(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಕಾಗದಕ್ಕಾಗಿ ಮರಗಳ ಸರ್ವನಾಶ ಮಠದಿಂದ ಪ್ರಕಾಶನ ಪ್ರಾಯಶ್ಚಿತ್ತ

ಸಮಾಜದಲ್ಲಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತ ಪಟ್ಟುಕೊಳ್ಳುವುದು ಸಹಜ. ಆದರೆ ಪ್ರಕಾಶನವೊಂದು ನೂರಾರು ಪುಸ್ತಕಗಳನ್ನು ಮುದ್ರಿಸಿದ್ದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡ ಘಟಯನೆಯನ್ನು ಎಲ್ಲಾದರು ನೋಡಿದ್ದೀರಾ? ಹೌದು. ಇಂತಹದ್ದೊಂದು ವಿಶೇಷ...

ಬೆಂಗಳೂರು: ಸಮಾಜದಲ್ಲಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತ ಪಟ್ಟುಕೊಳ್ಳುವುದು ಸಹಜ. ಆದರೆ ಪ್ರಕಾಶನವೊಂದು ನೂರಾರು ಪುಸ್ತಕಗಳನ್ನು ಮುದ್ರಿಸಿದ್ದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡ ಘಟಯನೆಯನ್ನು ಎಲ್ಲಾದರು ನೋಡಿದ್ದೀರಾ? ಹೌದು. ಇಂತಹದ್ದೊಂದು ವಿಶೇಷ  ಸಂಪ್ರದಾಯಕ್ಕೆ ನಗರದ ಗಿರಿನಗರದಲ್ಲಿರುವ ಶ್ರೀ ರಾಮಚಂದ್ರಾಪುರ ಮಠ ಚಾಲನೆ ನೀಡಿದೆ.

ಶನಿವಾರ ಮಠದ ಪ್ರಾಂಗಣದಲ್ಲಿ ಆಯೋಜಿಸಿದ್ದ ಪ್ರಕಾಶ ನಾಮಾ ನೋತ್ಸವ ಕಾರ್ಯಕ್ರಮದಲ್ಲಿ `ಪ್ರಕಾಶನ ಪ್ರಾಯಶ್ಚಿತ್ತ' ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಭಕ್ತರಿಗೆ ಪರಿಚಯಿಸಲಾಯಿತು. ಕಾಗದ ತಯಾರಿಕೆಗೆ ಜಗತ್ತಿನಾದ್ಯಂತ ಮರಗಳನ್ನು ಕಡಿಯಲಾಗುತ್ತಿದೆ. ಆದ್ದರಿಂದ ಪುಸ್ತಕಗಳ ಉಪಯೋಗ ಪಡೆದುಕೊಳ್ಳುವ ಓದುಗ ಮತ್ತು ಪೂರೈಸುವ ಪ್ರಕಾಶನ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.

ಇದಕ್ಕೆ ಪರಿಹಾರವಾಗಿ ಕೈಲಾದಷ್ಟು ಮರಗಳನ್ನು ಬೆಳೆಸುವ ಯೋಜನೆ ಹಮ್ಮಿಕೊಳ್ಳಬೇಕು ಎಂಬುದೇ ಈ ಕಾರ್ಯಕ್ರಮದ ತಿರುಳು ಮತ್ತು ಮಠದ ನಿಲುವು. ಪ್ರಸಕ್ತ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಪರಿಸರದಲ್ಲಿ ಭಾರತೀ ಪ್ರಕಾಶನದ ವತಿಯಿಂದ ಮೊದಲ ಹಂತವಾಗಿ ಸಾವಿರ ಸಸಿಗಳನ್ನು ನೆಡಲಾಗುತ್ತದೆ.

ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿ ಗಜಾನನ ಶರ್ಮ ಮಾತನಾಡಿ, ಪ್ರಪಂಚದಲ್ಲಿ 40 ಲಕ್ಷ ಟನ್ ಕಾಗದ ತಯಾರಾಗುತ್ತಿದೆ. ದಿನಕ್ಕೆ ಎರಡೂವರೆ ಕೋಟಿ ಮರಗಳನ್ನು ಕಡಿಯಲಾಗುತ್ತಿದೆ. ಅಂದರೆ ಪ್ರತಿ ಸೆಕೆಂಡ್‍ಗೆ 289 ಮರಗಳು ನಾಶವಾಗುತ್ತಿವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT