ಚಂದ್ರ ಶೇಖರ್ ಕಂಬಾರ 
ಜಿಲ್ಲಾ ಸುದ್ದಿ

ಭಾರತದ ರೈತನನ್ನು ಅಳವಿನಂಚಿಗೆ ದೂಡಿದ ಜಾಗತೀಕರಣ; ಚಂದ್ರಶೇಖರ್ ಕಂಬಾರ

ರೈತ ಭಾರತವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿ ಇಂದು ನಮಗೆ ನಿರ್ಮಾಣವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ....

ಬೆಂಗಳೂರು: ರೈತ ಭಾರತವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿ ಇಂದು ನಮಗೆ ನಿರ್ಮಾಣವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಬೇಸರ ವ್ಯಕ್ತಪಡಿಸಿದರು. ಅನಿಕೇತನ ಕನ್ನಡ ಬಳಗ ಹಾಗೂ ಅಂಕಿತ ಪುಸ್ತಕ ಪ್ರಕಾಶನ ಭಾನುವಾರ ವಾಡಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂಬಾರ ಅವರ `ಶಿವನ ಡಂಗುರ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಇಂದು ರೈತನೇ ಭೂಮಿ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ವಸಾಹತುಶಾಹಿ ಹಾಗೂ ಜಾಗತೀಕರಣದ ವ್ಯವಸ್ಥೆಯಲ್ಲಿ ನಾವು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಜಾಗತೀಕರಣದ ಹಿಂದೆ ಬಿದ್ದು ದೇಶ ಎಲ್ಲವನ್ನೂ ಕಳೆದುಕೊಳ್ಳುವ ದಿನ ಬರಲಿದೆ. ಇಂದಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಇಂಗ್ಲಿಷ್ ಮಯವಾಗಿದೆ. ಜಾಗತೀಕರಣದ ಭಾರತ ಎಲ್ಲವನ್ನು ಕಳೆದುಕೊಂಡು ರೈತ ಭಾರತವನ್ನೂ ಅಳಿವಿನ ಅಂಚಿಗೆ ತಳ್ಳುತ್ತಿದೆ. ವಿಪರ್ಯಾಸವೆಂದರೆ ಇಂದು ರೈತರೇ ತಮ್ಮ ಭೂಮಿಗೆ ಬೆಲೆ ಕಟ್ಟುತ್ತಿದ್ದಾರೆ. ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ಸರ್ಕಾರ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದೆ. ರೈತ ಭಾರತ ಜಾಗತೀಕರಣದ ವಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆ ಮಾಡಿದ ಕವಿ ಡಾ. ಸಿದ್ದಲಿಂಗಯ್ಯ ಮಾತನಾಡಿ, ಶೋಷಣೆರಹಿತ, ವರ್ಗರಹಿತ ಸಮಾಜ ಕಟ್ಟುವ ಪರಿಕಲ್ಪನೆ ಕಂಬಾರ ಅವರಿಗಿದೆ. ಅವರ ಆ ಚಿಂತನೆ ಭಾರತ ಮಾತ್ರವಲ್ಲ ಪ್ರಪಂಚಕ್ಕೇ ಅನ್ವಯವಾಗುತ್ತದೆ. ದೇಶೀ ಚಿಂತಕರ ಮುಂಚೂಣಿಯಲ್ಲಿ ಕಂಬಾರರು ಇದ್ದಾರೆ ಎಂದರೆ ಉತ್ಪ್ರೇಕ್ಷೆಯಲ್ಲ ಎಂದರು. ಕಂಬಾರ, ಪೌರಾಣಿಕ, ಜಾಗತಿಕ ಶಿವಪುರ ಕಂಡಿದ್ದಾರೆ. ಅವರ ಬದಲಾದ ಶಿವಪು ರದಲ್ಲಿ ದೇವತೆಗಳು ಚುನಾವಣೆಗಳ ಬಗ್ಗೆ ಚರ್ಚಿಸು ತ್ತಾರೆ. ಅಲ್ಲಿ ದಲಿತ ಚಳವಳಿ, ರೈತ ಚಳ ವಳಿ ಪ್ರವೇಶ ಮಾಡಿವೆ. ಜಾಗತೀಕರಣದ ದುಷ್ಪರಿ ಣಾಮವನ್ನು ಈ ಕೃತಿ ಮೂಲಕ ಬಿಚ್ಚಿಟ್ಟಿದ್ದಾರೆ ಎಂದರು.

ವಿಮರ್ಶಕ ಡಾ. ನರಹಳ್ಳಿ ಬಾಲ ಸುಬ್ರಮಣ್ಯ ಮಾತನಾಡಿ, ನಾಡಿನ ಪ್ರಮುಖ ಕಾದಂಬರಿರಕಾರರಲ್ಲಿ ಕಂಬಾರರು ಒಬ್ಬರು. ಆಧುನಿಕ ಲೇಖಕರನ್ನು ಗಮನಿಸಿದಾಗ ಹೆಚ್ಚು ರಾಜಕೀಯ ಪ್ರಜ್ಞೆ ಒಳಗೊಂಡ ಲೇಖಕ, ಆದರೆ ಅವರ ಕಾದಂಬರಿಗಳು ಹೆಚ್ಚು ವಿಮರ್ಶೆಗೊಳಪಟ್ಟಿಲ್ಲ ಎಂದು ಅಭಿಪ್ರಾಯಪಟ್ಟರು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ಮಾಯಣ್ಣ ಎಂ.ತಿಮ್ಮಯ್ಯ, ಪ್ರಕಾಶ್ ಕಂಬತ್ತಳ್ಳಿ ಮತ್ತಿತರರು ಇದ್ದರು.

ಇಂದು ರೈತನೇ ಭೂಮಿ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ವಸಾಹತುಶಾಹಿ ಹಾಗೂ ಜಾಗತೀಕರಣದ ವ್ಯವಸ್ಥೆಯಲ್ಲಿ ನಾವು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ.

ಇಂದು ರೈತರೇ ತಮ್ಮ ಭೂಮಿಗೆ ಬೆಲೆ ಕಟ್ಟುತ್ತಿದ್ದಾರೆ. ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ಸರ್ಕಾರ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT