ಕೆ ಮರುಳಸಿದ್ಧಪ್ಪ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸೃಜನಶೀಲ ಕಲ್ಪನೆಯಿಂದ ಪುರಾಣ ಕಥೆಗಳು ಹುಟ್ಟುತ್ತವೆ

ಇತಿಹಾಸವನ್ನು ಬೋಧಿಸುವಾಗ ಸಂದರ್ಭ-ಸನ್ನಿವೇಶಗಳನ್ನು ಅರಿತು ಪಾಠ ಮಾಡಬೇಕು ...

ಬೆಂಗಳೂರು: ಇತಿಹಾಸವನ್ನು ಬೋಧಿಸುವಾಗ ಸಂದರ್ಭ-ಸನ್ನಿವೇಶಗಳನ್ನು ಅರಿತು ಪಾಠ ಮಾಡಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಮರುಳಸಿದ್ಧಪ್ಪ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎ ಐ ಎಸ್ ಇ ಸಿ), ಕೇಂದ್ರ ಸರ್ಕಾರ ಪಠ್ಯ ಪುಸ್ತಕಗಳಲ್ಲಿ ತರ್ಕರಹಿತ ಮತ್ತಿ ತಿರುಚಿದ ಇತಿಹಾಸವನ್ನು ಸೇರಿಸುತ್ತಿದೆ ಎಂದು ಆಪಾದಿಸಿ, ಇದರ ವಿರುದ್ಧದ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

"ಉದಾಹರಣೆಗೆ, ವಸಾಹುತುಶಾಹಿಯಿಂದ ಆತ್ಮವಿಶ್ವಾಸ ಕಳೆದುಕೊಂಡು ನರಳುತ್ತಿದ್ದ ಭಾರತೀಯರಿಗೆ ವಿಶ್ವಾಸ ತುಂಬಲಷ್ಟೆ ವಿವೇಕಾನಂದರು ಭಾರತದ ಪ್ರಾಚೀನ ಸಾಧನೆಗಳನ್ನು ವೈಭವೀಕರಿಸಿದ್ದು. ಆದರೆ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಪುರಾಣ ಕಥೆಗಳನ್ನು ಹೇಳಿ ಇತಿಹಾಸವನ್ನು ವೈಭವೀಕರಿಸುವುದು ಸ್ವಪ್ರತಿಷ್ಟೆಯಲ್ಲಿ ಮುಳುಗಿದಂತೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇತಿಹಾಸ ಮತ್ತು ಪುರಾಣದ ನಡುವಿನ ವ್ಯತ್ಯಾಸವನ್ನು ವಿಶದವಾಗಿ ಬಿಚ್ಚಿಟ್ಟ ಬರಹಗಾರ ಪ್ರೊ ಪಿ ವಿ ನಾರಾಯಣ್ "ಕವಿಗಳ ಸೃಜನಶೀಲ ಕಲ್ಪನೆಯೇ ಪುರಾಣ. ಇವುಗಳು ಯಾವಾಗಲೂ ಅತಿಶಯೋಕ್ತಿಯಾಗಿಯೆ ಬಳಕೆಯಾಗಿವೆ. ಆದುದರಿಂದಲೆ ಪ್ರಾಚೀನ ಕವಿಗಳು ವೈಭವಯುತ ಮಹಾ ಕಾವ್ಯಗಳನ್ನು ರಚಿಸಿದ್ದು ಇತಿಹಾಸ ಬೋಧಿಸುವಾಗ, ತನ್ನ ನಂಬಿಕೆಗಳನ್ನು ಬದಿಗಿಟ್ಟು, ತರ್ಕ ಮತ್ತು ವಿಚಾರಪರತೆಗೆ ಬದ್ಧರಾಗಿರಬೇಕು" ಎಂದಿದ್ದಾರೆ.

ಸಮಾವೇಶದಲ್ಲಿ ಪಠ್ಯ ಸಮಿತಿಯ ಮಾಜಿ ಮುಖ್ಯಸ್ಥ ಎಸ್ ಬಾಲಚಂದ್ರ ರಾವ್, ಎ ಐ ಎಸ್ ಇ ಸಿ ನ ಅಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರು ಮತ್ತಿತರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT