(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

2016 ಮಾರ್ಚ್ ಗೆ ಮೆಟ್ರೊ ಮೊದಲ ಹಂತ ಪೂರ್ಣ

ಮುಂಬರುವ 2016ರ ಮಾರ್ಚ್ ವೇಳೆಗೆ `ನಮ್ಮ ಮೆಟ್ರೊ'ದ ಮೊದಲ ಹಂತ ಪೂರ್ಣಗೊಳ್ಳಲಿದ್ದು, ಜನ ಸಂಚಾರಕ್ಕೆ ಮುಕ್ತವಾಗಲಿದೆ...

ಬೆಂಗಳೂರು: ಮುಂಬರುವ 2016ರ ಮಾರ್ಚ್ ವೇಳೆಗೆ `ನಮ್ಮ ಮೆಟ್ರೊ'ದ ಮೊದಲ ಹಂತ ಪೂರ್ಣಗೊಳ್ಳಲಿದ್ದು, ಜನ ಸಂಚಾರಕ್ಕೆ ಮುಕ್ತವಾಗಲಿದೆ. ಈ ನಡುವೆ ನಗರದ ವಿವಿಧ ಭಾಗಗಳಲ್ಲಿ `ಸುರಂಗ' ಕೊರೆಯುವ ಕೆಲಸ ನಿರ್ವಹಿ ಸುತ್ತಿರುವ `ಟನಲ್ ಬೋರಿಂಗ್ ಮಷಿನ್' (ಟಿಬಿಎಂ)ಗಳು ಸಹ ಫೆಬ್ರುವರಿ ಅಂತ್ಯಕ್ಕೆ ಸುರಂಗ ಕೊರೆಯುವ ಕಾರ್ಯವನ್ನು ಪೂರ್ಣಗೊಳಿಸಲಿವೆ.

ಒಟ್ಟಾರೆ ನಾಲ್ಕು ಸುರಂಗ ಕೊರೆಯುವುದು ಸೇರಿದಂತೆ ನಮ್ಮ ಮೆಟ್ರೊದ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಲಿದೆ. ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‍ಸಿ) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‍ಸಿಂಗ್ ಖರೋಲಾ ವಿಶ್ವಾಸ ವ್ಯಕ್ತಪಡಿಸಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲೆಲ್ಲಿ ಕಾಮಗಾರಿ ಮುಕ್ತಾಯವಾಗಿದೆ ಅಲ್ಲಿ ಪ್ರಾಯೋಗಿಕವಾಗಿ ರೈಲುಗಳನ್ನು ಓಡಿಸುವ ಕೆಲಸ ನಡೆಯುತ್ತಿದೆ ಎಂದರು.

ಯಶಸ್ವಿಯಾಗಿ ಹೊರಬಂದ ಟಿಬಿಎಂ: ಕೆ.ಆರ್. ಮಾರುಕಟ್ಟೆಯಿಂದ ಮೆಜೆಸ್ಟಿಕ್ ಮಾರ್ಗವಾಗಿ ಕೊರೆ ಯುತ್ತಿದ್ದ ಸುರಂಗ ಮಾರ್ಗ ಚಿಕ್ಕ ಪೇಟೆವರೆಗೆ ಸಾಗಿದೆ. ಸೋಮವಾರ ಚಿಕ್ಕಪೇಟೆ ಬಳಿ `ಕೃಷ್ಣ' (ಸುರಂಗ ಮಾರ್ಗದ ಹೆಸರು) ಟಿಬಿಎಂ ಯಶಸ್ವಿಯಾಗಿ ಹೊರಬಂದಿತು. ಇದು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಯಿತು. ಕಳೆದ 19 ತಿಂಗಳಿಂದ ನಿರಂತರ ಕಾಮಗಾರಿಯ ಬಳಿಕ 435 ಮೀ. ಉದ್ದದ ಸುರಂಗ ಮಾರ್ಗ ಚಿಕ್ಕಪೇಟೆವರೆಗೆ ಯಶಸ್ವಿಯಾಗಿ ಸಾಗಿದೆ. ಯಂತ್ರಹೊರಬಂದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿಹಿ ಹಂಚಿ ಸಂಭ್ರಮ  ಆಚರಿಸಿದರು.

ಈ ಸುರಂಗಮಾರ್ಗಗಳ ಬಗ್ಗೆ ಪ್ರತಿಕ್ರಿಯಿಸಿದ ಕರೋಲಾ, ಈ ಯಂತ್ರ `ಕೃಷ್ಣ' ಒಂದೂವರೆ ತಿಂಗಳ ನಂತರ ಚಿಕ್ಕಪೇಟೆಯಿಂದ ಮೆಜೆಸ್ಟಿಕ್ ಕಡೆಗೆ ಸಾಗಲಿದೆ. ಕೃಷ್ಣ ಮತ್ತು ಕಾವೇರಿ ಮೆಷಿನ್ ಗಳು ಚಿಕ್ಕಪೇಟೆಯಿಂದ ಮೆಜೆಸ್ಟಿಕ್ ಗೆ ಸಾಗಬೇಕಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಎಲ್ಲರನ್ನೂ ಕಾಯಿಸುತ್ತಿದ್ದ ಪುಟಿನ್ ಪ್ರಧಾನಿ ಮೋದಿಗಾಗಿ 10 ನಿಮಿಷಗಳ ಕಾಲ ಕಾರಿನಲ್ಲಿ ಕಾದು ಕುಳಿತ್ತಿದ್ದರು, Video!

ಧರ್ಮಸ್ಥಳದ ವಿರುದ್ಧ ಬಿಜೆಪಿಯಿಂದಲೇ ಷಡ್ಯಂತ್ರ: ಡಿಕೆ ಶಿವಕುಮಾರ್

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!

ಸೌಜನ್ಯ ಹೆಸರು ಹೇಳಿ ದುಡ್ಡು ಮಾಡಿದೆ ಎಂದು ನಿಮ್ಮ ಪಕ್ಷದವರೇ ಟೀಕಿಸಿದರು: ವಿಜಯೇಂದ್ರಗೆ ಸೌಜನ್ಯ ತಾಯಿ ತರಾಟೆ

SCROLL FOR NEXT