ಏ.11 ರಿಂದ ರಾಜ್ಯಾದ್ಯಂತ ಜಾತಿವಾರು ಗಣತಿ ಆರಂಭ 
ಜಿಲ್ಲಾ ಸುದ್ದಿ

ಜಾತಿವಾರು ಮಾಹಿತಿ ನೀಡಲು ಸಿದ್ಧರಾಗಿ

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಜತೆಗೆ ಜಾತಿವಾರು ಮಾಹಿತಿ ಸಂಗ್ರಹಿಸಲು ಮನೆ -ಮನೆ ಸಮೀಕ್ಷೆ ಏ.11 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ...

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಜತೆಗೆ ಜಾತಿವಾರು ಮಾಹಿತಿ ಸಂಗ್ರಹಿಸಲು ಮನೆ -ಮನೆ ಸಮೀಕ್ಷೆ ಏ.11 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ.

  • 11ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ
  • ರಾಜ್ಯದ 6.50 ಕೋಟಿ ಜನರ ಪೈಕಿ 1.31 ಕೋಟಿ ಕುಟುಂಬಗಳು
  • 1.33 ಲಕ್ಷ ಗಣತಿದಾರರು, ಪ್ರತಿ ಗಣತಿದಾರರಿಗೆ 150 ಮನೆ ಟಾರ್ಗೆಟ್
  • 20 ದಿನಗಳ ಗಡುವು, ಗಣತಿಗೆ ರು.189 ಕೋಟಿ ವೆಚ್ಚ
  • ತಪ್ಪು ಮಾಹಿತಿ ನೀಡಿದರೆ ಕಾನೂನು ಕ್ರಮವಿದೆ, ಎಚ್ಚರ ಇರಲಿ

ಮಲೆನಾಡಿನಲ್ಲಿ ಹೆಚ್ಚು
30ಕ್ಕೆ ಮುಗಿಯಬೇಕು
ತಪ್ಪು ಮಾಹಿತಿಗೆ ಕ್ರಮ
  • 55 ಪ್ರಶ್ನೆ, ಉತ್ತರ ಕಡ್ಡಾಯವೇನಿಲ್ಲ ಆಯೋಗ 55 ಪ್ರಶ್ನೆಗಳ `ನಮೂನೆ 3' ಅನ್ನು ಸಿದ್ಧಪಡಿಸಿದೆ. ಇದರಲ್ಲಿ 1ರಿಂದ 31ರವರೆಗಿನ ಪ್ರಶ್ನೆಗಳು ಮಾಹಿತಿ ನೀಡುವವರ ವೈಯಕ್ತಿಕ
  • ವಿವರಗಳಿಗೆ ಸೀಮಿತ.
  • 42ರಿಂದ 55ರವರೆಗಿನ ಪ್ರಶ್ನೆಗಳು ಆತನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳಿಗೆ ಮೀಸಲು.
  • ಸರ್ಕಾರದ ಸವಲತ್ತುಗಳನ್ನು ಪಡೆಯುವ ದೃಷ್ಟಿಯಿಂದ ಪ್ರತಿಯೊಬ್ಬರು ಇಲ್ಲಿನ ಪ್ರಶ್ನೆಗಳಿಗೆ ಮಾಹಿತಿ ನೀಡಲೇಬೇಕು. ಆದರೆ, ಇದು ಕಡ್ಡಾಯವಲ್ಲ.
  • ಜಾತಿ ಅಥವಾ ಧರ್ಮ ಹೇಳಿಕೊಳ್ಳಲು ನಿರಾಕರಿಸಿದರೆ, ಒತ್ತಡ ಮಾಡುವಂತಿಲ್ಲ.
  • ನಿಗದಿಪಡಿಸಿದ ಕೋಡ್‍ಗಳನ್ನು ಬಳಸಬೇಕು. ಪರಿಶಿಷ್ಟ ಜಾತಿ `ಬಿ' ಹಾಗೂ ಪರಿಶಿಷ್ಟ ಪಂಗಡ `ಸಿ' ಪಟ್ಟಿಯಲ್ಲಿ ಬಂದರೆ, ಹಿಂದುಳಿದ ವರ್ಗಗಳು ಸೇರಿದಂತೆ ಉಳಿದ ಎಲ್ಲ
  • ಜಾತಿಗಳನ್ನು `ಎ' ನಮೂನೆಯಲ್ಲಿ ಭರ್ತಿ ಮಾಡಲಾಗುತ್ತದೆ.
  • ಪಟ್ಟಿಯಿಂದ ಬಿಟ್ಟು ಹೋದ ಜಾತಿ ಸಮುದಾಯದವರು ಭಯ ಪಡಬೇಕಿಲ್ಲ.
  • ಗಣತಿ ವೇಳೆ ನೀಡುವ ಮಾಹಿತಿಯನ್ನೆ ದಾಖಲು ಮಾಡಿಕೊಳ್ಳಲು ಆಯೋಗ ಸೂಚಿಸಿದೆ.

ಎಷ್ಟು ಅಧಿಕಾರಿಗಳು...?

30 ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು.10 ಮಹಾನಗರ ಪಾಲಿಕೆ ಆಯುಕ್ತರು, 76 ಉಪ ವಿಭಾಗಾಧಿಕಾರಿಗಳು. 176 ತಹಸೀಲ್ದಾರರು, 8 ವಲಯಗಳ ಜಂಟಿ ಆಯುಕ್ತರು.551 ನಗರಸಭೆ, ಪುರಸಭೆ, ಪಪಂಗಳ ಹಿರಿಯ ಅಧಿಕಾರಿಗಳು.ಒಟ್ಟು 1.33 ಲಕ್ಷ ಸಿಬ್ಬಂದಿ ಸಮೀಕ್ಷೆಯಲ್ಲಿ ಭಾಗವಹಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT