ಬೌದ್ಧ ಗುರು ದಲೈಲಾಮಾ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ವ್ಯತ್ಯಾಸ, ವೈರುಧ್ಯಗಳ ಮರೆತರೆ ಮಾತ್ರ ಶಾಂತಿ: ದಲೈಲಾಮ

ನಂಬಿಕೆ, ಧರ್ಮ, ವಯಸ್ಸು , ಶಿಕ್ಷಣ, ಸಾಮಾಜಿಕವಾಗಿ ಮನುಷ್ಯರಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರಿಂದಲೇ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತಿವೆ. ಜನರು ಈ ವ್ಯತ್ಯಾಸಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು. ಇಲ್ಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರು...

ಬೆಂಗಳೂರು: ನಂಬಿಕೆ, ಧರ್ಮ, ವಯಸ್ಸು , ಶಿಕ್ಷಣ, ಸಾಮಾಜಿಕವಾಗಿ ಮನುಷ್ಯರಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರಿಂದಲೇ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತಿವೆ. ಜನರು ಈ ವ್ಯತ್ಯಾಸಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು. ಇಲ್ಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರು ತಾಯಿ ಎದೆಹಾಲು ಕುಡಿದು ಬೆಳೆದಿ ದ್ದಾರೆ ಎಂದು ಶಾಂತಿದೂತ ಬೌದ್ಧ ಗುರು ದಲೈಲಾಮಾ ಹೇಳಿದರು.

ಬೆಂಗಳೂರಿನಲ್ಲಿ ಏಷ್ಯನ್ ಆರಬ್ ಚೇಂಬರ್ ಆಫ್ ಕಾಮರ್ಸ್' ಹಮ್ಮಿಕೊಂಡಿದ್ದ `ಜಾಗತಿಕ ಶಾಂತಿ ಆರ್ಥಿಕ ಸಮ್ಮೇಳನ'ದಲ್ಲಿ ಮಾತನಾಡಿದ ಅವರು, ``ದೇಶ, ಧಾರ್ಮಿಕ ಆಸಕ್ತಿ ಮೊದಲು, ನಂತರ ಜಾಗತಿಕ ಆಸಕ್ತಿ ಬೆಳೆಸಿಕೊಳ್ಳ ಬೇಕು. ಇದು ಶಾಂತಿಯ ಮೂಲ ಮಂತ್ರ. ಒಂದು ದೇಶದಲ್ಲಿ ವಿವಿಧ ರೀತಿಯ ಜನಾಂಗದವರನ್ನು ಮತ್ತು ಒಂದೇ ಭಾಷೆಯಲ್ಲಿ ಹಲವು ಮುಖಗಳನ್ನು ನಾವು ಕಾಣಬಹುದು. ಆದರೆ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಶಾಂತಿಯ ಸ್ವರೂಪ ಒಂದೇ ಎಂದು ದಲೈಲಾಮಾ ಪ್ರತಿಪಾದಿಸಿದರು.

ಇಂದಿನ ಶಿಕ್ಷಣ ಮಾನವಿಯ ಮೌಲ್ಯ ತಿಳಿಸುವ ಶಿಕ್ಷಣ ವ್ಯವಸ್ಥೆಯಾಗಿ ಉಳಿದಿಲ್ಲ . ನೈಜ ಸಂಬಂಧ ಬೆಳೆಸುವ ಶಿಕ್ಷಣ ವ್ಯವಸ್ಥೆ ಯುವ ಪೀಳಿಗೆಗೆ ಅವಶ್ಯವಿದೆ ಎಂದು ಹೇಳಿದರು.
ಏಷ್ಯನ್-ಅರಬ್ ಚೇಂಬರ್ ಆಫ್ ಕಾಮರ್ಸ್ ಕಾರ್ಯ ನಿರ್ವಾಹಕ ನಿರ್ದೇಶಕ ಆಸಿಫ್ ಇಕ್ಬಾಲ್, ``ವಿಶ್ವವೇ ಇಂದು ಭಯೋತ್ಪಾದಕರ ಮುಷ್ಟಿಯಲ್ಲಿ ದ್ದು ಈ ಹಿಡಿತದಿಂದ ಹೊರಬರ
ಬೇಕಾದ ಅನಿವಾರ್ಯತೆ ಇದೆ. ಸಾಮಾನ್ಯ ಮುಸ್ಲಿಮರನ್ನು ಶಿಕ್ಷಿತರನ್ನಾಗಿಸುವುದು ಮತ್ತು ಮುಸ್ಲಿಂ ಹಾಗೂ ಮುಸ್ಲಿಮೇತರ ಸಮು ದಾಯದಲ್ಲಿ ಉಗ್ರಗಾಮಿತ್ವಉತ್ತೆ ೀಜಿಸುವ ಪ್ರವೃತ್ತಿಗೆ ಕಡಿವಾಣ ಹಾಕುವುದು ಮುಖ್ಯೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT