ಊಬರ್ ಸೇವೆಯ ಮೊಬೈಲ್ ಆಪ್ 
ಜಿಲ್ಲಾ ಸುದ್ದಿ

ಊಬರ್ ಕಛೇರಿಯ ಮೇಲೆ ಸಾರಿಗೆ ಅಧಿಕಾರಿಗಳಿಂದ ದಾಳಿ

ಸಾರಿಗೆ ಸಂಸ್ಥೆ ಮತ್ತು ಆರ್ ಟಿ ಒ ಅಧಿಕಾರಿಗಳು ಬೆಂಗಳೂರಿನ ಟ್ಯಾಕ್ಸಿ ಸೇವೆ ಊಬರ್ ಕಛೇರಿಯ ...

ಬೆಂಗಳೂರು: ಸಾರಿಗೆ ಸಂಸ್ಥೆ ಮತ್ತು ಆರ್ ಟಿ ಒ ಅಧಿಕಾರಿಗಳು ಬೆಂಗಳೂರಿನ ಟ್ಯಾಕ್ಸಿ ಸೇವೆ ಊಬರ್ ಕಛೇರಿಯ ಮೇಲೆ ಸೋಮವಾರ ದಾಳಿ ನಡೆಸಿದ್ದಾರೆ.

ಸಾರಿಗೆ ಸಂಸ್ಥೆಯ ಜೊತೆ ಈ ಟ್ಯಾಕ್ಸಿ ಸೇವೆಯ ಸಂಸ್ಥೆ ನೊಂದಾಯಿಸಿಕೊಳ್ಳದೆ, ಕಾನೂನು ಬಾಹಿರವಾಗಿ ಚಟುವಟಿಕೆಗಳನ್ನು ನಡೆಸುತ್ತಿರುವುದೇ ಈ ದಾಳಿಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಈ ಸಂಸ್ಥೆಯ ಸೇವೆಯನ್ನು ನಿಷೇಧಿಸಿದ್ದರು ಕೂಡ, ಊಬರ್ ಕ್ಯಾಬ್ ಗಳನ್ನು ನಿರ್ವಹಿಸುತ್ತಿದೆ ಎಂದು ಸಾರಿಗೆ ಆಯುಕ್ತ ರಾಮೇಗೌಡ ತಿಳಿಸಿದ್ದಾರೆ.

ಊಬರ್ ಕ್ಯಾಬ್ ಚಾಲಕ ದೆಹಲಿಯಲ್ಲಿ ಮಹಿಳೆಯೊಬ್ಬರನ್ನು ರೇಪ್ ಮಾಡಿದ ಹಿನ್ನಲೆಯಲ್ಲಿ, ಈ ಸೇವೆಯನ್ನು ನಿಷೇಧಿಸಲಾಗಿತ್ತು. "ಊಬರ್ ನಗರದಲ್ಲಿ ೩೫೦೦ ಕ್ಯಾಬ್ ಗಳನ್ನು ನಿರ್ವಹಿಸುತ್ತಿದೆ. ಇದು ಅತಿ ದೊಡ್ಡ ಸಂಖ್ಯೆ ಹಾಗೂ ಸಾರಿಗೆ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಇತ್ತೀಚಿಗೆ ನಾವು ಆಯೋಜಿಸಿದ್ದ ಕ್ಯಾಬ್ ನಿರ್ವಾಹಕರ ಸಭೆಗೂ ಅವರು ಬಂದಿಲ್ಲ. ನಿಷೇಧದ ನಂತರವೂ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿರುವದರಿಂದ ನಾವು ಅವರ ಕಛೇರಿ ಮೇಲೆ ದಾಳಿ ನಡೆಸಬೇಕಾಯಿತು. ಅಹಿತಕರ ಘಟನೆಗಳಾದರೆ ಅದಕ್ಕೆ ಹೊಣೆಯಾರು" ಎನ್ನುತ್ತಾರೆ ಗೌಡ.

ದಾಳಿಯ ನಂತರ ರಸ್ತೆ ಸಾರಿಗೆ ಸಂಸ್ಥೆ ವರದಿ ಸಿದ್ಧಪಡಿಸುತ್ತಿದ್ದು, ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಂತರ ಊಬರ್ ವಿರುದ್ಧ ಕ್ರಮ ಕೈಗೊಳ್ಳುವುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಸಾರಿಗೆ ಸಂಸ್ಥೆಯ ಜಂಟಿ ಆಯುಕ್ತ ರವಿಂದರ್ ಹೊಳ್ಕಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT