ಪರಪ್ಪನ ಅಗ್ರಹಾರ ಜೈಲು 
ಜಿಲ್ಲಾ ಸುದ್ದಿ

ಪರಪ್ಪನ ಅಗ್ರಹಾರ ಜೈಲಿಂದ ಕೊಲೆ ಅಪರಾಧಿ ಪರಾರಿ

ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಕಣ್ಣು ತಪ್ಪಿಸಿ, ಚಾಣಾಕ್ಷತನದಿಂದ ಕೈದಿಯೊಬ್ಬ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ...

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಕಣ್ಣು ತಪ್ಪಿಸಿ, ಚಾಣಾಕ್ಷತನದಿಂದ ಕೈದಿಯೊಬ್ಬ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕೈದಿಗಳನ್ನು ನೋಡಲು ಬರುವ ಸಂದರ್ಶಕರಿಗೆ ಪರಪ್ಪನ ಅಗ್ರಹಾರ ಪೊಲೀಸರು ವಿತರಿಸುವ ಗೇಟ್‌ಪಾಸ್‌ಗೆ ಹಾಕುವ ಸೀಲನ್ನು ಬಳಸಿಕೊಂಡು, ಈ ಜೈಲಲ್ಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಕೊಲೆ ಅಪರಾಧಿ ಮಂಜುನಾಥ(33) ಚಾಣಾಕ್ಷತನದಿಂದ ಪಾರಾಗಿದ್ದಾನೆ.

ಸಂದರ್ಶಕನಂತೆ ನಟಿಸಿ, ಜೈಲು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಜೈಲಿನಿಂದ ಪರಾರಿಯಾಗಿದ್ದಾನೆ. ಶುಕ್ರವಾರ ಸಂಜೆ 5 ಗಂಟೆಗೆ ಕೈದಿಗಳ ರೋಲ್‌ ಕಾಲ್‌ ಕರೆಯಲಾದಾಗ ಕೈದಿ ಮಂಜುನಾಥ ತಪ್ಪಿಸಿಕೊಂಡಿರುವುದು ಬೆಳಕಿಗೆ ಬಂತು.

ಕೂಡಲೇ ಜೈಲು ಅಧಿಕಾರಿಗಳು ಸಿಬ್ಬಂದಿಗಳನ್ನು ಜಾಗೃತಗೊಳಿಸಿ ಕಟ್ಟೆಚ್ಚರ ನೀಡಿದರು. ಜೈಲಿನೊಳಗಿನ ಸಿಸಿಟಿವಿಯಲ್ಲಿ ಮುದ್ರಿತವಾದ ಚಿತ್ರಿಕೆಗಳ ದಾಖಲೆಯನ್ನು ಪರಿಶೀಲಿಸಿದಾಗ ಕೈದಿ ಮಂಜುನಾಥನು ಇತರ ಸಂದರ್ಶಕರಂತೆ ಜೈಲಿನಿಂದ ನಿರ್ಗಮಿಸುತ್ತಿರುವುದು ಕಂಡು ಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ತೀವ್ರ ತುರ್ತು ತನಿಖೆಯನ್ನು ಕೈಗೊಂಡಿರುವ ಅಧಿಕಾರಿಗಳು ಕೈದಿ ಮಂಜುನಾಥನನ್ನು ಶೋಧಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೈಲಿನಿಂದ ಪರಾರಿಯಾಗಲು ಆತನಿಗೆ ಪೊಲೀಸರು ನೀಡುವ ಗೇಟ್‌ ಪಾಸಿನ ಸೀಲ್‌ ಹೇಗೆ ದೊರಕಿತು ಮತ್ತು ಸಾಮಾನ್ಯ ಉಡುಪುಗಳು ಆತನಿಗೆ ಎಲ್ಲಿಂದ ಸಿಕ್ಕಿದವು, ಇವುಗಳನ್ನು ಆತನೇ ಖುದ್ದು ಪಡೆದುಕೊಂಡನೇ ಅಥವಾ ಜೈಲು ಸಿಬಂದಿಗಳಲ್ಲಿ ಯಾರಾದರೂ ಆತನಿಗೆ ಅವುಗಳನ್ನು ಒದಗಿಸಿದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT