ಜಿಲ್ಲಾ ಸುದ್ದಿ

ಹಿರಿಯ ಪತ್ರಕರ್ತ ಬಾಲಕೃಷ್ಣ ಕಾಕತ್ಕರ್ ನಿಧನ

Lingaraj Badiger

ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಬಾಲಕೃಷ್ಣ ಕಾಕತ್ಕರ್ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈ ಸ್ಟೋರಿಯ ಮೂಲಕ ಮನೆಮಾತಾಗಿದ್ದ ಬಾಲಕೃಷ್ಣ ಅವರು ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಾಗರಬಾವಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ಮೂಲತಃ ಕೋಲಾರದವರಾದ ಬಾಲಕೃಷ್ಣ ಅವರು, ಓರ್ವ ಪುತ್ರನನ್ನು ಅಗಲಿದ್ದು, ಅವರ ಪತ್ನಿ ಮನೋರಮಾ ಅವರು 2007ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

'ವಾರಪತ್ರಿಕೆ' ಮೂಲಕ ಪತ್ರಿಕಾರಂಗಕ್ಕೆ ಕಾಲಿಟ್ಟದ್ದ ಬಾಲಕೃಷ್ಣ ಅವರು, ಸಿನಿಮಾ ಸೇರಿದಂತೆ ಕನ್ನಡದ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

SCROLL FOR NEXT