಎಂದು ಸೈಕಿಯಾ ಹೇಳಿದರು.

'ನಾವು ಮೂಲಭೂತವಾಗಿ ಐಸಿಸಿ ಟಿ20 ವಿಶ್ವಕಪ್‌ಗಾಗಿ ಟಿ20 ಮಾದರಿಯಲ್ಲಿ ನಮ್ಮ ತಂಡವನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಮಹಿಳಾ ಕ್ರಿಕೆಟ್‌ನ ಟಿ20 ಮಾದರಿಯಲ್ಲಿ ನಮಗೆ ಕೆಲವು ಸವಾಲುಗಳಿವೆ ಮತ್ತು ಏಷ್ಯನ್ ಕ್ರೀಡಾಕೂಟವು ನಮ್ಮ ಗುರಿಯಾಗಿದೆ' ಎಂದು ಸೈಕಿಯಾ ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಬಿಸಿಸಿಐ, ಎಸಿಸಿಗೆ ಪರ್ಯಾಯ ವ್ಯವಸ್ಥೆಯೊಂದನ್ನು ಸೂಚಿಸಿತ್ತು. ಅಧ್ಯಕ್ಷರು ಅಥವಾ ಉಪಾಧ್ಯಕ್ಷರ ಮೂಲಕ ಪ್ರಶಸ್ತಿ ಪ್ರದಾನ ನೆರವೇರಿಸಬಹುದೆಂದು ನಾವು ಕೋರಿದ್ದೆವು ಎಂದು ಅವರು ತಿಳಿಸಿದರು.

'ನಮ್ಮ ನಿಲುವು ಸ್ಪಷ್ಟವಾಗಿದೆ; ಇದರ ಅಧ್ಯಕ್ಷರು ಅಂತಹ ದೇಶವೊಂದರ ಗೃಹ ಸಚಿವರಾಗಿದ್ದಾರೆ. ಯಾವ ದೇಶದೊಂದಿಗೆ ನಮಗೆ ಸೌಹಾರ್ದಯುತ ಸಂಬಂಧವಿಲ್ಲವೋ ವಿಶೇಷವಾಗಿ ಪಹಲ್ಗಾಮ್ ಘಟನೆಯ ನಂತರ ಆ ದೇಶದ ಸಚಿವರು ಅವರು. ಹೀಗಾಗಿ, ನಾವು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ಎಸಿಸಿ ಉಪಾಧ್ಯಕ್ಷ ಖಾಲಿದ್ ಸಾಹಬ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಿದ್ದರೆ ನಾವು ಭಾಗವಹಿಸುತ್ತಿದ್ದೆವು; ಇದೇ ನಮ್ಮ ಸಲಹೆಯೂ ಆಗಿತ್ತು. ಆದರೆ ನಮ್ಮ ಸಲಹೆಯನ್ನು ಪುರಸ್ಕರಿಸಲಿಲ್ಲ, ಹಾಗಾಗಿ ನಮಗೆ ಬೇರೆ ದಾರಿ ಇರಲಿಲ್ಲ' ಎಂದು ಸೈಕಿಯಾ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

2026ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಬಗ್ಗೆ ಬಿಸಿಸಿಐ (BCCI) ಆಶಾವಾದವನ್ನು ಹೊಂದಿದೆ.

'ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ - ಎರಡರಲ್ಲೂ ಚಿನ್ನದ ಪದಕವನ್ನೇ ಗುರಿಯಾಗಿರಿಸಿಕೊಂಡಿದ್ದೇವೆ' ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಡಿಕ್ಕಿ; ಇಸ್ಲಾಮಾಬಾದ್‌ನ ಉನ್ನತ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್

ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ ಶೇ.100ರಷ್ಟು ಸುಂಕ ಮಸೂದೆಗೆ ಅಮೆರಿಕ ಸಂಸತ್ತಿನಲ್ಲಿ ಮುನ್ನಡೆ

ಶಾಲಾ ಸಹಪಾಠಿ ನೆರವಿಗೆ ಧಾವಿಸಿದ ಪ್ರಧಾನಿ ಮೋದಿ; ಬಿಜೆಪಿ ಶಾಸಕನ ಸಂಸ್ಥೆ ಶಾಮೀಲಾಗಿದ್ದ ಕೋಟ್ಯಂತರ ರೂ ಮೌಲ್ಯದ ಭೂಮಿ ವಿವಾದಕ್ಕೆ ಪರಿಹಾರ!

ಗಣಪತಿ ವಿಸರ್ಜನೆ: ಉಲ್ಟಾ ಆರತಿ ಮಾಡಿದ ಸಲ್ಮಾನ್ ಖಾನ್; ಸರಿಪಡಿಸಿದ ತಂಗಿ ಅರ್ಪಿತಾ: ವಿಡಿಯೋ ವೈರಲ್

ಟೆಲಿಪ್ರಾಂಪ್ಟರ್ ಇಲ್ಲದೇ ಬಿಜೆಪಿ ನಾಯಕರು ವಂದೇ ಮಾತರಂ ಪೂರ್ಣ ಹಾಡಿದರೆ ರಾಜೀನಾಮೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು