ಹಗರಣ (ಸಾಂದರ್ಭಿಕ ಚಿತ್ರ ) 
ಜಿಲ್ಲಾ ಸುದ್ದಿ

ರಾಮ-ಕೃಷ್ಣನ ಲೆಕ್ಕ ಕಳ್ಳಗಂಟಿನ ನಂಟು

ಅಭಿವೃದ್ಧಿ ಯೋಜನೆಗೆ ಬಳಕೆಯಾಗಬೇಕಿದ್ದ ರು. 134 ಕೋಟಿ ಅನುದಾನವನ್ನು `ಕಳ್ಳಗಂಟು' ಮಾಡಿ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿದ್ದಲ್ಲದೇ...

ಬೆಂಗಳೂರು: ಅಭಿವೃದ್ಧಿ ಯೋಜನೆಗೆ ಬಳಕೆಯಾಗಬೇಕಿದ್ದ ರು. 134 ಕೋಟಿ ಅನುದಾನವನ್ನು `ಕಳ್ಳಗಂಟು' ಮಾಡಿ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿದ್ದಲ್ಲದೇ ಕೋಟ್ಯಂತರ ರು.ದುರುಪಯೋಗ ಮಾಡಿದ್ದ ಗ್ರಾಮೀಣ ನೀರು  ಸರಬರಾಜು ಇಲಾಖೆ ಉಪ ಕಾರ್ಯದರ್ಶಿಯ ಖದೀಮತನವನ್ನು ಖುದ್ದು ಗ್ರಾಮೀಣಾಭಿವೃದ್ಧಿ  ಸಚಿವರೇ ಪತ್ತೆ ಹಚ್ಚಿದ್ದಾರೆ. ಆಂಧ್ರ ಬ್ಯಾಂಕ್‍ನಲ್ಲಿ ನಾಲ್ಕು ವರ್ಷಗಳ ಹಿಂದೆ ಠೇವಣಿ ಖಾತೆ ತೆರೆದು ಕಳ್ಳಗಂಟು ಬಚ್ಚಿಟ್ಟಿದ್ದ ರಾಮಕೃಷ್ಣ 9 ಬಾರಿ ವಹಿವಾಟು ನಡೆಸಿದ್ದಾನೆ. ಸುಮಾರು ರು. 5,79,97,860 ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆಂತರಿಕ ಆರ್ಥಿಕ ಸಲಹೆಗಾರರು, ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಸಚಿವರ ಗಮನಕ್ಕೆ ಬಾರದಂತೆ ನಾಲ್ಕು ವರ್ಷ `ವ್ಯವಹಾರ' ನಡೆಸಿದ್ದು ಎಲ್ಲರ
ಹುಬ್ಬೇರಿಸಿದೆ. ಇಲಾಖೆಯಲ್ಲಿ ಹಣ ಕಾಸು ಅಶಿಸ್ತಿಗೆ ಕಾರಣೀಕರ್ತನಾದ ಈ ಅಧಿಕಾರಿಯನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಿ, ಲೋಕಾ ಯುಕ್ತ ತನಿಖೆ ನಡೆಸುವಂತೆ ಸಚಿವ ಎಚ್.ಕೆ.ಪಾಟೀಲ್ ಆದೇಶಿಸಿದ್ದಾರೆ.

ಶೀಘ್ರಲಿಪಿಕಾರ: ಕುತೂಹಲಕಾರಿ ಸಂಗತಿ ಎಂದರೆ, ಈತ ಆರಂಭದಲ್ಲಿ ರೇಷ್ಮೆ ಇಲಾಖೆಯಲ್ಲಿ ಶೀಘ್ರ ಲಿಪಿಕಾರನಾಗಿ ಕೆಲಸಕ್ಕೆ ಸೇರಿದ್ದ. ಆದರೆ ಶರವೇಗದಲ್ಲಿ ಬಡ್ತಿ ಪಡೆಯುತ್ತಾ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿಕೊಂಡಿದ್ದ. ಕಳೆದ 20 ವರ್ಷದಿಂದ ಈತ ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲೇ ಬಿಡಾರ ಹೂಡಿದ್ದು, 8 ವರ್ಷದಿಂದಇಲಾಖೆಗೆ ತನ್ನ ಆಸ್ತಿ ವಿವರದ ಲೆಕ್ಕ ಕೊಟ್ಟಿಲ್ಲ. ಕಾಲ ಕಾಲಕ್ಕೆ ಪಂಚಾಯಿತ್ ರಾಜ್ ಇಲಾಖೆಗೆ ಬರುವ ಪ್ರಧಾನ ಕಾರ್ಯದರ್ಶಿಗಳೂ ಸೇರಿದಂತೆ ಆಡಳಿತ ಶಾಹಿಯ `ಮುಖ್ಯ'ರ ಜತೆ ನಿಕಟ ಸಂಪರ್ಕ ಸಾಧಿಸುವ `ಕೌ'ಶಲ್ಯ ಪಡೆದಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT