ಏ.11 ರಿಂದ ರಾಜ್ಯಾದ್ಯಂತ ಜಾತಿವಾರು ಗಣತಿ ಆರಂಭ 
ಜಿಲ್ಲಾ ಸುದ್ದಿ

ಜಾತಿವಾರು ಮಾಹಿತಿ ನೀಡಲು ಸಿದ್ಧರಾಗಿ

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಜತೆಗೆ ಜಾತಿವಾರು ಮಾಹಿತಿ ಸಂಗ್ರಹಿಸಲು ಮನೆ -ಮನೆ ಸಮೀಕ್ಷೆ ಏ.11 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ...

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಜತೆಗೆ ಜಾತಿವಾರು ಮಾಹಿತಿ ಸಂಗ್ರಹಿಸಲು ಮನೆ -ಮನೆ ಸಮೀಕ್ಷೆ ಏ.11 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ.

  • 11ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ
  • ರಾಜ್ಯದ 6.50 ಕೋಟಿ ಜನರ ಪೈಕಿ 1.31 ಕೋಟಿ ಕುಟುಂಬಗಳು
  • 1.33 ಲಕ್ಷ ಗಣತಿದಾರರು, ಪ್ರತಿ ಗಣತಿದಾರರಿಗೆ 150 ಮನೆ ಟಾರ್ಗೆಟ್
  • 20 ದಿನಗಳ ಗಡುವು, ಗಣತಿಗೆ ರು.189 ಕೋಟಿ ವೆಚ್ಚ
  • ತಪ್ಪು ಮಾಹಿತಿ ನೀಡಿದರೆ ಕಾನೂನು ಕ್ರಮವಿದೆ, ಎಚ್ಚರ ಇರಲಿ

ಮಲೆನಾಡಿನಲ್ಲಿ ಹೆಚ್ಚು
30ಕ್ಕೆ ಮುಗಿಯಬೇಕು
ತಪ್ಪು ಮಾಹಿತಿಗೆ ಕ್ರಮ
  • 55 ಪ್ರಶ್ನೆ, ಉತ್ತರ ಕಡ್ಡಾಯವೇನಿಲ್ಲ ಆಯೋಗ 55 ಪ್ರಶ್ನೆಗಳ `ನಮೂನೆ 3' ಅನ್ನು ಸಿದ್ಧಪಡಿಸಿದೆ. ಇದರಲ್ಲಿ 1ರಿಂದ 31ರವರೆಗಿನ ಪ್ರಶ್ನೆಗಳು ಮಾಹಿತಿ ನೀಡುವವರ ವೈಯಕ್ತಿಕ
  • ವಿವರಗಳಿಗೆ ಸೀಮಿತ.
  • 42ರಿಂದ 55ರವರೆಗಿನ ಪ್ರಶ್ನೆಗಳು ಆತನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳಿಗೆ ಮೀಸಲು.
  • ಸರ್ಕಾರದ ಸವಲತ್ತುಗಳನ್ನು ಪಡೆಯುವ ದೃಷ್ಟಿಯಿಂದ ಪ್ರತಿಯೊಬ್ಬರು ಇಲ್ಲಿನ ಪ್ರಶ್ನೆಗಳಿಗೆ ಮಾಹಿತಿ ನೀಡಲೇಬೇಕು. ಆದರೆ, ಇದು ಕಡ್ಡಾಯವಲ್ಲ.
  • ಜಾತಿ ಅಥವಾ ಧರ್ಮ ಹೇಳಿಕೊಳ್ಳಲು ನಿರಾಕರಿಸಿದರೆ, ಒತ್ತಡ ಮಾಡುವಂತಿಲ್ಲ.
  • ನಿಗದಿಪಡಿಸಿದ ಕೋಡ್‍ಗಳನ್ನು ಬಳಸಬೇಕು. ಪರಿಶಿಷ್ಟ ಜಾತಿ `ಬಿ' ಹಾಗೂ ಪರಿಶಿಷ್ಟ ಪಂಗಡ `ಸಿ' ಪಟ್ಟಿಯಲ್ಲಿ ಬಂದರೆ, ಹಿಂದುಳಿದ ವರ್ಗಗಳು ಸೇರಿದಂತೆ ಉಳಿದ ಎಲ್ಲ
  • ಜಾತಿಗಳನ್ನು `ಎ' ನಮೂನೆಯಲ್ಲಿ ಭರ್ತಿ ಮಾಡಲಾಗುತ್ತದೆ.
  • ಪಟ್ಟಿಯಿಂದ ಬಿಟ್ಟು ಹೋದ ಜಾತಿ ಸಮುದಾಯದವರು ಭಯ ಪಡಬೇಕಿಲ್ಲ.
  • ಗಣತಿ ವೇಳೆ ನೀಡುವ ಮಾಹಿತಿಯನ್ನೆ ದಾಖಲು ಮಾಡಿಕೊಳ್ಳಲು ಆಯೋಗ ಸೂಚಿಸಿದೆ.

ಎಷ್ಟು ಅಧಿಕಾರಿಗಳು...?

30 ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು.10 ಮಹಾನಗರ ಪಾಲಿಕೆ ಆಯುಕ್ತರು, 76 ಉಪ ವಿಭಾಗಾಧಿಕಾರಿಗಳು. 176 ತಹಸೀಲ್ದಾರರು, 8 ವಲಯಗಳ ಜಂಟಿ ಆಯುಕ್ತರು.551 ನಗರಸಭೆ, ಪುರಸಭೆ, ಪಪಂಗಳ ಹಿರಿಯ ಅಧಿಕಾರಿಗಳು.ಒಟ್ಟು 1.33 ಲಕ್ಷ ಸಿಬ್ಬಂದಿ ಸಮೀಕ್ಷೆಯಲ್ಲಿ ಭಾಗವಹಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT