ಸಿದ್ಧರಾಮಯ್ಯ (ಸಂಗ್ರಹ ಚಿತ್ರ ) 
ಜಿಲ್ಲಾ ಸುದ್ದಿ

ಮೊಬೈಲ್‌ನಂತೆ ಇದೆ ಸರ್ಕಾರಿ ಆಹ್ವಾನ ಪತ್ರಿಕೆ!

ಬೆರಳ ತುದಿಯಲ್ಲಿ ಆಡಳಿತ ತರಲು ಹೊರಟಿರುವ ರಾಜ್ಯ ಸರ್ಕಾರ ಆಕರ್ಷಕ ಆಹ್ವಾನ ಪತ್ರಿಕೆ ಮೂಲಕ ಮೊದಲ ಬಾರಿಗೆ ಆಮಂತ್ರಣಕ್ಕೂ...

ಬೆಂಗಳೂರು: ಬೆರಳ ತುದಿಯಲ್ಲಿ ಆಡಳಿತ ತರಲು ಹೊರಟಿರುವ ರಾಜ್ಯ ಸರ್ಕಾರ ಆಕರ್ಷಕ ಆಹ್ವಾನ ಪತ್ರಿಕೆ ಮೂಲಕ ಮೊದಲ ಬಾರಿಗೆ ಆಮಂತ್ರಣಕ್ಕೂ ಹೈಟೆಕ್ ಸ್ಪರ್ಶ ನೀಡಿದೆ.

ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿಯ ದೊಡ್ಡ ಹೆಸರು, ಭಾವಚಿತ್ರ, ಜತೆಗೆ ಸಚಿವರೆಲ್ಲರ ಪಟ್ಟಿ...ಹೀಗೆ ಓದಲಾಗದಷ್ಟು ಹೆಸರುಗಳಿರುತ್ತವೆ. ನೋಡಲೂ ಬೇಸರವಾಗುತ್ತದೆ. ಆದೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾಪ ಮೊಬೈಲ್‌ನಂತೆ ಭಾಸವಾಗುವ ಆಹ್ವಾನ ಪತ್ರಿಕೆ ರೂಪಿಸಿದೆ. ಇದನ್ನು ಮಾಧ್ಯಮ ಕಚೇರಿಗೆ ತಲುಪಿಸಿದ ಕವರ್ ಕೂಡಾ ಮೊಬೈಲ್ ಕೊರಿಯರ್ ರೂಪದಲ್ಲಿದೆ. ಮೊಬೈಲ್ ಆಮಂತ್ರಣದ ಮೊದಲ ಪುಟ ತೆರೆಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಧ್ವನಿ!
ಸ್ವತಃ  ಮುಖ್ಯಮಂತ್ರಿಯೇ ಅವರ ಧ್ವನಿಯಲ್ಲಿಯೇ ಆಮಂತ್ರಣ ರೆಕಾರ್ಡ್  ಮಾಡಿ ಕಳುಹಿಸಲಾಗಿದೆ . ಜತೆಗೆ ಮುದ್ರಿತ ಆಮಂತ್ರಣವೂ ಇದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಡಿ.8ರಂದು ಮೊಬೈಲ್ ಒನ್ ಸೇವೆಯನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ಜನತೆಗೆ ನೇಡ ಹೊರಟಿರುವ ಸೇವೆಯ ಉದ್ದೇಶ ಏನೆಂಬುದನ್ನು ಆಮಂತ್ರಣ ಪತ್ರಿಕೆ ಮೂಲಕವೇ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರದ ಇತಿಹಾಸದಲ್ಲಿ ಇಂಥದ್ದೊಂದು ಆಕರ್ಷಕ ಹಾಗೂ ವಿನೂತನ ಆಹ್ವಾನ ಪತ್ರಿಕೆ ಪ್ರಕಟವಾದದ್ದು ನೆನಪಿಲ್ಲ.

ಪತ್ರಿಕೆ ಹೊರ ನೋಟದಲ್ಲಿ ಐದೂವರೆ ಇಂಚಿನ ಬಿಳಿ ಬಣ್ಣದ ಸ್ಮಾರ್ಟ್‌ಫೋನ್‌ನಂತೆ ಕಾಣುತ್ತದೆ. ಒಳಗಿನ ಪುಟ ತೆರೆದರೆ 'ಡಿಯರ್ ಸಿಟಿಜನ್ಸ್ ಆಫ್ ಕರ್ನಾಟಕ' ಎಂದು ಸಿದ್ಧರಾಮಯ್ಯ ಅವರು ಆತ್ಮೀಯವಾಗಿ 'ಮೊಬೈಲ್ ಒನ್‌' ಸೇವೆ ಕಾರ್ಯಕ್ರಮಕ್ಕೆ ಆಮಂತ್ರಿಸುತ್ತಾರೆ. ಕನ್ನಡದಲ್ಲಿಯೂ ಧ್ವನಿ  ಮುದ್ರಣವಿದೆ. ಹಾಗೆಯೇ ಈ ಸೇವೆಯ ಉದ್ದೇಶವನ್ನು ವಿವರಿಸುತ್ತಾರೆ. ಆಮಂತ್ರಣ ಪತ್ರಿಕೆಯ ಹಿಂಬದಿಯಲ್ಲಿಯೂ ಕ್ಯಾಮೆರಾ ಚಿತ್ರ ನಮೂದಿಸಲಾಗಿದೆ. ಆ  ಮೂಲಕ ಆಮಂತ್ರಣ ಪತ್ರಿಕೆ ರೂಪಿಸುವಾಗ ಅಚ್ಚುಕಟ್ಟುತನವನ್ನು ನಿರ್ವಹಿಸಲಾಗಿದೆ.

ಸರ್ಕಾರ ಆಸಕ್ತಿವಹಿಸಿ ಕೆಲಸ ಮಾಡಿದರೆ ಹೊಸತನ ಮೂಡಿಬರುತ್ತದೆ ಎನ್ನುವುದಕ್ಕೆ ಇದು ಉತ್ತಮ ಸಾಕ್ಷಿ. ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿದಾಗ ಸಂಗ್ರಹಿಸಿಡಬೇಕು ಎನ್ನುವ ಹಾಗೆ ರೂಪಿಸಿದ ಕೀರ್ತಿ ಸರ್ಕಾರದ್ದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT