ಕರಗದೆ ಹಾಗೆಯೇ ಉಳಿದುಕೊಂಡಿರುವ ಗಣೇಶ ಮೂರ್ತಿಗಳು 
ಜಿಲ್ಲಾ ಸುದ್ದಿ

3 ತಿಂಗಳಾದ್ರೂ ಮೂರ್ತಿ ಕರಗಲಿಲ್ಲ!

ಗಣೇಶ ಚತುರ್ಥಿ ಕಳೆದು 3 ತಿಂಗಳು ಕಳೆದರೂ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿರುವ ಗಣೇಶನ...

ಬೆಂಗಳೂರು: ಗಣೇಶ ಚತುರ್ಥಿ ಕಳೆದು 3 ತಿಂಗಳು ಕಳೆದರೂ ಪ್ಲಾಸ್ಟರ್ ಆಫ್  ಪ್ಯಾರೀಸ್‍ನಿಂದ ತಯಾರಿಸಿರುವ ಗಣೇಶನ ಮೂರ್ತಿಗಳ ಅವಶೇಷಗಳು ಇನ್ನೂ ಕೆರೆಯಲ್ಲಿ  ಹಾಗೆಯೇ ಉಳಿದಿವೆ.

ಬಿಬಿಎಂಪಿ ಅಧಿಕಾರಿಗಳು ಗಣೇಶನ ಮೂರ್ತಿ ವಿಸರ್ಜನೆ ಕುರಿತು ಜನರಲ್ಲಿ ಅದೆಷ್ಟೋ ಜಾಗೃತಿ  ಮೂಡಿಸಿದರೂ ಫಲಿತಾಂಶ ಮಾತ್ರ  ಶೂನ್ಯವಾಗಿದೆ.

ಗಣೇಶನ ಹಬ್ಬ ಮುಗಿದ ನಂತರ ಜನರನ್ನು ಪ್ರಶ್ನಿಸಿದರೆ ಕೆರೆಯಲ್ಲಿ ನೀರು ಕಡಿಮೆ ಇರುವುದರಿಂದ ಮೂರ್ತಿ ಮುಳುಗಿಲ್ಲ ಎನ್ನುವ ಸಬೂಬುಗಳು ಕೇಳಿಬಂದಿದ್ದವು. ಆದರೆ   ಬೆಂಗಳೂರಿನ ಕೆರೆಗಳು ಕಳೆದೆರಡು ತಿಂಗಳಿನಿಂದ ಧಾರಾಕಾರ ಮಳೆಯನ್ನು ಕಂಡರೂ  ಮೂರ್ತಿಗಳು ತಮ್ಮ ಜಾಗವನ್ನು ತೊರೆದಿಲ್ಲ. ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿ  ಮಾಯವಾಗಿದೆ. ಆದರೆ, ಎಲ್ಲೆಂದರಲ್ಲಿ ಮೂರ್ತಿಗಳ ವಿವಿಧ ಭಾಗಗಳು ಗೋಚರಿಸುತ್ತಿವೆ. ಅವು  ಕರಗುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಕ್ರೇನ್‍ಗಳನ್ನು ಬಳಸಿ  ಸ್ಥಳಾಂತರಿಸಿದ್ದರೂ ನೂರಾರು ಗಣಪತಿ  ವಿಗ್ರಹಗಳ ಅವಶೇಷಗಳು ಹಾಗೆಯೇ ಉಳಿದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT